ಡಿಎಂಕೆ, ಕಾಂಗ್ರೆಸ್ ಜನರ ನಡುವೆ ಬಿರುಕು ಮೂಡಿಸುತ್ತಿವೆ: ಪ್ರಧಾನಿ ಮೋದಿ ವಾಗ್ದಾಳಿ

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಕೇಂದ್ರದ ಯೋಜನೆಗಳಿಗೆ ಸಹಕರಿಸುತ್ತಿಲ್ಲ ಎಂದು ಬುಧವಾರ ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಚರ್ಚೆಯ ವೇಳೆ ಸಭಾತ್ಯಾಗ ಮಾಡಿದ ಬಗ್ಗೆ ಟೀಕಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿANI
Updated on

ತಿರುನೆಲ್ವೇಲಿ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಕೇಂದ್ರದ ಯೋಜನೆಗಳಿಗೆ ಸಹಕರಿಸುತ್ತಿಲ್ಲ ಎಂದು ಬುಧವಾರ ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಚರ್ಚೆಯ ವೇಳೆ ಸಭಾತ್ಯಾಗ ಮಾಡಿದ ಬಗ್ಗೆ ಟೀಕಿಸಿದ್ದಾರೆ. ಡಿಎಂಕೆ ಪಲಾಯನ ಜನರ ನಂಬಿಕೆಯ ಮೇಲಿನ ದ್ವೇಷವನ್ನು ತೋರಿಸುತ್ತದೆ ಎಂದು ಹೇಳಿದರು. ಈ ಮೂಲಕ ಸಂಸತ್ತಿನಲ್ಲಿ ಈ ವಿಚಾರ ಬಂದಾಗ ಪ್ರತಿಪಕ್ಷಗಳ ಸಭಾತ್ಯಾಗ ನಡೆಸಿದ್ದನ್ನು ಉಲ್ಲೇಖಿಸಿದರು.

ಡಿಎಂಕೆ ಮತ್ತು ಅದರ ಮಿತ್ರ ಪಕ್ಷವಾದ ಕಾಂಗ್ರೆಸ್ ಜನರ ನಡುವೆ ಬಿರುಕು ಮೂಡಿಸುತ್ತಿವೆ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ, ಆ ಪಕ್ಷಗಳ ಕುಟುಂಬ ರಾಜಕೀಯವನ್ನು ಕೆಣಕಿದರು.

ತಮಿಳುನಾಡು ಶ್ರೀರಾಮನೊಂದಿಗೆ ಜನರಿಗೆ ಹೆಚ್ಚು ಚಿರಪರಿತವಾಗಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಗೆ ಮುನ್ನ ಧನುಷ್ಕೋಡಿ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದೆ.

ಇಷ್ಟು ವರ್ಷಗಳ ನಂತರ ಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ಇಡೀ ದೇಶವೇ ಸಂತಸ ವ್ಯಕ್ತಪಡಿಸಿದೆ. ಸಂಸತ್ತಿನಲ್ಲಿ ಸಂಬಂಧಿತ ವಿಷಯ ಪ್ರಸ್ತಾಪವಾಯಿತು ಆದರೆ ಡಿಎಂಕೆ ಸಂಸದರು ಓಡಿಹೋದರು ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಹೇಳಿದರು.

ಡಿಎಂಕೆ ನಿಮ್ಮ ನಂಬಿಕೆಯನ್ನು ಎಷ್ಟು ದ್ವೇಷಿಸುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಡಿಎಂಕೆ ಮತ್ತು ಕಾಂಗ್ರೆಸ್ ಜನರು ಮತ್ತು ಸಮಾಜದ ನಡುವೆ ಬಿರುಕು ಮೂಡಿಸಲು 'ನವೀನ ಆಲೋಚನೆಗಳನ್ನು' ಮಂಡಿಸುತ್ತಿದ್ದಾರೆ "ಆದರೆ ನಾವು ಎಲ್ಲರನ್ನೂ ಕುಟುಂಬದವರಂತೆ ನೋಡುತ್ತೇವೆ ಎಂದರು.

ಡಿಎಂಕೆ ನಿಮ್ಮ ನಂಬಿಕೆಯನ್ನು ಎಷ್ಟು ದ್ವೇಷಿಸುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಡಿಎಂಕೆ ಮತ್ತು ಕಾಂಗ್ರೆಸ್ ಜನರು ಮತ್ತು ಸಮಾಜದ ನಡುವೆ ಬಿರುಕು ಮೂಡಿಸಲು 'ನವೀನ ಆಲೋಚನೆಗಳನ್ನು' ಮಂಡಿಸುತ್ತಿದ್ದಾರೆ "ಆದರೆ ನಾವು ಎಲ್ಲರನ್ನೂ ಕುಟುಂಬದವರಂತೆ ನೋಡುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com