ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪುತ್ರಿಗೆ ಅಮೆರಿಕದಲ್ಲಿ ಜೀವ ಬೆದರಿಕೆ; ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪುತ್ರಿಗೆ ಅಮೆರಿಕದಲ್ಲಿ ಕೊಲೆ ಬೆದರಿಕೆ ಇದೆ ಎಂದು ವರದಿಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಶುಕ್ರವಾರ, ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.
Published: 31st March 2023 04:40 PM | Last Updated: 31st March 2023 07:52 PM | A+A A-

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್
ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪುತ್ರಿಗೆ ಅಮೆರಿಕದಲ್ಲಿ ಕೊಲೆ ಬೆದರಿಕೆ ಇದೆ ಎಂದು ವರದಿಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಶುಕ್ರವಾರ, ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.
ಖಲಿಸ್ತಾನಿ ಪರ ಅಂಶಗಳಿಂದ ಮುಖ್ಯಮಂತ್ರಿ ಮಾನ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ ಎಂದೂ ವರದಿಯಾಗಿದೆ.
'ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪುತ್ರಿಗೆ ಅಮೆರಿಕದಲ್ಲಿ ಜೀವ ಬೆದರಿಕೆ ಇದೆ ಎಂಬ ವರದಿಗಳನ್ನು ಓದಿದೆ. ಇದು ಅತ್ಯಂತ ಹೇಡಿತನದ ಕೃತ್ಯವಾಗಿದೆ. ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾನು ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡುತ್ತೇನೆ' ಎಂದು ಮಲಿವಾಲ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಶಾಂತಿ ಕದಡಲು ಯಾರಿಗೂ ಬಿಡುವುದಿಲ್ಲ: ಅಮೃತಪಾಲ್ ಸಿಂಗ್ ವಿರುದ್ಧ ಸಿಎಂ ಭಗವಂತ್ ಮಾನ್
ಭಗವಂತ ಮಾನ್ ಅವರ ಮಾಜಿ ಪತ್ನಿ ಇಂದರ್ಪ್ರೀತ್ ಕೌರ್ ಗ್ರೆವಾಲ್ ಅವರು ಮಗಳು ಸೀರತ್ ಕೌರ್ (21) ಮತ್ತು ಮಗ ದಿಲ್ಶನ್ (18) ಅವರೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದು, ಅವರು ಈ ಘಟನೆಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಖಚಿತಪಡಿಸಿದ್ದಾರೆ. ಖಲಿಸ್ತಾನಿ ಬೆಂಬಲಿಗರು ತನ್ನ ಮಗಳನ್ನು ಕೊಲ್ಲುವುದಾಗಿ ಫೋನ್ನಲ್ಲಿ ಬೆದರಿಕೆ ಹಾಕಿದ್ದಾರೆ ಮತ್ತು ನಿಂದಿಸಿದ್ದಾರೆ ಎಂದು ಅವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.
'ಮಕ್ಕಳಿಗೆ ಬೆದರಿಕೆ ಹಾಕುವ ಮತ್ತು ನಿಂದಿಸುವ ಮೂಲಕ ನೀವು ಈ ರೀತಿ ಖಲಿಸ್ತಾನವನ್ನು ಸಾಧಿಸಲು ಹೊರಟಿದ್ದೀರಾ... ಅಂತಹ ಜನರು ಸಿಖ್ ಧರ್ಮಕ್ಕೆ ಕಳಂಕ' ಎಂದು ಬರೆದಿದ್ದಾರೆ.