ಲೋಕಸಭೆ ಚುನಾವಣೆಗೆ ಸಿಪಿಐ(ಎಂ) ಪ್ರಣಾಳಿಕೆ ಬಿಡುಗಡೆ; ಯುಎಪಿಎ, ಪಿಎಂಎಲ್‌ಎ, ಸಿಎಎ ರದ್ದುಗೊಳಿಸುವ ಭರವಸೆ

ಸಿಪಿಐ(ಎಂ) ಗುರುವಾರ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಂತಹ ಎಲ್ಲಾ 'ಕಠಿಣ' ಕಾನೂನುಗಳನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ನವದೆಹಲಿ: ಸಿಪಿಐ(ಎಂ) ಗುರುವಾರ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಂತಹ ಎಲ್ಲಾ 'ಕಠಿಣ' ಕಾನೂನುಗಳನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದೆ.

ಬಿಜೆಪಿಯನ್ನು ಸೋಲಿಸಲು, ಎಡಪಕ್ಷಗಳನ್ನು ಬಲಪಡಿಸಲು ಮತ್ತು ಕೇಂದ್ರದಲ್ಲಿ ಪರ್ಯಾಯ ಜಾತ್ಯತೀತ ಸರ್ಕಾರ ರಚನೆಯನ್ನು ಖಚಿತಪಡಿಸಿಕೊಳ್ಳಲು ಸಿಪಿಐ(ಎಂ) ಅನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದೆ.

ತನ್ನ ಪ್ರಣಾಳಿಕೆಯಲ್ಲಿ, ಪಕ್ಷವು ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸುತ್ತದೆ ಎಂಬ ತತ್ವಕ್ಕೆ ರಾಜಿಯಾಗದ ರೀತಿಯಲ್ಲಿ ಹೋರಾಡಲಾಗುತ್ತದೆ. ಯುಎಪಿಎ ಮತ್ತು ಪಿಎಂಎಲ್‌ಎಯಂತಹ ಎಲ್ಲಾ ಕಠಿಣ ಕಾನೂನುಗಳನ್ನು ರದ್ದುಪಡಿಸುತ್ತದೆ' ಎಂದು ಹೇಳಿದೆ.

2019ರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಸಹ ರದ್ದುಗೊಳಿಸಲು ಬದ್ಧವಾಗಿದೆ. ದ್ವೇಷ ಭಾಷಣ ಮತ್ತು ಅಪರಾಧಗಳ ವಿರುದ್ಧ ಹೋರಾಡುವುದಾಗಿ ಪಕ್ಷ ಹೇಳಿದೆ. ಇದಲ್ಲದೆ, ಅತಿ ಶ್ರೀಮಂತರ ಮೇಲೆ ತೆರಿಗೆ ವಿಧಿಸುವುದಾಗಿ ಮತ್ತು ಸಾಮಾನ್ಯ ಸಂಪತ್ತಿನ ತೆರಿಗೆ ಮತ್ತು ಪಿತ್ರಾರ್ಜಿತ ಆಸ್ತಿ ತೆರಿಗೆಯ ಕಾನೂನನ್ನು ಪರಿಚಯಿಸುವುದಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಕ್ಷ ಭರವಸೆ ನೀಡಿದೆ.

ಪ್ರಾತಿನಿಧಿಕ ಚಿತ್ರ
ಲೋಕಸಭಾ ಚುನಾವಣೆ: ಏಪ್ರಿಲ್ 5ಕ್ಕೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ

ಉದ್ಯೋಗ ಖಾತ್ರಿ ಯೋಜನೆ MGNREGA ಗೆ ಬಜೆಟ್ ಹಂಚಿಕೆಯನ್ನು ದ್ವಿಗುಣಗೊಳಿಸಬೇಕು ಮತ್ತು ನಗರ ಉದ್ಯೋಗವನ್ನು ಖಾತರಿಪಡಿಸುವ ಹೊಸ ಕಾನೂನನ್ನು ಕಾನೂನುಬದ್ಧಗೊಳಿಸಬೇಕು ಎಂದು ಪಕ್ಷ ಹೇಳಿದೆ.

ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com