social_icon

ಒಡಿಶಾದಲ್ಲಿ ಚಾಲಕರ ಮುಷ್ಕರ: ವಿಚಲಿತನಾಗದ ವರ; ರಾತ್ರಿಯಿಡೀ ನಡೆದು ಕ್ರಮಿಸಿದ 28 ಕಿ.ಮೀ ದೂರ!

ಅಲಂಕೃತ ವಾಹನಗಳು ಮತ್ತು ಡಿಜೆ ಇಲ್ಲದ ಮದುವೆ ಮೆರವಣಿಗೆ ಇಂದಿನ ದಿನಗಳಲ್ಲಿ ಯೋಚಿಸಲು ಸಾಧ್ಯವಿಲ್ಲ.  ಆದರೆ ರಾಯಗಡ ಜಿಲ್ಲೆಯಲ್ಲಿ ವರನೊಬ್ಬ ಮದುವೆಗೆಗಾಗಿ 28 ​​ಕಿಮೀ ನಡೆದುಕೊಂಡು ಹೋಗಿರುವ ಘಟನೆ ನಡೆದಿದೆ.

Published: 17th March 2023 05:10 PM  |   Last Updated: 17th March 2023 05:10 PM   |  A+A-


Unfazed by drivers' strike, groom walks 28 km

ಮದುವೆಗೆ ನಡೆದು ಬಂದ ವರ

Posted By : Shilpa D
Source : The New Indian Express

ಒಡಿಶಾ: ಅಲಂಕೃತ ವಾಹನಗಳು ಮತ್ತು ಡಿಜೆ ಇಲ್ಲದ ಮದುವೆ ಮೆರವಣಿಗೆ ಇಂದಿನ ದಿನಗಳಲ್ಲಿ ಯೋಚಿಸಲು ಸಾಧ್ಯವಿಲ್ಲ.  ಆದರೆ ರಾಯಗಡ ಜಿಲ್ಲೆಯಲ್ಲಿ ವರನೊಬ್ಬ ಮದುವೆಗೆಗಾಗಿ 28 ​​ಕಿಮೀ ನಡೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಒಡಿಶಾದಾದ್ಯಂತ ಚಾಲಕರ ಮುಷ್ಕರದ ಹಿನ್ನೆಲೆಯಲ್ಲಿ, ವಾಹನಗಳು ಲಭ್ಯವಾಗದ ಕಾರಣ ಗುರುವಾರ ರಾತ್ರಿ ಪಾರ್ತಿಗುಡ ಗ್ರಾಮದಿಂದ ಮದುವೆ ತಂಡವು ನಡೆದುಕೊಂಡು ಹೋಗಬೇಕಾಯಿತು. ಕೊನೆಗೆ ಅವರು ಮುಂಜಾನೆ 3 ಗಂಟೆಗೆ ವಧುವಿನ ಸ್ಥಳಕ್ಕೆ ಆಗಮಿಸಿದ್ದಾರೆ.

22 ವರ್ಷದ ವರ ನರೇಶ್ ಪ್ರಾಸ್ಕಾ ಮದುವೆಯ ಮೆರವಣಿಗೆಗಾಗಿ ನಾಲ್ಕು SUV ಗಳನ್ನು ವ್ಯವಸ್ಥೆಗೊಳಿಸಿದ್ದರು. ಆದರೆ ಚಾಲಕರು ಮುಷ್ಕರಕ್ಕೆ  ತೆರಳಿದ ಕಾರಣ ಪ್ಲಾನ್ ಉಲ್ಟಾ ಆಯಿತು.  ದ್ವಿಚಕ್ರ ವಾಹನಗಳಲ್ಲಿ ಮದುವೆಗೆ ಬೇಕಾದ ಸಾಮಗ್ರಿಗಳನ್ನು ಕಳುಹಿಸಿದ್ದರು.  ಎಂಟು ಮಹಿಳೆಯರು ಸೇರಿದಂತೆ ಕುಟುಂಬದ ಸುಮಾರು 30 ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ನಡೆದುಕೊಂಡು ಹೋಗಲು ನಿರ್ಧರಿಸಿದರು. ಇದು ಸುದೀರ್ಘ ನಡಿಗೆ ಸ್ಮರಣೀಯ ಅನುಭವ ಎಂದು ನರೇಶ್ ಹೇಳಿದರು. ಪಾರ್ತಿಗುಡ ಗ್ರಾಮವು ರಾಯಗಡದ ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಜಿಪಿ ವ್ಯಾಪ್ತಿಗೆ ಬರುತ್ತದೆ.

ವರನು ಮೆರವಣಿಗೆಯೊಂದಿಗೆ ಆಗಮಿಸಿದಾಗ ವಧುವಿನ ಕುಟುಂಬ ಸದಸ್ಯರು ಸಂತೋಷದಿಂದ  ಸ್ವಾಗತಕ್ಕೆ ಸಕಲ ವ್ಯವಸ್ಥೆ ಮಾಡಿದರು. ಶುಕ್ರವಾರ ಬೆಳಗ್ಗೆ  ವರನ ತಂಡ ತಲುಪಿದ್ದರಿಂದ, ಮದುವೆಯ ವಿಧಿಗಳು ತಡವಾಗಿ ಪ್ರಾರಂಭವಾಯಿತು,  ಮಧ್ಯಾಹ್ನದ ವೇಳೆಗೆ ಶಾಸ್ತ್ರೋಕ್ತವಾಗಿ ನೆರವೇರಿತು.

ನರೇಶ್ ಅವರ ಮದುವೆ ದಿಬಲಪಾಡು ಗ್ರಾಮದ ಹುಡುಗಿಯೊಂದಿಗೆ ನಿಶ್ಚಯವಾಗಿತ್ತು. ವಾಹನಗಳು ಈಗ ಲಭ್ಯವಿರುವುದರಿಂದ ವರನ ಮನೆಗೆ ಬೇಗ ತಲುಪುವುದಾಗಿ  ವರನ ಆಪ್ತ ಸ್ನೇಹಿತ ಸುಂದರ್ ಪ್ರಾಸ್ಕಾ ಹೇಳಿದ್ದಾರೆ.

‘ನಾವು ಆದಿವಾಸಿಗಳಾಗಿದ್ದು, ದೂರದ ನಡಿಗೆ ನಮಗೆ ಅಭ್ಯಾಸವಿದೆ, ರಾತ್ರಿ ವೇಳೆಯೂ ರಸ್ತೆಗಳ ಪರಿಚಯವಿದ್ದು, ಮದುವೆಗೆ ನಡೆದುಕೊಂಡು ಹೋಗುವುದು  ಹೊಸತು ಎನಿಸಲಿಲ್ಲ,. ಆದರೆ, ಕಳೆದ ಕೆಲವು ವರ್ಷಗಳಿಂದ ವಾಹನಗಳನ್ನೇ ಬಳಸಲಾಗುತ್ತಿದೆ ಎಂದು ವಧುವಿನ ಚಿಕ್ಕಪ್ಪ ತಿಳಿಸಿದ್ದಾರೆ.


Stay up to date on all the latest ದೇಶ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp