ಫೇಸ್‌ಬುಕ್ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾದ ಅಯೋಧ್ಯೆ ದೇವಸ್ಥಾನದ ಅರ್ಚಕ, ವಿಡಿಯೋ ವೈರಲ್!

ಅಯೋಧ್ಯೆಯ ಕೊಟ್ವಾಲಿ ಪ್ರದೇಶದ ರಾಯಗಂಜ್ ಚೌಕಿಯಿಂದ ಕೂಗಳತೆ ದೂರದಲ್ಲಿ ನರಸಿಂಹ ದೇವಸ್ಥಾನದ ಅರ್ಚಕ ರಾಮ್ ಶಂಕರ್ ದಾಸ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಯೋಧ್ಯೆಯ ಕೊಟ್ವಾಲಿ ಪ್ರದೇಶದ ರಾಯಗಂಜ್ ಚೌಕಿಯಿಂದ ಕೂಗಳತೆ ದೂರದಲ್ಲಿ ನರಸಿಂಹ ದೇವಸ್ಥಾನದ ಅರ್ಚಕ ರಾಮ್ ಶಂಕರ್ ದಾಸ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ಅರ್ಚಕ ಫೇಸ್ ಬುಕ್ ಲೈವ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. 

ವಿಡಿಯೋದಲ್ಲಿ ಆ ಪ್ರದೇಶದ ಸಬ್ ಇನ್ಸ್ ಪೆಕ್ಟರ್ ಮತ್ತು ಕಾನ್ ಸ್ಟೇಬಲ್ ವಿರುದ್ಧ ಸಂವೇದನಾಶೀಲ ಆರೋಪ ಮಾಡಿದ್ದಾರೆ. ಕೊತ್ವಾಲ್ ಮನೋಜ್ ಕುಮಾರ್ ಅವರ ಪ್ರಕಾರ, ಸೋಮವಾರ ಬೆಳಿಗ್ಗೆ 9 ಗಂಟೆಗೆ ದೇವಾಲಯದ ಭದ್ರತೆಗೆ ನಿಯೋಜಿಸಲಾದ ಪೊಲೀಸರು ಮುಖ್ಯ ಬಾಗಿಲು ಮುಚ್ಚಿರುವುದನ್ನು ಕಂಡು ನಂತರ ಕೊಠಡಿಯ ಬೀಗ ಒಡೆದು ನೋಡಿದಾಗ ಆರ್ಚಕ ನೇಣು ಬಿಗಿದುಕೊಂಡಿರುವುದು ಕಂಡುಬಂದಿತ್ತು. ಆತ್ಮಹತ್ಯೆಗೆ ಕಾರಣಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಏತನ್ಮಧ್ಯೆ, ಅರ್ಚಕ ಮಾಡಿದ ಫೇಸ್‌ಬುಕ್ ಲೈವ್ ವೈರಲ್ ಆಗಿದೆ. ಸಾಯುವ ಮೊದಲು, ರಾಯಗಂಜ್ ಪೊಲೀಸ್ ಠಾಣೆಯ ಪ್ರಭಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಾರ್ಚ್ 7ರಂದು ಅರ್ಚಕನ ವಿರುದ್ಧ ಮಹಿಳೆಯೊಬ್ಬರು ಹಲ್ಲೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಇದೇ ವಿಚಾರವಾಗಿ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಅರ್ಚಕ ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಮತ್ತೊಂದೆಡೆ, ಸಮಾಜವಾದಿ ಪಕ್ಷವು ಈ ವಿಷಯವಾಗಿ ಸರ್ಕಾರವನ್ನು ಗುರಿಯಾಗಿಸಿದೆ. ಟ್ವೀಟ್ ಮಾಡುವ ಮೂಲಕ ಎಸ್‌ಪಿ ಸಿಎಂ ಯೋಗಿಗೆ ಪ್ರಶ್ನೆ ಕೇಳಿದ್ದು, ಯೋಗಿ ಜಿ ಅವರ ಸ್ಥಳೀಯ ಪೊಲೀಸರು ಅಯೋಧ್ಯೆಯಲ್ಲಿ ಅರ್ಚಕರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಅವರಿಂದ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರ ಪರಿಣಾಮವಾಗಿ ಅರ್ಚಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ಈಗ ಸ್ವಯಂ ಘೋಷಿತ ಧರ್ಮದ ಗುತ್ತಿಗೆದಾರ ಯೋಗಿ ಜೀ ಈ ಪೂಜಾರಿ ಹಿಂದೂ ಅಲ್ಲವೇ ಎಂದು ಹೇಳಬೇಕು? ಅಲ್ಲದೆ ಯೋಗಿರಾಜ್ ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಕಬಳಿಸಿ ತಮ್ಮದೇ ಜಾತಿಯ ಪೊಲೀಸರು ಮತ್ತು ಗೂಂಡಾಗಳಿಂದ ಸುಲಿಗೆ ಆಟ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ. ಯೋಗಿ ಜಿ ಈ ಬಗ್ಗೆ ಒಂದು ಮಾತನ್ನೂ ಹೇಳುವುದಿಲ್ಲ ಏಕೆಂದರೆ ಇದರ ಬಗ್ಗೆ ಮಾತನಾಡಿದರೆ ಅವರ ರಹಸ್ಯಗಳು ಬಹಿರಂಗವಾಗುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com