ದೆಹಲಿ ಅಬಕಾರಿ ನೀತಿ ಹಗರಣ: ಮತ್ತಷ್ಟು ವಿಚಾರಣೆಗೆ ಇಡಿ ಮುಂದೆ ಹಾಜರಾದ ಬಿಆರ್ ಎಸ್ ನಾಯಕಿ ಕವಿತಾ
ನವದೆಹಲಿ: ಮಾರ್ಚ್ 16 ರಂದು ಸಮನ್ಸ್ ಗೆ ವಿಚಾರಣೆ ತಪ್ಪಿಸಿಕೊಂಡ ನಂತರ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಬಿಆರ್ಎಸ್ ನಾಯಕಿ ಕೆ ಕವಿತಾ ಅವರು ದೆಹಲಿ ಅಬಕಾರಿ ಹಗರಣದಲ್ಲಿ ಭಾಗಿಯಾಗಿರುವ ಕುರಿತು ತನಿಖೆ ನಡೆಸುತ್ತಿರುವ ಏಜೆನ್ಸಿ ಮುಂದೆ ಎರಡನೇ ಸುತ್ತಿನ ವಿಚಾರಣೆಯನ್ನು ಎದುರಿಸಲು ಇಂದು ಸೋಮವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದರು. ದೆಹಲಿ ಸರ್ಕಾರಕ್ಕೆ ಭಾರೀ ನಷ್ಟವನ್ನು ಉಂಟುಮಾಡಿದ ಅಬಕಾರಿ ನೀತಿ ಹಗರಣದ ಫಲಾನುಭವಿ ಕವಿತ ಎಂದು ಆರೋಪಿಸಲಾಗಿದೆ.
ಇಡಿ ತನ್ನನ್ನು ಪ್ರಶ್ನಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿರುವ ಕಾರಣ ಮಾರ್ಚ್ 16ರಂದು ಏಜೆನ್ಸಿಯ ಮುಂದೆ ಹಾಜರಾಗುವುದರಿಂದ ದೂರ ಉಳಿಯಲು ನಿರ್ಧರಿಸಿದ್ದರು. ಸುಪ್ರೀಂ ಕೋರ್ಟ್ ಈ ವಿಷಯವನ್ನು ಇದೇ 24ಕ್ಕೆ ವಿಚಾರಣೆ ನಡೆಸಲಿದೆ. ಆದರೆ ಕವಿತಾರನ್ನು ಪ್ರಶ್ನಿಸದಂತೆ ಇಡಿ ನಿರ್ಬಂಧಿಸುವ ಯಾವುದೇ ಮಧ್ಯಂತರ ಆದೇಶವನ್ನು ನೀಡಲಿಲ್ಲ.ಇಂದು ಬೆಳಗ್ಗೆ 10.30ರ ಸುಮಾರಿಗೆ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾದರು.
ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಇಡಿ ಸಲ್ಲಿಸಿದ ಕೇವಿಯಟ್ ಅರ್ಜಿ ನಡುವೆ, ಕವಿತಾ ಇಂದು ಇಡಿ ಕಚೇರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ತನ್ನ ಮುಂದೆ ಹಾಜರಾಗಲು ಸಂಸ್ಥೆಯು ಸಮನ್ಸ್ ನ್ನು ಮರುಹೊಂದಿಸಿದೆ. ಯಾವುದೇ ಆದೇಶವನ್ನು ಅಂಗೀಕರಿಸುವ ಮೊದಲು ಕವಿತಾ ಅರ್ಜಿಯ ಮೇಲಿನ ಸಲ್ಲಿಕೆಯನ್ನು ಆಲಿಸುವಂತೆ ಇಡಿ ಸುಪ್ರೀಂ ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದೆ.
ಕವಿತಾ ಕಳೆದ ಗುರುವಾರ ಸಮನ್ಸ್ನಿಂದ ಹೊರಗುಳಿದ ಹಿನ್ನೆಲೆಯಲ್ಲಿ, ವಿಶೇಷ ಪಿಎಂಎಲ್ಎ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಪ್ರಮುಖ ಆರೋಪಿ ಅರುಣ್ ಪಿಳ್ಳೈ ಅವರ ಕಸ್ಟಡಿಯಲ್ ರಿಮಾಂಡ್ ನ್ನು ವಿಸ್ತರಿಸಿದೆ. ಕಸ್ಟಡಿಯಲ್ಲಿರುವ ಇತರ ಆರೋಪಿಗಳು ಮತ್ತು ಸಾಕ್ಷಿಗಳ ನಡುವೆ ಕವಿತಾ ಅವರನ್ನು ಪಿಳ್ಳೈ ಅವರೊಂದಿಗೆ ಇಡಿ ವಿಚಾರಣೆ ನಡೆಸಬೇಕಿತ್ತು. ಅಲ್ಲದೆ, ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕಸ್ಟಡಿಯನ್ನು ಮಾರ್ಚ್ 20 ರವರೆಗೆ ವಿಸ್ತರಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ