ಪತ್ನಿ ಮೇಲೆ ಕೋಪ: ಬುದ್ದಿ ಕಲಿಸಲು 'ಅದನ್ನೇ' ಕತ್ತರಿಸಿಕೊಂಡ ಪತಿ!

ಪತ್ನಿ ಮೇಲಿನ ಕೋಪಕ್ಕೆ ವ್ಯಕ್ತಿಯೋರ್ವ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಧೇಪುರ(ಬಿಹಾರ): ಪತ್ನಿ ಮೇಲಿನ ಕೋಪಕ್ಕೆ ವ್ಯಕ್ತಿಯೋರ್ವ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಮುರಳಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪತ್ನಿ ತಿಳಿಸದೆ ತನ್ನ ತಾಯಿಯ ಮನೆಗೆ ಹೋಗಿದ್ದರಿಂದ ಕೋಪಗೊಂಡ 27 ವರ್ಷದ ಕೃಷ್ಣ ಬಸುಕಿ ಎಂಬಾತ ಖಾಸಗಿ ಅಂಗವನ್ನು ಕತ್ತರಿಸಿ ಕುಲದೇವತೆಗೆ ಅರ್ಪಿಸಿದ್ದಾನೆ. ಈ ಘಟನೆಯ ಬಳಿಕ ಕೃಷ್ಣನನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪತ್ನಿ ತನಗೆ ಹೇಳದೆ ತವರು ಮನೆಗೆ ಹೋಗಿರುವ ವಿಷಯ ಶುಕ್ರವಾರ ತಡರಾತ್ರಿ ಕೃಷ್ಣಾ ಬಸುಕಿಗೆ ತಿಳಿಯಿತು. ಇದರಿಂದ ಕೋಪಗೊಂಡ ಆತ ಹರಿತವಾದ ಆಯುಧದಿಂದ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾನೆ. ಇದರ ನಂತರ, ಕತ್ತರಿಸಿದ ಖಾಸಗಿ ಭಾಗವನ್ನು ಸ್ವಂತ ಕುಲದೇವತೆಯ ಸ್ಥಳದಲ್ಲಿ ಅರ್ಪಿಸಿದ್ದಾನೆ.

ಕೃಷ್ಣ ಬಸುಕಿ ಪಂಜಾಬ್‌ನ ಮಂಡಿಯಲ್ಲಿ ನೆಲೆಸಿದ್ದು ಅಲ್ಲೇ ಕೆಲಸ ಮಾಡುತ್ತಾ ಕುಟುಂಬವನ್ನು ಪೋಷಿಸುತ್ತಿದ್ದನು ಎಂದು ಸಂಬಂಧಿಕರು ತಿಳಿಸಿದ್ದಾರೆ. ಕೃಷ್ಣಾಗೆ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಜನಿಸಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಮಗ ಜನಿಸಿದ್ದ. ಎರಡು ತಿಂಗಳ ಹಿಂದಷ್ಟೇ ಪಂಜಾಬ್ ನಿಂದ ಕೃಷ್ಣ ಬಾಸುಕಿ ಮನೆಗೆ ಬಂದಿದ್ದನು ಎನ್ನಲಾಗಿದೆ. 

ಮತ್ತೊಂದೆಡೆ, ಕೃಷ್ಣ ಬಸುಕಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜನ್ನಾಯಕ್ ಕರ್ಪೂರಿ ಠಾಕೂರ್ ವೈದ್ಯಕೀಯ ಕಾಲೇಜಿನ ವೈದ್ಯ ಡಾ.ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com