ಲೋಕಸಭಾ ಚುನಾವಣೆ: ಮಾ.19ಕ್ಕೆ ಸಿಡಬ್ಲ್ಯೂಸಿ ಸಭೆ; ಪ್ರಣಾಳಿಕೆಗೆ ಅಂತಿಮ ರೂಪ

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮಾರ್ಚ್ 19 ರಂದು ನಡೆಸಲಿರುವ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಚರ್ಚಿಸಿ ಅದಕ್ಕೆ ಅಂತಿಮ ರೂಪ ನೀಡಲಿದೆ.
ರಾಹುಲ್, ಖರ್ಗೆ, ಸೋನಿಯಾ ಸಾಂದರ್ಭಿಕ ಚಿತ್ರ
ರಾಹುಲ್, ಖರ್ಗೆ, ಸೋನಿಯಾ ಸಾಂದರ್ಭಿಕ ಚಿತ್ರ

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮಾರ್ಚ್ 19 ರಂದು ನಡೆಸಲಿರುವ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಚರ್ಚಿಸಿ ಅದಕ್ಕೆ ಅಂತಿಮ ರೂಪ ನೀಡಲಿದೆ.

ಏಪ್ರಿಲ್ 19 ರಿಂದ ಪ್ರಾರಂಭವಾಗುವ ಏಳು ಹಂತಗಳ ಚುನಾವಣೆಗೆ ಪಕ್ಷದ ಉಳಿದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯು ಮಾರ್ಚ್ 19 ಮತ್ತು 20 ರಂದು ಸಭೆ ಸೇರುವ ಸಾಧ್ಯತೆಯಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸಿಡಬ್ಲ್ಯುಸಿ ಮಾರ್ಚ್ 19 ರಂದು ಸಭೆ ಸೇರಲಿದ್ದು,ನ್ಯಾಯಕ್ಕಾಗಿ ಐದು 'ಗ್ಯಾರಂಟಿಗಳನ್ನು ಹೊಂದಿರುವ ಕರಡು ಪ್ರಣಾಳಿಕೆಗೆ ತನ್ನ ಒಪ್ಪಿಗೆ ನೀಡುತ್ತದೆ ಎಂದು ತಿಳಿಸಿದರು.

ರಾಹುಲ್, ಖರ್ಗೆ, ಸೋನಿಯಾ ಸಾಂದರ್ಭಿಕ ಚಿತ್ರ
ಮಾ.20ರಂದು ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ: ಡಿ ಕೆ ಶಿವಕುಮಾರ್

ಪಕ್ಷವು ಈಗಾಗಲೇ ಘೋಷಿಸಿರುವ25 ಗ್ಯಾರಂಟಿಗಳೊಂದಿಗೆ 'ಐದು ನ್ಯಾಯ'ಗಳಾದ, ಭಾಗಿದರಿ ನ್ಯಾಯ', 'ಕಿಸಾನ್ ನ್ಯಾಯ', 'ನಾರಿ ನ್ಯಾಯ', 'ಶ್ರಮಿಕ್ ನ್ಯಾಯ' ಮತ್ತು 'ಯುವ ನ್ಯಾಯ'ಕ್ಕಾಗಿ ಹೋರಾಟ ನಡೆಸಲಿದೆ.

"ಇವುಗಳು ಕಾಂಗ್ರೆಸ್ ಪಕ್ಷದ ಭರವಸೆಗಳು ಮತ್ತು ಒಬ್ಬ ವ್ಯಕ್ತಿಯಿಂದ ಅಲ್ಲ" ಎಂದು ಹೇಳುವ ಮೂಲಕ "ಮೋದಿ ಕಿ ಗ್ಯಾರಂಟಿ" ನೀಡುವುದಾಗಿ ಹೇಳುತ್ತಿರುವ ಪ್ರಧಾನಿಯನ್ನು ಟೀಕಿಸಿದರು.

ಪಕ್ಷದ ಸಿಇಸಿ ಚರ್ಚಿಸಿ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಇದುವರೆಗೆ ಒಟ್ಟು 82 ಅಭ್ಯರ್ಥಿಗಳನ್ನು ಎರಡು ಪ್ರತ್ಯೇಕ ಪಟ್ಟಿಗಳಲ್ಲಿ ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲಿ 39 ಮತ್ತು ಎರಡನೇ ಪಟ್ಟಿಯಲ್ಲಿ 43 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com