Image used for representational purposes only
ಪಠ್ಯದಲ್ಲಿ ಸಂವಿಧಾನದ ಪೀಠಿಕೆ ಉಲ್ಲೇಖ (ಸಂಗ್ರಹ ಚಿತ್ರ)online desk

3, 4 ನೇ ತರಗತಿ ಪಠ್ಯದಲ್ಲಿ ಸಂವಿಧಾನದ ಪೀಠಿಕೆಯೇ ಇಲ್ಲ!: NCERT ವಿರುದ್ಧ ವ್ಯಾಪಕ ಟೀಕೆ

ಹೊಸ ಪಠ್ಯಕ್ರಮದಲ್ಲಿ ಪೀಠಿಕೆ, ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳು ಮತ್ತು ರಾಷ್ಟ್ರಗೀತೆ ಸೇರಿದಂತೆ ಸಂವಿಧಾನದ ವಿವಿಧ ಅಂಶಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಪ್ರೊಫೆಸರ್ ರಂಜನ ಅರೋರಾ ಹೇಳಿದ್ದಾರೆ.
Published on

ನವದೆಹಲಿ: 3, 4 ನೇ ತರಗತಿ ಪಠ್ಯದಲ್ಲಿ ಸಂವಿಧಾನದ ಪೀಠಿಕೆಯನ್ನು ತೆಗೆದುಹಾಕಿರುವುದಕ್ಕೆ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಗಾಗಿ ರಾಷ್ಟ್ರೀಯ ಮಂಡಳಿ (NCERT) ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗತೊಡಗಿದೆ.

NCERTಯಲ್ಲಿನ ಪಠ್ಯಕ್ರಮ ಅಧ್ಯಯನ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿರುವ ಪ್ರೊಫೆಸರ್ ರಂಜನ ಅರೋರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಹೊಸ ಪಠ್ಯಕ್ರಮದಲ್ಲಿ ಪೀಠಿಕೆ, ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳು ಮತ್ತು ರಾಷ್ಟ್ರಗೀತೆ ಸೇರಿದಂತೆ ಸಂವಿಧಾನದ ವಿವಿಧ ಅಂಶಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಹೇಳಿದ್ದಾರೆ. ಪೀಠಿಕೆಯನ್ನು ಸಾಂವಿಧಾನಿಕ ಮೌಲ್ಯಗಳ ಏಕೈಕ ಪ್ರತಿನಿಧಿಯಾಗಿ ನೋಡುವುದು ತಪ್ಪು ಕಲ್ಪನೆ ಎಂದು ಅರೋರಾ ಹೇಳಿದ್ದು, ಪೀಠಿಕೆಯಲ್ಲಿನ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬಲು ವಿಶಾಲವಾದ ವಿಧಾನವನ್ನು ಪ್ರತಿಪಾದಿಸಿದ್ದಾರೆ.

"ಎನ್ಇಪಿ 2020 ರ ದೃಷ್ಟಿಯನ್ನು ಅನುಸರಿಸಿ ಮಕ್ಕಳ ಸಮಗ್ರ ಬೆಳವಣಿಗೆಗಾಗಿ ನಾವು ಇವೆಲ್ಲಕ್ಕೂ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತೇವೆ" ಎಂದು ಅರೋರಾ ಹೇಳಿದರು.

2020 ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಪರಿಚಯಿಸಿದ ನಂತರ ಎಲ್ಲಾ ಶ್ರೇಣಿಗಳ ಪಠ್ಯಪುಸ್ತಕಗಳ ಪ್ರಕಟಣೆಯನ್ನು ನೋಡಿಕೊಳ್ಳುವ ಎನ್‌ಸಿಇಆರ್‌ಟಿ ಅವುಗಳನ್ನು ಪರಿಷ್ಕರಿಸುತ್ತಿದೆ. ಈ ವರ್ಷ 3 ಮತ್ತು 4 ನೇ ತರಗತಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದ್ದು ಹೊಸ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನೊಂದಿಗೆ ಜೋಡಿಸಲಾಗಿದೆ.

ಹಿಂದೆ, ಮುನ್ನುಡಿಯನ್ನು 4ನೇ ತರಗತಿಯ ಹಲವು ಪಠ್ಯಪುಸ್ತಕಗಳ ಆರಂಭಿಕ ಪುಟಗಳಲ್ಲಿ ಸೇರಿಸಲಾಗಿತ್ತು ಆದರೆ ಈಗ ಆಯ್ದ ಕೆಲವು ಪುಸ್ತಕಗಳಲ್ಲಿ ಮಾತ್ರ ಅಳವಡಿಸಲಾಗಿದೆ. ಈ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ. ಬಿಜೆಪಿ ಸರ್ಕಾರ ಸಂವಿಧಾನವನ್ನು ಕೆಡವಲು ಪ್ರಯತ್ನಿಸುತ್ತಿದೆ ಎಂದು ಪಕ್ಷದ ವಕ್ತಾರ ಡಾ.ಶಾಮಾ ಮೊಹಮ್ಮದ್ ಹೇಳಿದ್ದಾರೆ.

Image used for representational purposes only
NCERT ಆರ್‌ಎಸ್‌ಎಸ್ ಅಂಗವಾಗಿ ಕೆಲಸ ಮಾಡುತ್ತಿದೆ, ಸಂವಿಧಾನದ ಮೇಲೆ ದಾಳಿ: ಜೈರಾಮ್ ರಮೇಶ್

ಈ ಬದಲಾವಣೆಯನ್ನು ವಿರೋಧಿಸಲು ಪೋಷಕರನ್ನು ಒತ್ತಾಯಿಸಿದ ಅವರು, "ಈ ವರ್ಷ NCERT ಹೊರಡಿಸಿದ ಹಲವಾರು ತರಗತಿ 3 ಮತ್ತು 4ನೇ ತರಗತಿಯ ಪಠ್ಯಪುಸ್ತಕಗಳಿಂದ ಸಂವಿಧಾನದ ಮುನ್ನುಡಿಯನ್ನು ಕೈಬಿಡಲಾಗಿದೆ. ಬಿಜೆಪಿ ಸರ್ಕಾರ ಭಾರತದ ಸಂವಿಧಾನವನ್ನು ನಾಶಮಾಡಲು ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದೆ. ನಮ್ಮ ಇತಿಹಾಸವನ್ನು ಅಳಿಸುವ ಈ ಘೋರ ಪ್ರಯತ್ನವನ್ನು ಎಲ್ಲಾ ಪೋಷಕರು ಒಗ್ಗೂಡಿ ವಿರೋಧಿಸಬೇಕು ಎಂದು ಮೊಹಮ್ಮದ್ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com