ನಮ್ಮ ಗಡಿ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ, ಸೈನಿಕರ ದೃಢತೆಯಲ್ಲಿ ನಮಗೆ ನಂಬಿಕೆ ಇದೆ: ಪ್ರಧಾನಿ ಮೋದಿ

ನಾವು ನಮ್ಮ ಸೈನಿಕರ ದೃಢತೆಯನ್ನು ನಂಬುತ್ತೇವೆ ಹೊರತು ನಮ್ಮ ಶತ್ರುಗಳ ಮಾತನ್ನಲ್ಲ, ನಿಮ್ಮಿಂದ ದೇಶವು ಸುರಕ್ಷಿತವಾಗಿದೆ ಎಂದು ಭಾರತದ ಜನರು ಭಾವಿಸುತ್ತಿದ್ದಾರೆ ಎಂದರು.
PM Narendra Modi
ಪ್ರಧಾನಿ ನರೇಂದ್ರ ಮೋದಿ
Updated on

ಕಚ್ : ಭಾರತವು ತನ್ನ ಗಡಿಭಾಗದ ಒಂದು ಇಂಚು ಭೂಮಿಯನ್ನು ಕೂಡ ಬಿಟ್ಟುಕೊಡುವುದಿಲ್ಲ, ದೇಶ ರಕ್ಷಣೆ ವಿಷಯದಲ್ಲಿ ಜನರಿಗೆ ಈ ದೇಶದ ಮಿಲಿಟರಿ ಶಕ್ತಿ ಮೇಲೆ ಬಲವಾದ ನಂಬಿಕೆಯಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತಿನ ಕಚ್ ಪ್ರದೇಶದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ನಂತರ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತವು ತನ್ನ ಗಡಿಭಾಗದಲ್ಲಿರುವ ಒಂದಿಂಚು ಭೂಮಿಯನ್ನು ಸಹ ಬಿಟ್ಟುಕೊಡುವುದಿಲ್ಲ, ನೆಲದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅದಕ್ಕಾಗಿಯೇ ನಮ್ಮ ನೀತಿಗಳು ನಮ್ಮ ಸಶಸ್ತ್ರ ಪಡೆಗಳ ಸಂಕಲ್ಪದೊಂದಿಗೆ ಹೊಂದಿಕೊಂಡಿವೆ ಎಂದು ಹೇಳಿದರು.

ನಾವು ನಮ್ಮ ಸೈನಿಕರ ದೃಢತೆಯನ್ನು ನಂಬುತ್ತೇವೆ ಹೊರತು ನಮ್ಮ ಶತ್ರುಗಳ ಮಾತನ್ನಲ್ಲ, ನಿಮ್ಮಿಂದ ದೇಶವು ಸುರಕ್ಷಿತವಾಗಿದೆ ಎಂದು ಭಾರತದ ಜನರು ಭಾವಿಸುತ್ತಿದ್ದಾರೆ ಎಂದರು.

ಜಗತ್ತು ನಿಮ್ಮನ್ನು ನೋಡಿದಾಗ ಅದು ಭಾರತದ ಶಕ್ತಿಯನ್ನು ನೋಡುತ್ತದೆ, ಆದರೆ ಶತ್ರುಗಳು ನಿಮ್ಮನ್ನು ನೋಡಿದಾಗ, ಅವರು ತಮ್ಮ ಕೆಟ್ಟ ಯೋಜನೆಗಳಿಂದ ಅಂತ್ಯ ಮಾಡುವುದು ಹೇಗೆ ಎಂದು ಯೋಚಿಸುತ್ತಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com