ತೂತುಕುಡಿಯಲ್ಲಿ ತಾಮ್ರ ಸ್ಥಾವರ ಘಟಕ ಮುಚ್ಚುವಿಕೆ ವಿರುದ್ಧ ವೇದಾಂತ ಸಲ್ಲಿಸಿದ ಮರುಪರಿಶೀಲನಾ ಅರ್ಜಿ: ಸುಪ್ರೀಂ ಕೋರ್ಟ್ ವಜಾ

ತೂತುಕುಡಿಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದ್ದರಿಂದ 13 ಜನರು ಮೃತಪಟ್ಟ ನಂತರ ಮೇ 2018 ರಿಂದ ಸ್ಥಾವರವನ್ನು ಮುಚ್ಚಲಾಗಿದೆ.
A view of Vedanta’s Sterlite copper unit in Thoothukudi
ತೂತುಕುಡಿಯಲ್ಲಿರುವ ವೇದಾಂತದ ಸ್ಟೆರ್ಲೈಟ್ ತಾಮ್ರದ ಘಟಕದ ನೋಟ
Updated on

ನವದೆಹಲಿ: ತಮಿಳುನಾಡಿನ ತೂತುಕುಡಿಯಲ್ಲಿ ಸ್ಟೈರ್ಲೈಟ್ ತಾಮ್ರ ಸ್ಥಾವರ ಘಟಕವನ್ನು ಮುಚ್ಚುವುದರ ವಿರುದ್ಧ ವೇದಾಂತ ಸಮೂಹ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸ್ಥಳೀಯ ನಿವಾಸಿಗಳ ಆರೋಗ್ಯ ಮತ್ತು ಪ್ರಗತಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿ, ಮಾಲಿನ್ಯದ ಕಾಳಜಿಯಿಂದ ಮೇ 2018 ರಿಂದ ಮುಚ್ಚಲಾಗಿದ್ದ ತೂತುಕುಡಿಯಲ್ಲಿ ತಾಮ್ರ ಸ್ಥಾವರ ಘಟಕವನ್ನು ಪುನಃ ತೆರೆಯಲು ವೇದಾಂತ ಸಮೂಹ ಸಲ್ಲಿಸಿದ್ದ ಮನವಿಯನ್ನು ಫೆಬ್ರವರಿ 29 ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ತೂತುಕುಡಿಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದ್ದರಿಂದ 13 ಜನರು ಮೃತಪಟ್ಟ ನಂತರ ಮೇ 2018 ರಿಂದ ಸ್ಥಾವರವನ್ನು ಮುಚ್ಚಲಾಗಿದೆ.

ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (ಈಗ ನಿವೃತ್ತ) ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಮರುಪರಿಶೀಲನಾ ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ ಪಟ್ಟಿ ಮಾಡಲು ವೇದಾಂತ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತು.

ಪರಿಶೀಲನಾ ಅರ್ಜಿಗಳನ್ನು ಪರಿಶೀಲಿಸಿದಾಗ, ದಾಖಲೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಸುಪ್ರೀಂ ಕೋರ್ಟ್ ನಿಯಮಗಳು 2013 ರ ಆದೇಶ XLVII ನಿಯಮ 1 ರ ಅಡಿಯಲ್ಲಿ ಪರಿಶೀಲನೆಗಾಗಿ ಯಾವುದೇ ಪ್ರಕರಣವನ್ನು ಗುರುತಿಸಿಲ್ಲ, ಹಾಗಾಗಿ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ’ ಎಂದು ಪೀಠವು ತನ್ನ ಅಕ್ಟೋಬರ್ 22ರ ಆದೇಶದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com