ಕುವೈತ್‌ ಅಗ್ನಿ ದುರಂತ: ಭಾರತೀಯರ ಮೃತದೇಹ ತರಲು C-130J ವಿಮಾನ ಕಳುಹಿಸಿದ ಕೇಂದ್ರ

ಭೀಕರ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ 40ಕ್ಕೂ ಹೆಚ್ಚು ಭಾರತೀಯರ ಮೃತದೇಹಗಳನ್ನು ಮರಳಿ ದೇಶಕ್ಕೆ ತರಲು ಭಾರತ ಗುರುವಾರ ರಾತ್ರಿ ಕುವೈತ್‌ಗೆ ಮಿಲಿಟರಿ ಸಾರಿಗೆ ವಿಮಾನವನ್ನು ಕಳುಹಿಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದಕ್ಷಿಣ ಕುವೈತ್‌ನ ವಿದೇಶಿ ಕಾರ್ಮಿಕರ ವಸತಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ 40ಕ್ಕೂ ಹೆಚ್ಚು ಭಾರತೀಯರ ಮೃತದೇಹಗಳನ್ನು ಮರಳಿ ದೇಶಕ್ಕೆ ತರಲು ಭಾರತ ಗುರುವಾರ ರಾತ್ರಿ ಕುವೈತ್‌ಗೆ ಮಿಲಿಟರಿ ಸಾರಿಗೆ ವಿಮಾನವನ್ನು ಕಳುಹಿಸುತ್ತಿದೆ.

ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರು ಮತ್ತು ಮೂವರು ಫಿಲಿಪಿನೋ ಪ್ರಜೆಗಳ ಶವಗಳನ್ನು ಗುರುತಿಸಿರುವುದಾಗಿ ಕುವೈತ್ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಅವಘಡದಲ್ಲಿ ಕನಿಷ್ಠ 49 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ.

ಭಾರತೀಯ ವಾಯುಪಡೆಯ C-130J ಸಾರಿಗೆ ವಿಮಾನ ಇಂದು ರಾತ್ರಿ ಕುವೈತ್ ಗೆ ತೆರಳುತ್ತಿದ್ದು, ಶುಕ್ರವಾರ ಮೃತದೇಹಗಳನ್ನು ಮರಳಿ ದೇಶಕ್ಕೆ ತರಲಿದೆ. ಮೃತ ಭಾರತೀಯರಲ್ಲಿ ಹೆಚ್ಚಿನವರು ಕೇರಳದವರಾಗಿರುವುದರಿಂದ ವಿಮಾನ ಮೊದಲು ಕೊಚ್ಚಿಯಲ್ಲಿ ಲ್ಯಾಂಡ್ ಆಗಲಿದೆ ಎಂದು ದೆಹಲಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಮನಕಲಕುವ ಘಟನೆ: ದೊಡ್ಡ ಕನಸು ಹೊತ್ತು 17 ದಿನಗಳ ಹಿಂದಷ್ಟೇ ಕುವೈತ್ ಗೆ ತೆರಳಿದ್ದ ಕೇರಳದ ಕೊಲ್ಲಂ ನಿವಾಸಿ ಸಜೀವ ದಹನ!

ಮೃತಪಟ್ಟವರಲ್ಲಿ ಕೆಲವರು ಉತ್ತರ ಭಾರತದವರಿದ್ದು, ವಿಮಾನವು ಕೊಚ್ಚಿಯಿಂದ ದೆಹಲಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

"ಎಲೆಕ್ಟ್ರಿಕಲ್ ಸರ್ಕ್ಯೂಟ್" ನಿಂದ ಈ ಭೀಕರ ಅಗ್ನಿ ಅವಘಡ ಸಂಭವಿಸಿದೆ ಎಂದು ಕುವೈತ್ ಅಗ್ನಿಶಾಮಕ ದಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com