ಅಮಿತ್ ಶಾ ವಿರುದ್ಧ ಕೆನಡಾ ಸಚಿವರ ಹೇಳಿಕೆ 'ಅಸಂಬದ್ಧ, ಆಧಾರರಹಿತ': ಭಾರತ

ನಡಾದ ಸಚಿವರ ಹೇಳಿಕೆಯನ್ನು "ಅಸಂಬದ್ಧ ಮತ್ತು ಆಧಾರರಹಿತ" ಎಂದು ಭಾರತ ಹೇಳಿದ್ದು, ಸಚಿವರ ಹೇಳಿಕೆ ಕುರಿತ ಪ್ರತಿಕ್ರಿಯೆಯಾಗಿ ಕೆನಡಾದ ಹೈಕಮಿಷನ್‌ನ ಪ್ರತಿನಿಧಿಯನ್ನು ಕರೆಸಲಾಗಿತ್ತು.
MEA spokesperson Randhir Jaiswal
MEA ವಕ್ತಾರ ರಣಧೀರ್ ಜೈಸ್ವಾಲ್ online desk
Updated on

ನವದೆಹಲಿ: ಗೃಹ ಸಚಿವ ಅಮಿತ್ ಶಾ ಖಲಿಸ್ತಾನಿ ಉಗ್ರರನ್ನು ಗುರಿಯಾಗಿಸಲು ಆದೇಶಿಸಿದ್ದಾರೆ ಎಂಬ ಕೆನಡಾದ ಸಚಿವರೊಬ್ಬರ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ.

ಕೆನಡಾದ ಸಚಿವರ ಹೇಳಿಕೆಯನ್ನು "ಅಸಂಬದ್ಧ ಮತ್ತು ಆಧಾರರಹಿತ" ಎಂದು ಭಾರತ ಹೇಳಿದ್ದು, ಸಚಿವರ ಹೇಳಿಕೆ ಕುರಿತ ಪ್ರತಿಕ್ರಿಯೆಯಾಗಿ ಕೆನಡಾದ ಹೈಕಮಿಷನ್‌ನ ಪ್ರತಿನಿಧಿಯನ್ನು ಕರೆಸಲಾಗಿತ್ತು.

ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ದೇಶದ ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಯ ಸ್ಥಾಯಿ ಸಮಿತಿಗೆ ಶಾ ಅವರು ಖಲಿಸ್ತಾನಿ ಉಗ್ರರ ವಿರುದ್ಧ ಹಿಂಸಾಚಾರ, ಬೆದರಿಕೆ ಮತ್ತು ಗುಪ್ತಚರ ಸಂಗ್ರಹವನ್ನು ಒಳಗೊಂಡ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದರು.

ಶುಕ್ರವಾರದ ಹೇಳಿಕೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕೆನಡಾದ ಪ್ರತಿನಿಧಿಗೆ ರಾಜತಾಂತ್ರಿಕ ಟಿಪ್ಪಣಿಯನ್ನು ತಲುಪಿಸಲಾಗಿರುವುದನ್ನು ಖಚಿತಪಡಿಸಿದ್ದಾರೆ.

ಕೆನಡಾದ ಉಪ ಸಚಿವ ಡೇವಿಡ್ ಮಾರಿಸನ್ ಅವರು ಕೇಂದ್ರ ಗೃಹ ಸಚಿವರೆಡೆಗೆ ಮಾಡಿದ ಆಧಾರರಹಿತ ಉಲ್ಲೇಖಗಳ ವಿರುದ್ಧ ಭಾರತ ಸರ್ಕಾರದ ಬಲವಾದ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ ಎಂದು ಜೈಸ್ವಾಲ್ ಹೇಳಿದ್ದಾರೆ. "ಇಂತಹ ಬೇಜವಾಬ್ದಾರಿ ಕ್ರಮಗಳು ದ್ವಿಪಕ್ಷೀಯ ಸಂಬಂಧಗಳೆಡೆಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ" ಎಂದು MEA ವಕ್ತಾರರು ಎಚ್ಚರಿಸಿದ್ದಾರೆ.

ಮಂಗಳವಾರ ಹಿರಿಯ ಅಧಿಕಾರಿಯು ಯುಎಸ್ ಮಾಧ್ಯಮಗಳೊಂದಿಗೆ ಸೂಕ್ಷ್ಮ ಗುಪ್ತಚರವನ್ನು ಹಂಚಿಕೊಳ್ಳುವುದನ್ನು ಒಪ್ಪಿಕೊಂಡಿದ್ದು, ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆದೇಶ ನೀಡಿದ್ದಾರೆ ಎಂದು ಆರೋಪಿಸಿದ್ದರು.

MEA spokesperson Randhir Jaiswal
ನಿಜ್ಜರ್ ಹತ್ಯೆಯಲ್ಲಿ ಅಮಿತ್ ಶಾ ಕೈವಾಡ: ಕೆನಡಾ ಆರೋಪ ಕಳವಳಕಾರಿ ಎಂದ ಅಮೆರಿಕಾ

ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ವಾಷಿಂಗ್ಟನ್ ಪೋಸ್ಟ್‌ಗೆ ಅಮಿತ್ ಶಾ ಅವರ ಒಳಗೊಳ್ಳುವಿಕೆಯನ್ನು ದೃಢಪಡಿಸಿದರು ಆದರೆ ಈ ಮಾಹಿತಿಯನ್ನು ಹೇಗೆ ಪಡೆಯಲಾಗಿದೆ ಎಂಬುದನ್ನು ಬಹಿರಂಗಪಡಿಸಲಿಲ್ಲ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಏಜೆಂಟರನ್ನು ಸಂಪರ್ಕಿಸುವ "ವಿಶ್ವಾಸಾರ್ಹ ಪುರಾವೆ" ಕೆನಡಾವನ್ನು ಹೊಂದಿದೆ ಎಂದು ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಈ ಹಿಂದೆ ಹೇಳಿದ್ದರು, ಇದನ್ನು ಭಾರತೀಯ ಅಧಿಕಾರಿಗಳು ಪದೇ ಪದೇ ನಿರಾಕರಿಸಿದ್ದಾರೆ.

ಅಕ್ಟೋಬರ್ 14 ರಂದು, ಕೆನಡಾ ಭಾರತೀಯ ಹೈಕಮಿಷನರ್ ಮತ್ತು ಇತರ ಐದು ರಾಜತಾಂತ್ರಿಕರನ್ನು ಹೊರಹಾಕಿತು, ಅವರು ಖಲಿಸ್ತಾನಿ ಚಳವಳಿಯ ವಿರುದ್ಧ ಬಲವಂತ ಮತ್ತು ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಕೆನಡಾ ಮಾತ್ರವಲ್ಲದೇ, ನ್ಯೂಯಾರ್ಕ್ ನಗರದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕನನ್ನು ಕೊಲ್ಲಲು ವಿಫಲವಾದ ಸಂಚುಗೆ ಸಂಬಂಧಿಸಿದಂತೆ US ನ್ಯಾಯ ಇಲಾಖೆಯು ಭಾರತೀಯ ಸರ್ಕಾರಿ ನೌಕರನ ವಿರುದ್ಧವೂ ಆರೋಪ ಹೊರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com