ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ನಿರಾಕರಣೆ, ಕೊನೆಗೂ ಮೌನ ಮುರಿದ ಮನೇಕಾ ಗಾಂಧಿ!

ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಕೆಲವು ದಿನಗಳ ನಂತರ ಅವರ ತಾಯಿ, ಸಂಸದೆ ಮನೇಕಾ ಗಾಂಧಿಮೌನ ಮುರಿದಿದ್ದಾರೆ.
ಮನೇಕಾ ಗಾಂಧಿ
ಮನೇಕಾ ಗಾಂಧಿ

ಸುಲ್ತಾನ್ ಪುರ: ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಕೆಲವು ದಿನಗಳ ನಂತರ ಅವರ ತಾಯಿ, ಸಂಸದೆ ಮನೇಕಾ ಗಾಂಧಿಮೌನ ಮುರಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಸುಲ್ತಾನ್ ಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಭಾಗವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ವರುಣ್ ಗಾಂಧಿ ಈಗ ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಅವರು ಏನು ಮಾಡಬೇಕೆಂದು ಅವರನ್ನೇ ಕೇಳಿ, ಚುನಾವಣೆಯ ನಂತರ ನಾವು ಇದನ್ನು ಪರಿಗಣಿಸುತ್ತೇವೆ, ಸಮಯವಿದೆ" ಎಂದು ಉತ್ತರಿಸಿದರು.

" ಬಿಜೆಪಿಯಲ್ಲಿದ್ದೇನೆ ಎಂಬುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನಗೆ ಟಿಕೆಟ್ ನೀಡಿದ್ದಕ್ಕಾಗಿ ನಾನು ಅಮಿತ್ ಶಾ, ಪ್ರಧಾನಿ ಮೋದಿ ಮತ್ತು ನಡ್ಡಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಟಿಕೆಟ್ ಬಹಳ ತಡವಾಗಿ ಘೋಷಿಸಲಾಯಿತು, ಆದ್ದರಿಂದ ಪಿಲಿಭಿತ್ ಅಥವಾ ಸುಲ್ತಾನ್‌ಪುರ ನಾನು ಎಲ್ಲಿ ಹೋರಾಡಬೇಕು ಎಂಬ ಸಂದಿಗ್ಧತೆ ಇತ್ತು. ಪಕ್ಷ ಈಗ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು.

ಮನೇಕಾ ಗಾಂಧಿ
ಬಿಜೆಪಿಯೊಂದಿಗೆ ಭ್ರಮ ನಿರಶನ: ಕಮಲ ತೊರೆಯಲು ಚಿಂತನೆ; ಕಾಂಗ್ರೆಸ್, ಟಿಎಂಸಿ, ಎಎಪಿಯತ್ತ ವರುಣ್ ಗಾಂಧಿ ಚಿತ್ತ!

ಸುಲ್ತಾನ್‌ಪುರಕ್ಕೆ ಹಿಂತಿರುಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಏಕೆಂದರೆ ಈ ಸ್ಥಳವು ಸುಲ್ತಾನ್‌ಪುರದಲ್ಲಿ ಮತ್ತೆ ಅಧಿಕಾರಕ್ಕೆ ಬರದ ಇತಿಹಾಸವನ್ನು ಹೊಂದಿದೆ ಎಂದು ಅವರು ತಿಳಿಸಿದರು. ಇದು ಟಿಕೆಟ್ ಸಿಕ್ಕ ನಂತರ ಸುಲ್ತಾನ್‌ಪುರಕ್ಕೆ ಅವರ ಮೊದಲ ಭೇಟಿಯಾಗಿತ್ತು. ಜಿಲ್ಲೆಗೆ 10 ದಿನಗಳ ಭೇಟಿಯಲ್ಲಿ ಅವರು ಇಡೀ ಲೋಕಸಭಾ ಕ್ಷೇತ್ರದ 101 ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com