ರೈತರ ಪ್ರತಿಭಟನೆ: ಮಾರ್ಚ್ 10 ಕ್ಕೆ 'ರೈಲ್ ರೋಕೋ'ಗೆ ಕರೆ, ಮಾರ್ಚ್ 6 ರಂದು ದೆಹಲಿ ಚಲೋ

ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತೊಂದು ಹಂತಕ್ಕೆ ಸಾಗಿದ್ದು, ರೈತಪರ ಸಂಘಟನೆಗಳು ಮಾರ್ಚ್ 10 ಕ್ಕೆ 'ರೈಲ್ ರೋಕೋ' ಚಳುವಳಿಗೆ ಕರೆ ನೀಡಿವೆ.
ಅಂಬಾಲದಲ್ಲಿ 'ದೆಹಲಿ ಚಲೋ' ಮೆರವಣಿಗೆ ನಡೆಸುತ್ತಿರುವ ರೈತರು.
ಅಂಬಾಲದಲ್ಲಿ 'ದೆಹಲಿ ಚಲೋ' ಮೆರವಣಿಗೆ ನಡೆಸುತ್ತಿರುವ ರೈತರು.PTI
Updated on

ಚಂಡೀಗಢ: ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತೊಂದು ಹಂತಕ್ಕೆ ಸಾಗಿದ್ದು, ರೈತಪರ ಸಂಘಟನೆಗಳು ಮಾರ್ಚ್ 10 ಕ್ಕೆ 'ರೈಲ್ ರೋಕೋ' ಚಳುವಳಿಗೆ ಕರೆ ನೀಡಿವೆ.

ರೈತ ಮುಖಂಡರಾದ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಮಾರ್ಚ್ 6 ರಂದು ದೆಹಲಿ ಚಲೋ ಪ್ರತಿಭಟನೆಗಾಗಿ ದೇಶಾದ್ಯಂತ ಭಾನುವಾರ ಕರೆ ನೀಡಿದ್ದು, ಮಾರ್ಚ್ 10 ರಂದು ದೇಶಾದ್ಯಂತ ನಾಲ್ಕು ಗಂಟೆಗಳ ಕಾಲ 'ರೈಲ್ ರೋಕೋ'ಗೂ ಕರೆ ನೀಡಿದ್ದಾರೆ. ಅಂತೆಯೇ ಅಸ್ತಿತ್ವದಲ್ಲಿರುವ ಪ್ರತಿಭಟನಾ ಸ್ಥಳಗಳಲ್ಲಿ ರೈತರ ನಿರಂತರ ಆಂದೋಲನವನ್ನು ತೀವ್ರಗೊಳಿಸಲಾಗುವುದು ಮತ್ತು ತಮ್ಮ ಬೇಡಿಕೆಗಳನ್ನು ಸರ್ಕಾರದಿಂದ ಈಡೇರಿಸುವವರೆಗೆ ಇದು ಮುಂದುವರಿಯುತ್ತದೆ ಎಂದು ಇಬ್ಬರು ರೈತ ಮುಖಂಡರು ಪ್ರತಿಪಾದಿಸಿದರು.

ಅಂಬಾಲದಲ್ಲಿ 'ದೆಹಲಿ ಚಲೋ' ಮೆರವಣಿಗೆ ನಡೆಸುತ್ತಿರುವ ರೈತರು.
ಕೇಂದ್ರದೊಂದಿಗಿನ ಮಾತುಕತೆ ವಿಫಲ; ಆರು ರೈತರ ಸಾವಿನ ನಡುವೆಯೂ ಮುಂದುವರಿದ ರೈತರ ಪ್ರತಿಭಟನೆ

ಖಾನೌರಿಯಲ್ಲಿ ಹರಿಯಾಣದ ಭದ್ರತಾ ಸಿಬ್ಬಂದಿಯೊಂದಿಗಿನ ಘರ್ಷಣೆಯಲ್ಲಿ ಇತ್ತೀಚೆಗೆ ಸಾವನ್ನಪ್ಪಿದ ರೈತನ ಸ್ಥಳೀಯ ಗ್ರಾಮವಾದ ಬಟಿಂಡಾ ಜಿಲ್ಲೆಯ ಬಲ್ಲೊಹ್ ಗ್ರಾಮದಲ್ಲಿ ಮಾತನಾಡಿದ ಅವರು, ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ರೈತರು ತಮ್ಮ ಬೇಡಿಕೆಗಳನ್ನು ಸ್ವೀಕರಿಸಲು ಸರ್ಕಾರವನ್ನು ಒತ್ತಾಯಿಸಲು 'ದೆಹಲಿ ಚಲೋ' ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾರೆ, ಇದರಲ್ಲಿ ಕೇಂದ್ರವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನು ಖಾತರಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪಂಜಾಬ್ ಮತ್ತು ಹರಿಯಾಣದ ರೈತರು ಶಂಭು ಮತ್ತು ಖಾನೌರಿ ಗಡಿಗಳಲ್ಲಿ ನಡೆಯುತ್ತಿರುವ ಆಂದೋಲನವನ್ನು ಬೆಂಬಲಿಸುವುದನ್ನು ಮುಂದುವರಿಸಿದರೆ, ಇತರ ರಾಜ್ಯಗಳ ರೈತರು ಮತ್ತು ರೈತ ಕಾರ್ಮಿಕರು ಮಾರ್ಚ್ 6 ರಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗೆ ದೆಹಲಿ ತಲುಪಬೇಕು ಎಂದು ಎರಡೂ ವೇದಿಕೆಗಳು ನಿರ್ಧರಿಸಿದವು.

ರೈತರ ಪ್ರತಿಭಟನೆ

‘ದಿಲ್ಲಿ ಚಲೋ’: ಕೇಂದ್ರದೊಂದಿಗಿನ ಒಪ್ಪಂದ ಕೈ ತಪ್ಪಿ ಆರು ರೈತರ ಸಾವಿನ ನಡುವೆಯೂ ಪ್ರತಿಭಟನೆ ಮುಂದುವರಿದಿದೆ. ಮಾರ್ಚ್ 6 ರಂದು ದೆಹಲಿ ಚಲೋ ಪ್ರತಿಭಟನೆಗೆ ಕರೆ ನೀಡಿದ್ದು, ಟ್ರಾಕ್ಟರ್ ಟ್ರಾಲಿಗಳಲ್ಲಿ ತಲುಪಲು ಸಾಧ್ಯವಾಗದ ದೂರದ ರಾಜ್ಯಗಳ ರೈತರು ರೈಲು ಮತ್ತು ಇತರ ಸಾರಿಗೆಯ ಮೂಲಕ ದೆಹಲಿಗೆ ಹೋಗಬೇಕು. ಎಂದು ಪಂಧೇರ್ ಬಲ್ಲೋದಲ್ಲಿ ನಡೆದ ಸಭೆಯಲ್ಲಿ ಕರೆ ನೀಡಲಾಗಿದೆ.

ಅಂಬಾಲದಲ್ಲಿ 'ದೆಹಲಿ ಚಲೋ' ಮೆರವಣಿಗೆ ನಡೆಸುತ್ತಿರುವ ರೈತರು.
ಲೋಕಸಭಾ ಚುನಾವಣೆ; ಮಾದರಿ ನೀತಿ ಸಂಹಿತೆ ಜಾರಿ ನಂತರವೂ ರೈತರ ಪ್ರತಿಭಟನೆ ನಿಲ್ಲಲ್ಲ!

ಅಲ್ಲದೆ "ಶಂಭು ಮತ್ತು ಖಾನೌರಿ ಗಡಿಯಲ್ಲಿ, ಆಂದೋಲನವು ಮೊದಲಿನಂತೆಯೇ ಮುಂದುವರಿಯುತ್ತದೆ ಮತ್ತು ಮತ್ತಷ್ಟು ತೀವ್ರಗೊಳ್ಳುತ್ತದೆ. ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಈ ಆಂದೋಲನವನ್ನು ದೇಶಾದ್ಯಂತ ಹರಡಲು ಎರಡು ವೇದಿಕೆಗಳು ದೇಶಾದ್ಯಂತ ರೈತರು ಮತ್ತು ಕಾರ್ಮಿಕರಿಗೆ ಕರೆ ನೀಡಿದ್ದು, ಮಾರ್ಚ್ 10 ರಂದು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ದೇಶದಲ್ಲಿ 'ರೈಲ್ ರೋಕೋ' ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಪಂಧೇರ್ ಹೇಳಿದರು.

ಪಂಜಾಬ್‌ನ ಎಲ್ಲಾ ಪಂಚಾಯತ್‌ಗಳು ರೈತರ ಬೇಡಿಕೆಗಳನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸಬೇಕು ಮತ್ತು ಪ್ರತಿ ಹಳ್ಳಿಯಿಂದ ಟ್ರಾಕ್ಟರ್ ಟ್ರಾಲಿ ಪ್ರತಿಭಟನಾ ಗಡಿಗಳನ್ನು ತಲುಪುತ್ತದೆ. ಹರಿಯಾಣ ಪೊಲೀಸರು ಇತ್ತೀಚೆಗೆ ಬಳಸಿದಂತೆ ರೈತರ ಆಂದೋಲನದಲ್ಲಿ ಕೇಂದ್ರವು ಹಿಂದೆಂದೂ ಡ್ರೋನ್‌ಗಳನ್ನು ಬಳಸಿಲ್ಲ. ಹರಿಯಾಣ ಅಧಿಕಾರಿಗಳು ಶಂಭು ಮತ್ತು ಖಾನೌರಿಯನ್ನು ತಡೆಹಿಡಿದು ಪಂಜಾಬ್-ಹರಿಯಾಣ ಅಂತರಾಷ್ಟ್ರೀಯ ಗಡಿಯಂತೆ ಮಾಡಿದ್ದಾರೆ.

ಅಂಬಾಲದಲ್ಲಿ 'ದೆಹಲಿ ಚಲೋ' ಮೆರವಣಿಗೆ ನಡೆಸುತ್ತಿರುವ ರೈತರು.
ರೈತರ ಪ್ರತಿಭಟನೆ: 177 ಸಾಮಾಜಿಕ ಜಾಲತಾಣ ಖಾತೆ, ವೆಬ್ ಲಿಂಕ್ ಗಳಿಗೆ ಕೇಂದ್ರ ಸರ್ಕಾರ ತಾತ್ಕಾಲಿಕ ನಿರ್ಬಂಧ

ಅವರ ದೆಹಲಿ ಚಲೋ ಮೆರವಣಿಗೆಯನ್ನು ತಡೆಯಲು ಕೇಂದ್ರವು ಎಲ್ಲಾ ತಂತ್ರಗಳನ್ನು ಬಳಸಿತು. ಪ್ರಸ್ತುತ ಆಂದೋಲನವು ಪಂಜಾಬ್‌ಗೆ ಸೀಮಿತವಾಗಿದೆ ಮತ್ತು ಹೋರಾಟವು ಕೇವಲ ಎರಡು ವೇದಿಕೆಗಳ ನೇತೃತ್ವದಲ್ಲಿದೆ ಎಂಬ ಗ್ರಹಿಕೆಯನ್ನು ನಿರ್ಮಿಸಲು ಕೇಂದ್ರವು ಪ್ರಯತ್ನಿಸುತ್ತಿದೆ. ರೈತರ ಸಮಸ್ಯೆಯನ್ನು ಪರಿಹರಿಸಲು ಕೇಂದ್ರಕ್ಕೆ ಇಷ್ಟವಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಒಡೆದು ಆಳುವ ರಾಜಕಾರಣ ಮಾಡುತ್ತಿದೆ ಎಂದು ಪಂಧೇರ್ ಆರೋಪಿಸಿದರು.

ಅಂತೆಯೇ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದಾಗ ಆಂದೋಲನಕ್ಕೆ ಕಡಿವಾಣ ಬೀಳಬಹುದು ಎಂಬ ಗ್ರಹಿಕೆ ಸರಿಯಲ್ಲ. ನಾವು ಇಂದು, ನಾಳೆ ಹೋರಾಡಬೇಕಾಗಬಹುದು, ಆದರೆ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ಭಾರತವು ಡಬ್ಲ್ಯುಟಿಒ ಒಪ್ಪಂದದಿಂದ ಹೊರಬರಬೇಕು ಎಂದು ಪಂಧೇರ್ ಪುನರುಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com