ಸೊಲ್ಲಾಪುರ: ಸೊಲ್ಲಾಪುರ ಜಿಲ್ಲೆಯ ಸೊಲ್ಲಾಪುರ-ಮಂಡ್ರೂಪ್ ಬೈಪಾಸ್ ರಸ್ತೆಯಲ್ಲಿ ಸೇತುವೆಯಿಂದ ಹಾರಿ 12 ಜಿಂಕೆಗಳು ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ 6.40ಕ್ಕೆ ಘಟನೆ ನಡೆದಿದೆ. ಸೊಲ್ಲಾಪುರ ಜಿಲ್ಲೆಯ ಸೊಲ್ಲಾಪುರ-ಮಂಡ್ರೂಪ್ ಬೈಪಾಸ್ ರಸ್ತೆಯಲ್ಲಿ ಸೇತುವೆಯಿಂದ ಹಾರಿ ಗಾಯಗೊಂಡ 12 ಜಿಂಕೆಗಳು ಮೃತಪಟ್ಟಿವೆ. ಸ್ಥಳದಲ್ಲಿ ಹೆದ್ದಾರಿಯಿಂದ ಜಿಂಕೆಗಳ ಮೃತದೇಹಗಳನ್ನು ತೆರವುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಉದಯ್ ಸಿಂಗ್ ಪಾಟೀಲ್ ಹೇಳಿದರು.
ಕೃಷ್ಣಮೃಗಗಳು 30 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿವೆ. ಗಾಯಗೊಂಡ ಎರಡು ಕೃಷ್ಣಮೃಗಗಳನ್ನು ಅರಣ್ಯ ಇಲಾಖೆ ನಡೆಸುತ್ತಿರುವ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳದಲ್ಲೇ ಹನ್ನೆರಡು ಮೃತಪಟ್ಟಿವೆ. ಸ್ಥಳೀಯರು ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಲ್ಲಿಯವರೆಗೆ ಘಟನೆಯಲ್ಲಿ ಯಾವುದೇ ದುಷ್ಕೃತ್ಯ ನಡೆದಿರುವ ಶಂಕೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement