ಅನಾರೋಗ್ಯದ ನೆಪವೊಡ್ಡಿ ಸಿಬ್ಬಂದಿ ಸಾಮೂಹಿಕ ರಜೆ: 70ಕ್ಕೂ ಹೆಚ್ಚು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳ ಹಾರಾಟ ತಾತ್ಕಾಲಿಕ ರದ್ದು

ಟಾಟಾ ಗ್ರೂಪ್‌ನ ಏರ್‌ಲೈನ್ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಿನ್ನೆ ಮಂಗಳವಾರ ರಾತ್ರಿಯಿಂದ ಇಂದು ಬುಧವಾರ ಬೆಳಗಿನ ತನಕ 70 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳನ್ನು ರದ್ದುಗೊಳಿಸಿದ್ದು, ಸಿಬ್ಬಂದಿಯ ಒಂದು ವಿಭಾಗವು "ಸಾಮೂಹಿಕ ಅನಾರೋಗ್ಯ ರಜೆ" ಯ ಮೇಲೆ ತೆರಳಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಟಾಟಾ ಗ್ರೂಪ್‌ನ ಏರ್‌ಲೈನ್ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಿನ್ನೆ ಮಂಗಳವಾರ ರಾತ್ರಿಯಿಂದ ಇಂದು ಬುಧವಾರ ಬೆಳಗಿನ ತನಕ 70 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳನ್ನು ರದ್ದುಗೊಳಿಸಿದ್ದು, ಸಿಬ್ಬಂದಿಯ ಒಂದು ವಿಭಾಗವು "ಸಾಮೂಹಿಕ ಅನಾರೋಗ್ಯ ರಜೆ" ಯ ಮೇಲೆ ತೆರಳಿತ್ತು. ಈ "ಸಾಮೂಹಿಕ ಅನಾರೋಗ್ಯ ರಜೆ" ಯ ಕಾರಣವನ್ನು ಇನ್ನೂ ದೃಢೀಕರಿಸಲಾಗಿಲ್ಲ, ಉದ್ಯಮದ ಮೂಲಗಳು ಹೇಳುವಂತೆ ಏರ್ ಲೈನ್ಸ್ ನ ಸಿಬ್ಬಂದಿ ಸದಸ್ಯರು ಆಪಾದಿತ ಅಧಿಕಾರ ದುರುಪಯೋಗದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

ನಮ್ಮ ಕ್ಯಾಬಿನ್ ಸಿಬ್ಬಂದಿಯ ಒಂದು ವಿಭಾಗವು ಕೊನೆಯ ಕ್ಷಣದಲ್ಲಿ ಅನಾರೋಗ್ಯ ರಜೆಯ ಮೇಲೆ ತೆರಳಿದೆ ಎಂದು ಏರ್ ಲೈನ್ಸ್ ವರದಿ ಮಾಡಿದೆ, ಕಳೆದ ರಾತ್ರಿಯಿಂದ ವಿಮಾನ ಹಾರಾಟಗಳು ವಿಳಂಬವಾಗಿದ್ದವು ಮತ್ತು ಹಲವು ವಿಮಾನಗಳು ರದ್ದುಗೊಂಡವು.

ಈ ಅನಿರೀಕ್ಷಿತ ಅಡಚಣೆಗಾಗಿ ನಾವು ನಮ್ಮ ಅತಿಥಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ರದ್ದತಿಯಿಂದ ಅನನುಕೂಲವಾದ ಅತಿಥಿಗಳಿಗೆ ಪೂರ್ಣ ಮರುಪಾವತಿ ಅಥವಾ ಇನ್ನೊಂದು ದಿನಾಂಕಕ್ಕೆ ಪೂರಕ ಮರುಹೊಂದಿಕೆಯನ್ನು ನೀಡಲಾಗುತ್ತದೆ. ಇಂದು ನಮ್ಮೊಂದಿಗೆ ವಿಮಾನದಲ್ಲಿ ಹಾರಾಟ ನಡೆಸುವ ಅತಿಥಿಗಳು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ಹಾರಾಟದ ಮೇಲೆ ಪರಿಣಾಮ ಬೀರಿದೆಯೇ ಎಂದು ಪರಿಶೀಲಿಸಬೇಕಾಗಿದೆ ಎಂದರು.

ಕಡಿಮೆ-ವೆಚ್ಚದ ಕ್ಯಾರಿಯರ್‌ನಲ್ಲಿ ಕ್ಯಾಬಿನ್ ಸಿಬ್ಬಂದಿಯ ಒಂದು ವಿಭಾಗದಲ್ಲಿ ಅಸಮಾಧಾನವು ಕೆಲವು ಸಮಯದಿಂದ ಹುಟ್ಟಿಕೊಂಡಿತ್ತು. ವಿಶೇಷವಾಗಿ AIX ಕನೆಕ್ಟ್, ಹಿಂದಿನ ಏರ್‌ಏಷ್ಯಾ ಇಂಡಿಯಾದ ವಿಲೀನ ಪ್ರಕ್ರಿಯೆಯ ಪ್ರಾರಂಭದ ನಂತರ ಇದು ಭುಗಿಲೆದ್ದಿತು.

ಸಾಂದರ್ಭಿಕ ಚಿತ್ರ
ಮೈಸೂರು, ಕಲಬುರಗಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇ.30 ರಷ್ಟು ಕುಸಿತ!

ಮೊನ್ನೆ ಸೋಮವಾರ ಸಂಜೆಯಿಂದ ಹಲವಾರು ಕ್ಯಾಬಿನ್ ಸಿಬ್ಬಂದಿ ತಮ್ಮ ಅನಾರೋಗ್ಯ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಸಾಕಷ್ಟು ಕ್ಯಾಬಿನ್ ಸಿಬ್ಬಂದಿಗಳಿಲ್ಲದ ಕಾರಣ, ಕೊಚ್ಚಿ, ಕಲ್ಲಿಕೋಟೆ ಮತ್ತು ಬೆಂಗಳೂರು ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿ "ಗಟ್ಟಲೆ ವಿಮಾನಗಳನ್ನು" ರದ್ದುಗೊಳಿಸಲಾಗಿದೆ.

ಕಳೆದ ತಿಂಗಳ ಕೊನೆಯಲ್ಲಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್ ಸಿಬ್ಬಂದಿಯ ಗುಂಪು ವಿಮಾನಯಾನ ಸಂಸ್ಥೆಯನ್ನು ತಪ್ಪಾಗಿ ನಿರ್ವಹಿಸುತ್ತಿದೆ. ಸಿಬ್ಬಂದಿಯ ಚಿಕಿತ್ಸೆಯಲ್ಲಿ ಸಮಾನತೆಯ ಕೊರತೆಯಿದೆ ಎಂದು ಆರೋಪಿಸಿತ್ತು. ಸುಮಾರು 300 ಕ್ಯಾಬಿನ್ ಸಿಬ್ಬಂದಿಯನ್ನು ಹೊಂದಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎಂಪ್ಲಾಯೀಸ್ ಯೂನಿಯನ್ (AIXEU), ಏಪ್ರಿಲ್ 26 ರಂದು ಟಾಟಾ ಗ್ರೂಪ್ ಮತ್ತು ಏರ್ ಇಂಡಿಯಾ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದಿದೆ. ಪ್ರತಿಗಳನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಇಒ ಅಲೋಕೆ ಸಿಂಗ್ ಮತ್ತು ಇತರರಿಗೆ ಗುರುತಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com