42 ದಿನಗಳ ನಂತರ ಕೋಲ್ಕತ್ತಾ ಕಿರಿಯ ವೈದ್ಯರ ಮುಷ್ಕರ ಅಂತ್ಯ: ನಾಳೆಯಿಂದ ತುರ್ತು ಸೇವೆ ಲಭ್ಯ

'ಸ್ವಾಸ್ಥ್ಯ ಭವನ'ದಿಂದ ಸಿಜಿಒ ಕಾಂಪ್ಲೆಕ್ಸ್‌ವರೆಗೆ ಸುಮಾರು 4 ಕಿ.ಮೀ ದೂರವನ್ನು ಮೆರವಣಿಗೆ ಸಾಗಿದರು.
ಕಿರಿಯ ವೈದ್ಯರ ಮುಷ್ಕರ
ಕಿರಿಯ ವೈದ್ಯರ ಮುಷ್ಕರ
Updated on

ಕೋಲ್ಕತ್ತಾ: ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ 31 ವರ್ಷದ ಕಿರಿಯ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕಿರಿಯ ವೈದ್ಯರು ಇಂದು ಶುಕ್ರವಾರ ಸಂಜೆ ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡು ಕರ್ತವ್ಯಕ್ಕೆ ಮರಳಿದ್ದಾರೆ. ನಾಳೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೇವೆಗಳನ್ನು ಪುನರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

42 ದಿನಗಳ ಕಾಲ ನಡೆಸಿದ್ದ ಮುಷ್ಕರವನ್ನು ಇಂದು ಕೊನೆಗೊಳಿಸಿದ್ದು, ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಛೇರಿಯಿಂದ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಕೇಂದ್ರೀಯ ತನಿಖಾ ದಳ (CBI) ಕಚೇರಿಗೆ ಮೆರವಣಿಗೆ ನಡೆಸಿದ ನಂತರ ವೈದ್ಯರು ಮುಷ್ಕರ ಹಿಂತೆಗೆದುಕೊಂಡಿದ್ದಾರೆ.

'ಸ್ವಾಸ್ಥ್ಯ ಭವನ'ದಿಂದ ಸಿಜಿಒ ಕಾಂಪ್ಲೆಕ್ಸ್‌ವರೆಗೆ ಸುಮಾರು 4 ಕಿ.ಮೀ ದೂರವನ್ನು ಮೆರವಣಿಗೆ ಸಾಗಿದರು. ವೈದ್ಯರು ಹೊರರೋಗಿ ವಿಭಾಗದಲ್ಲಿ (OPD) ಕೆಲಸ ಮಾಡುವುದಿಲ್ಲ ತುರ್ತು ಮತ್ತು ಅಗತ್ಯ ಸೇವೆಗಳಲ್ಲಿ ನಾಳೆಯಿಂದ ಭಾಗಶಃ ಕಾರ್ಯನಿರ್ವಹಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com