ಗುಜರಾತ್ ಲೋಕಸಭೆ ಚುನಾವಣೆ: ಕೇಸರಿ ಭದ್ರಕೋಟೆ ಉಳಿಸಿಕೊಳ್ಳಲು ಬಿಜೆಪಿ ಸಜ್ಜು!

ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಆಳಿದ ನಂತರ, ಬಿಜೆಪಿ ಕಳೆದ ಎರಡು ಚುನಾವಣೆಗಳಲ್ಲಿ ಎಲ್ಲಾ 26 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಅಧಿಕಾರವನ್ನು ಬಲಪಡಿಸಿಕೊಂಡಿದ್ದು ‘ಹ್ಯಾಟ್ರಿಕ್’ ನಿರೀಕ್ಷೆಯಲ್ಲಿದೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ
ನರೇಂದ್ರ ಮೋದಿ ಮತ್ತು ಅಮಿತ್ ಶಾ

ಅಹಮದಾಬಾದ್: ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಆಳಿದ ನಂತರ, ಬಿಜೆಪಿ ಕಳೆದ ಎರಡು ಚುನಾವಣೆಗಳಲ್ಲಿ ಎಲ್ಲಾ 26 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಅಧಿಕಾರವನ್ನು ಬಲಪಡಿಸಿಕೊಂಡಿದ್ದು ‘ಹ್ಯಾಟ್ರಿಕ್’ ನಿರೀಕ್ಷೆಯಲ್ಲಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ, ನಾಲ್ವರು ಬಿಜೆಪಿ ಅಭ್ಯರ್ಥಿಗಳು 40% ಕ್ಕಿಂತ ಹೆಚ್ಚು ಮತಗಳನ್ನು ಮತ್ತು ಏಳು ಅಭ್ಯರ್ಥಿಗಳು ಶೇ. 30 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ ಆರ್ ಪಾಟೀಲ್ ನವಸಾರಿ 6,89,668 ಮತಗಳಿಂದ ಗೆದ್ದಿದ್ದಾರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ 5,57,014 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ದಾಹೋದ್ ಅಭ್ಯರ್ಥಿ ಜಶ್ವಂತ್‌ಸಿನ್ಹ್ ಭಂಭೋರ್ ಅವರು ಶೇ. 12 ಮತಗಳ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಪಾಟೀಲ್ ಅವರು ಈ ಬಾರಿ 26 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದು, ಪ್ರತಿ ಸ್ಥಾನದಲ್ಲೂ 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಇತ್ತೀಚೆಗಷ್ಟೇ ಪಾಟೀಲರು ಸಾರ್ವಜನಿಕ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಬಾರಿಸಲಿದ್ದಾರೆ ಎಂದು ಹೇಳಿದ್ದರು. ಆದಾಗ್ಯೂ, ಎಲ್ಲಾ ಸಂಸದೀಯ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದ ಹೊರತಾಗಿಯೂ, ಪ್ರಬಲ ಪ್ರತಿಸ್ಪರ್ಧಿಗಳು, ಪಕ್ಷದ ಆಂತರಿಕ ಗುಂಪುಗಾರಿಕೆ ಮತ್ತು ಕೆಲವು ಅಭ್ಯರ್ಥಿಗಳ ಉಮೇದುವಾರಿಕೆಯನ್ನು ವಿರೋಧಿಸುತ್ತಿರುವ ಕಾರ್ಯಕರ್ತರಿಂದಾಗಿ ಕೆಲವು ಸ್ಥಾನಗಳಲ್ಲಿ ತೊಂದರೆಯನ್ನು ಎದುರಿಸುತ್ತಿದೆ. ಬನಸ್ಕಾಂತ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಗೆನಿಬೆನ್ ಠಾಕೋರ್(48) ಅವರು ಪ್ರಸ್ತುತ ಗುಜರಾತ್ ವಿಧಾನಸಭೆಯಲ್ಲಿ ಏಕೈಕ ಮಹಿಳಾ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅವರು ಆಕ್ರಮಣಕಾರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ರೇಖಾಬೆನ್ ಚೌಧರಿ ಅವರಿಗೆ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ.

ನರೇಂದ್ರ ಮೋದಿ ಮತ್ತು ಅಮಿತ್ ಶಾ
ಗುಜರಾತ್: 200 ಕೋಟಿ ರೂ. ಮೌಲ್ಯದ ಸಂಪತ್ತು ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಉದ್ಯಮಿ ದಂಪತಿ!

ಉತ್ತರ ಗುಜರಾತ್‌ನಲ್ಲಿ ಸಬರಕಾಂತ ಅಧಿಕೃತ ಅಭ್ಯರ್ಥಿ ಸೋಭಾನ ಬರಿಯಾಯಾಗೆ ವಿರೋಧ ವ್ಯಕ್ತವಾಗಿದೆ. ಅವರನ್ನು ಹೊರಗಿನವರೆಂದು ಕಾಣುವ ಕಾರಣ ಬಿಜೆಪಿ ನಾಯಕರು ಅವರ ನಾಮಪತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪತಿ ಮಹೇಂದ್ರ ಬಾರಯ್ಯ ಎರಡು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದರು.

ತನ್ನ ಹೆಸರನ್ನು ಘೋಷಿಸುವ ಒಂದು ದಿನದ ಮೊದಲು, ಅವರು ಸರ್ಕಾರಿ ಶಿಕ್ಷಕಿ ಹುದ್ದೆಗೆ ರಾಜೀನಾಮೆ ನೀಡಿದರು. ಅದಲ್ಲದೆ, ಪಕ್ಷದ ನಾಯಕತ್ವವು ತಮ್ಮ ಅಗತ್ಯಗಳನ್ನು ಬದಿಗೊತ್ತುತ್ತಿದೆ ಎಂಬ ಭಾವನೆಯೂ ಪಕ್ಷದ ಒಂದು ವರ್ಗವನ್ನು ಆವರಿಸಿತ್ತು. ರಾಜ್ಯದ ಐದು ಸ್ಥಾನಗಳಲ್ಲಿ ಅಭ್ಯರ್ಥಿಗಳ ವಿಚಾರದಲ್ಲಿ ಪಕ್ಷದೊಳಗೆ ಉಂಟಾದ ಆಂತರಿಕ ಘರ್ಷಣೆಗಳಿಂದ ಪಕ್ಷ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಪಕ್ಷದ ನಾಯಕರು ಭಿನ್ನಮತ ಶಮನ ಮಾಡಲು ನಂದಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ , ಹೀಗಾಗಿ ಕೆಲವು ಸ್ಥಾನಗಳಲ್ಲೆ ಗೆಲುವು ಕೈ ತಪ್ಪುವಂತೆ ತೋರುತ್ತಿದೆ ಎಂದು ಮಧ್ಯ ಗುಜರಾತ್‌ನ ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಬಿಜೆಪಿ ಮುಖ್ಯ ವಕ್ತಾರ ಯಮಲ್ ವ್ಯಾಸ್ ಮೋದಿ ಮ್ಯಾಜಿಕ್, ರಾಮಮಂದಿರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯಿಂದಾಗಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಇವೆಲ್ಲವೂ ಖಂಡಿತವಾಗಿಯೂ ಅಪೇಕ್ಷಿತ ಸಾರ್ವಜನಿಕ ಬೆಂಬಲವನ್ನು ಪಡೆಯುತ್ತವೆ ಎಂದು ಅವರು ಹೇಳಿದರು. ಅಪರೂಪದ ಘಟನೆಯಲ್ಲಿ ಬರೋಡಾ ಮತ್ತು ಸಬರಕಾಂತ ಅಭ್ಯರ್ಥಿಗಳನ್ನು ಬಿಜೆಪಿ ಬದಲಾಯಿಸಿದೆ. ಎರಡು ಅವಧಿಯ ಸಂಸದರಾಗಿದ್ದ ರಂಜನ್‌ಬೆನ್ ಭಟ್ ಅವರು ಬರೋಡಾದ ಟಿಕೆಟ್ ಪಡೆದಿದ್ದರು ಆದರೆ ವಿರೋಧವನ್ನು ಎದುರಿಸಿದರು, ಹೀಗಾಗಿ ಅಭ್ಯರ್ಥಿ ಬದಲಾಯಿಸಲಾಯಿತು. ಅಂತೆಯೇ, ಭಿಖಾಜಿ ಠಾಕೋರ್ ಅವರನ್ನು ಸಬರಕಾಂತಕ್ಕೆ ನಾಮನಿರ್ದೇಶನ ಮಾಡಲಾಯಿತು, ಆದರೆ ಪ್ರತಿಭಟನೆಯ ನಂತರ ಅವರ ಉಮೇದುವಾರಿಕೆಯನ್ನು ಬದಲಾಯಿಸಲಾಯಿತು. ಅಮ್ರೇಲಿ ಮತ್ತು ಸುರೇಂದ್ರ ನಗರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು, ಕಡಿಮೆ ಪರಿಚಯವಿರುವ ನಾಯಕರಿಗೆ ಟಿಕೆಟ್ ಹಂಚಿಕೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com