ಬಿಜೆಪಿ ಅಭ್ಯರ್ಥಿ, ತಮ್ಮ ಪುತ್ರ ಅನಿಲ್‌ ಸೋಲಬೇಕು ಎಂದು ಶಾಪ ಹಾಕಿದ ಕೇರಳ ಮಾಜಿ ಸಿಎಂ ಎಕೆ ಆಂಟನಿ

ಇತ್ತೀಚೆಗೆಷ್ಟೇ ಬಿಜೆಪಿಗೆ ಸೇರಿರುವ ತಮ್ಮ ಪುತ್ರ ಅನಿಲ್ ಆಂಟನಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇರಳ ಮಾಜಿ ಸಿಎಂ ಎ.ಕೆ. ಆಂಟನಿ.
 ಎ.ಕೆ. ಆಂಟನಿ ಹಾಗೂ ಅನಿಲ್
ಎ.ಕೆ. ಆಂಟನಿ ಹಾಗೂ ಅನಿಲ್
Updated on

ತಿರುವನಂತಪುರಂ: ಇತ್ತೀಚೆಗೆಷ್ಟೇ ಬಿಜೆಪಿಗೆ ಸೇರಿರುವ ತಮ್ಮ ಪುತ್ರ ಅನಿಲ್ ಆಂಟನಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇರಳ ಮಾಜಿ ಸಿಎಂ ಎ.ಕೆ. ಆಂಟನಿ ಅವರು ಬಿಜೆಪಿ ಅಭ್ಯರ್ಥಿ ಹಾಗೂ ತಮ್ಮ ಪುತ್ರ ಅನಿಲ್‌ ಚುನಾವಣೆಯಲ್ಲಿ ಸೋಲಬೇಕು ಎಂದು ಶಾಪ ಹಾಕಿದ್ದಾರೆ.

ಇಂದು ತಿರುವನಂತಪುರಂನಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಕೆ.ಆಂಟನಿ, ಪ್ರಚಾರಕ್ಕೆ ತೆರಳಲು ಸಾಧ್ಯವಾಗದಿದ್ದರೂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ಕಾಂಗ್ರೆಸ್‌ನ ಪ್ರಮುಖ ನಾಯಕರ ಮಕ್ಕಳು ಬಿಜೆಪಿ ಸೇರುವುದು ತಪ್ಪು. ಮಕ್ಕಳ ಬಗ್ಗೆ ಮಾತನಾಡಲು ನಾನು ಇಷ್ಟ ಪಡುವುದಿಲ್ಲ. ಕೆಎಸ್‌ಯು ಕಾಲದಿಂದಲೂ ಕುಟುಂಬ, ರಾಜಕೀಯ ಎರಡೂ ಬೇರೆ ಬೇರೆ ಎಂಬುದು ನನ್ನ ನಿಲುವು. ಕಾಂಗ್ರೆಸ್‌ ನನ್ನ ಧರ್ಮ. ಕೇರಳದಲ್ಲಿ ಬಿಜೆಪಿಯ ಸುವರ್ಣ ವರ್ಷಗಳು ಮುಗಿದಿವೆ. 2019 ರ ಸಂಸತ್ ಚುನಾವಣೆಯಲ್ಲಿ ಶಬರಿಮಲೆ ಮಹಿಳೆಯರ ಪ್ರವೇಶ ವಿಚಾರವಾಗಿ ಬಿಜೆಪಿಗೆ ಸುವರ್ಣ ವರ್ಷವಾಗಿತ್ತು. 2024 ರ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಮೂರನೇ ಸ್ಥಾನ ಪಡೆಯಲಿದೆ" ಎಂದರು.

 ಎ.ಕೆ. ಆಂಟನಿ ಹಾಗೂ ಅನಿಲ್
ಅನಿಲ್ ನಿರ್ಧಾರ ನೋವುಂಟು ಮಾಡಿದೆ, ಬಿಜೆಪಿ ಸೇರಿದ್ದು ದೊಡ್ಡ ತಪ್ಪು: ಎಕೆ ಆಂಟನಿ

ಆದರೆ, ತಮ್ಮ ತಂದೆ ಆಂಟನಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅನಿಲ್ ಆಂಟೋನಿ ಅವರು ತಮ್ಮ ತಂದೆಯ ಬಗ್ಗೆ ಕರುಣೆ ಇದೆ. ಪಟ್ಟನಂತಿಟ್ಟದಲ್ಲಿ ತಾವು ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಕಾಂಗ್ರೆಸ್ ದೇಶವಿರೋಧಿ ಸಂಘಟನೆ ಎಂದು ಟೀಕಿಸಿದ ಅನಿಲ್ ಆಂಟನಿ, ಹಳೆಯ ವಿಚಾರಗಳನ್ನು ಹೊಂದಿರುವ ಕೆಲವು ನಾಯಕರು ಸೋನಿಯಾ ಗಾಂಧಿ ಮತ್ತು ಅವರ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇರಳದ ಪಟ್ಟನಂತಿಟ್ಟ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅನಿಲ್ ಆಂಟನಿ ಸ್ಪರ್ಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com