100 ದಿನಗಳ ಆಡಳಿತ ಪೂರೈಸಿದ ಮೋದಿ 3.0 ಸರ್ಕಾರ: ಮೂಲಸೌಕರ್ಯಕ್ಕೆ ಒತ್ತು, 3 ಲಕ್ಷ ಕೋಟಿ ರೂ. ಯೋಜನೆಗಳ ಆರಂಭ

ಸರ್ಕಾರದ ಮೊದಲ 100 ದಿನಗಳ ಆಡಳಿತದ ಕ್ರಿಯಾ ಯೋಜನೆಯಲ್ಲಿ ಸಾಗರೋಪಾದಿಯಲ್ಲಿ ಕೆಲಸ ಮಾಡಿದ್ದೇವೆ, ಪ್ರತಿ ಕ್ಯಾಬಿನೆಟ್ ಸಭೆಯಲ್ಲಿ ಸೂಚನೆಗಳು ಬರುತ್ತವೆ ಎಂದು ಪ್ರಮುಖ ಸಚಿವಾಲಯಕ್ಕೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ತನ್ನ ಮೊದಲ 100 ದಿನಗಳ ಆಡಳಿತ ಪೂರ್ಣಗೊಳಿಸಿದೆ. ಮೋದಿ 3.0 ಸರ್ಕಾರ ಈ 100 ದಿನಗಳಲ್ಲಿ ಏನೇನು ಕೆಲಸ ಮಾಡಿದೆ ಎಂದು ನೋಡಿದರೆ ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ, ಪ್ರಾಥಮಿಕವಾಗಿ ಬಡವರ ಕಲ್ಯಾಣ, ಅವರ ಭದ್ರತೆ ಮತ್ತು ಘನತೆಯ ಮೇಲೆ ಕೇಂದ್ರೀಕರಿಸಿದೆ. 60-70 ಪ್ರಮುಖ ಅಭಿವೃದ್ಧಿ ಅಂಶಗಳನ್ನು ಒಳಗೊಂಡಿರುವ ಈ ಸಾಧನೆಗಳು ಅಭಿವೃದ್ಧಿ ಹೊಂದಿದ ಭಾರತವನ್ನು (ವಿಕಸಿತ್ ಭಾರತ) ಸಾಧಿಸುವ ನಿಟ್ಟಿನತ್ತ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.

ಸರ್ಕಾರದ ಮೊದಲ 100 ದಿನಗಳ ಆಡಳಿತದ ಕ್ರಿಯಾ ಯೋಜನೆಯಲ್ಲಿ ಸಾಗರೋಪಾದಿಯಲ್ಲಿ ಕೆಲಸ ಮಾಡಿದ್ದೇವೆ, ಪ್ರತಿ ಕ್ಯಾಬಿನೆಟ್ ಸಭೆಯಲ್ಲಿ ಸೂಚನೆಗಳು ಬರುತ್ತವೆ" ಎಂದು ಪ್ರಮುಖ ಸಚಿವಾಲಯಕ್ಕೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಸರ್ಕಾರವು ತನ್ನ 100-ದಿನಗಳ ಕ್ರಿಯಾ ಯೋಜನೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಗಳನ್ನು ಕಾರ್ಯಗತಗೊಳಿಸಿತು. ಮಹಾರಾಷ್ಟ್ರದ ವಾಧವನ್ ಮೆಗಾ ಪೋರ್ಟ್‌ನಂತಹ ಅನೇಕ ಮೆಗಾ ಯೋಜನೆಗಳಿಗೆ ಅನುಮೋದನೆ ನೀಡುವುದರ ಜೊತೆಗೆ ರಸ್ತೆಗಳು, ರೈಲ್ವೆಗಳು, ಬಂದರುಗಳು ಮತ್ತು ವಾಯುಮಾರ್ಗಗಳ ಮೇಲೆ ಕೇಂದ್ರೀಕರಿಸುವ 3 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಇದರ ಅಂದಾಜು ವೆಚ್ಚ 76,200 ಕೋಟಿ ರೂಪಾಯಿಗಳಾಗಿವೆ. ಇದನ್ನು ವಿಶ್ವದ ಟಾಪ್ 10 ಬಂದರುಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಕಳೆದ 100 ದಿನಗಳಲ್ಲಿ ನಾವು ಏನನ್ನು ಸಾಧಿಸಿದ್ದೇವೆಯೋ ಅದು ಮುಂಬರುವ ವರ್ಷಗಳಲ್ಲಿ ಇತರ ಯೋಜನೆಗಳಿಗೆ ಮಾದರಿಯಾಗಲು ನಮಗೆ ಸಹಾಯ ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಲಡಾಖ್ ನ್ನು ಹಿಮಾಚಲ ಪ್ರದೇಶದೊಂದಿಗೆ ಸಂಪರ್ಕಿಸುವ ಶಿಂಖುನ್-ಲಾ ಸುರಂಗದ ಅಡಿಪಾಯವು ಒಂದಾಗಿದೆ. 4.42 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಎಂಟು ಹೊಸ ರೈಲು ಮಾರ್ಗ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ.

9.3 ಕೋಟಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 17 ನೇ ಕಂತುಗಳನ್ನು ಬಿಡುಗಡೆ ಮಾಡಿದೆ ಎಂದು ಸರ್ಕಾರ ಹೇಳಿಕೊಂಡಿದೆ. 2024-25ರ ಖಾರಿಫ್ ಬೆಳೆಗಳಿಗೆ 100 ದಿನಗಳ ಕ್ರಿಯಾ ಯೋಜನೆಯ ಭಾಗವಾಗಿ 12 ಕೋಟಿ ರೈತರಿಗೆ ಲಾಭದಾಯಕವಾಗಿ ಸರ್ಕಾರ ರಚನೆಯಾದ ನಂತರ ಕನಿಷ್ಠ ಮಾರಾಟ ಬೆಲೆ ಮಾಡಲಾಯಿತು. ಕಿಸಾನ್ ಮಿತ್ರ ಮೋದಿ ವರ್ಗದ ಅಡಿಯಲ್ಲಿ ಹೊಸ ರಾಷ್ಟ್ರೀಯ ಸಹಕಾರ ನೀತಿಯ ಕರಡು ನೀತಿಯನ್ನು ಪೂರ್ಣಗೊಳಿಸಲಾಗಿದೆ.

ಇದೇ ವರ್ಗದ ಅಡಿಯಲ್ಲಿ, ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡುವ ಉದ್ದೇಶದಿಂದ 'ಅಗ್ರಿಶೂರ್' ಎಂಬ ಹೊಸ ನಿಧಿಯನ್ನು ಪ್ರಾರಂಭಿಸಿತು, ಸ್ಟಾರ್ಟ್‌ಅಪ್‌ಗಳು ಮತ್ತು ಗ್ರಾಮೀಣ ಉದ್ಯಮಗಳನ್ನು ಬೆಂಬಲಿಸುತ್ತದೆ.

ನಮ್ಮ ಸರ್ಕಾರದ ಮೊದಲ 100 ದಿನಗಳಲ್ಲಿ ಅತ್ಯಂತ ಗಮನಾರ್ಹ ಸಾಧನೆಯೆಂದರೆ ಏಕೀಕೃತ ಪಿಂಚಣಿ ಯೋಜನೆಯ ಅನುಷ್ಠಾನ ಮತ್ತು ಭದ್ರತಾ ಪಡೆಗಳು ಮತ್ತು ಅವರ ಕುಟುಂಬಗಳಿಗೆ 'ಒಂದು ಶ್ರೇಣಿಯ ಒಂದು ಪಿಂಚಣಿ'ಗೆ ಭದ್ರವಾದ ನೆಲವಾಗಿದೆ" ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ
ಅಭಿವೃದ್ಧಿ ಇಲ್ಲದ 100 ದಿನ: ಪ್ರಧಾನಿ ಮೋದಿ ಸರ್ಕಾರಕ್ಕೆ ರಾಹುಲ್ ಧನ್ಯವಾದ!

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 4.27 ಕೋಟಿ ಮನೆಗಳನ್ನು ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. ಲೋಕಸಭೆಯ ಪ್ರಚಾರದ ಸಮಯದಲ್ಲಿ ಬಿಜೆಪಿ ನೀಡಿದ ಭರವಸೆಯಂತೆ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಸರ್ಕಾರವು 2 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನ್ನು ಘೋಷಿಸಿತು, ಇದು ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 41 ಮಿಲಿಯನ್ ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ.

ಅದೇ ಸಮಯದಲ್ಲಿ, 20 ಲಕ್ಷ ಯುವಕರನ್ನು ಕೌಶಲ್ಯಗೊಳಿಸುವ ಗುರಿಯನ್ನು ಸರ್ಕಾರವು ಅನುಮೋದಿಸಿತು. ಸರ್ಕಾರವು 2,500 ಕೋಟಿ ಸಮುದಾಯ ಹೂಡಿಕೆ ನಿಧಿಯನ್ನು ಬಿಡುಗಡೆ ಮಾಡಿದ್ದು, 4.3 ಲಕ್ಷ ಸ್ವ-ಸಹಾಯ ಗುಂಪುಗಳ 48 ಲಕ್ಷ ಸದಸ್ಯರಿಗೆ ಪ್ರಯೋಜನವಾಗಿದೆ.

ಈ ಎಲ್ಲಾ ಯೋಜನೆಗಳಲ್ಲಿ ಕೆಲಸ ಮಾಡುವುದರ ಜೊತೆಗೆ, ವಕ್ಫ್ (ತಿದ್ದುಪಡಿ) ಮಸೂದೆ, 2024 ವಿವಾದವೆದ್ದ ಹಿನ್ನೆಲೆಯಲ್ಲಿ ಮುಂದಕ್ಕೆ ಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com