'ನನ್ನ ಇಡೀ ಜೀವನ ಕ್ರೀಡೆ ಮತ್ತು ಭಾರತಕ್ಕೆ ಮುಡಿಪು': ದೆಹಲಿಗೆ ಬಂದಿಳಿದ Manu Bhaker ಗೆ ಅದ್ದೂರಿ ಸ್ವಾಗತ!

ಪ್ಯಾರಿಸ್ ಗೇಮ್ಸ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಮತ್ತು 10 ಮೀಟರ್ ಮಿಶ್ರ ಟೀಮ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕವನ್ನು ಪಡೆದರು.
ಮನು ಭಾಕರ್ ಗೆ ಅದ್ದೂರಿ ಸ್ವಾಗತ
ಮನು ಭಾಕರ್ ಗೆ ಅದ್ದೂರಿ ಸ್ವಾಗತ
Updated on

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಎರಡು ಕಂಚಿನ ಪದಕ ಗೆದ್ದು ಬೀಗುತ್ತಿರುವ ಭಾರತದ ಯುವ ಶೂಟರ್ ಮನು ಭಾಕರ್ ಬುಧವಾರ ಬೆಳಗ್ಗೆ ತಮ್ಮ ಕೋಚ್ ಜಸ್ಪಾಲ್ ರಾಣಾ ಜೊತೆಗೆ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಅದ್ದೂರಿಯಿಂದ ಸ್ವಾಗತಿಸಿದರು.

ಮನು ಭಾಕರ್ 12 ವರ್ಷಗಳ ಕೊರತೆಯನ್ನು ಕಂಚಿನ ಪದಕ ಗೆಲ್ಲುವ ಮೂಲಕ ನಿವಾರಿಸಿದ್ದಾರೆ, ಪ್ಯಾರಿಸ್‌ನಲ್ಲಿ ಅವಳಿ ವಿಜಯಗಳ ಮೊದಲು ಶೂಟಿಂಗ್ ಅನಿಶ್ಚಿತತೆಯು ಸಹಿಸಿಕೊಳ್ಳಬೇಕಾಗಿತ್ತು. ಪ್ಯಾರಿಸ್ ಗೇಮ್ಸ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಮತ್ತು 10 ಮೀಟರ್ ಮಿಶ್ರ ಟೀಮ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕವನ್ನು ಪಡೆದರು.

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಮನು ಭಾಕರ್ 25m ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು, ಆ ಮೂಲಕ ತನ್ನ ಒಲಿಂಪಿಕ್ ಅಭಿಯಾನವನ್ನು ದಾಖಲೆಯ ಎರಡು ಪದಕಗಳೊಂದಿಗೆ ಮುಕ್ತಾಯಗೊಳಿಸಿದರು.

ನಾನು ಶ್ರೇಷ್ಠರಲ್ಲಿ ಒಬ್ಬಳಾಗಲು ಬಯಸುತ್ತೇನೆ. ಇದು ನನ್ನ ಪಾಲಿಗೆ ಆರಂಭವಷ್ಟೇ. ನನ್ನ ಇಡೀ ಜೀವನವನ್ನು ಕ್ರೀಡೆ ಮತ್ತು ಭಾರತಕ್ಕಾಗಿ ಮುಡಿಪಾಗಿಡಲು ಬಯಸುತ್ತೇನೆ. ನನ್ನ ದೇಶಕ್ಕಾಗಿ ಸಾಧ್ಯವಾದಷ್ಟು ಪದಕಗಳನ್ನು ಗೆಲ್ಲಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ ಎಂದು ಭಾಕರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com