ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಐತಿಹಾಸಿಕ; ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗಲ್ಲ: HDD ಶ್ಲಾಘನೆ

ಮುಸ್ಲಿಂ ನಾಗರಿಕರು ಸಹ ಈ ದೇಶದ ಸಮಾನ ನಾಗರಿಕರು. ಅವರ ಹಿತಾಸಕ್ತಿಗಳನ್ನು ಸರ್ಕಾರವು ರಕ್ಷಿಸಬೇಕು ಮತ್ತು ಮಸೂದೆಯು ಅದನ್ನೇ ಮಾಡುತ್ತದೆ.
HD Devegowda
ಹೆಚ್ ಡಿ ದೇವೇಗೌಡ
Updated on

ನವದೆಹಲಿ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2025 ಅಂಗೀಕಾರವನ್ನು ಶ್ಲಾಘಿಸಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು, ಈ ಮಸೂದೆ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಹಿರಿಯ ಸಂಸದ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ ನೂತನ ವಕ್ಫ್ ಮಸೂದೆಯನ್ನು ಬಲವಾಗಿ ಬೆಂಬಲಿಸಿದರು. ಈ ಕಾಯ್ದೆ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವುದಿಲ್ಲ. ಆದರೆ ಆದಾಯ ಮತ್ತು ಆಡಳಿತ ವಿಷಯಗಳಿಗೆ ಕಟ್ಟುನಿಟ್ಟಾಗಿ ಸಂಬಂಧಿಸಿದೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

ವಕ್ಫ್ ಮಂಡಳಿಗಳ ಅಡಿಯಲ್ಲಿರುವ ಆಸ್ತಿಗಳ ಆಡಳಿತವನ್ನು ನಿಯಂತ್ರಿಸುವ ಗುರಿಯನ್ನು ಈ ಕಾಯ್ದೆ ಹೊಂದಿದೆ ಎಂದು ದೇವೇಗೌಡರು ವಿವರಿಸಿದರು. ಇದು ಪ್ರಸ್ತುತ ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ವಿಸ್ತಾರವಾಗಿರುವ 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತದೆ. 1.2 ಲಕ್ಷ ಕೋಟಿ ರೂ. ಮೌಲ್ಯದ ಈ ಆಸ್ತಿಗಳನ್ನು ಸ್ವತ್ತು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಮಸೂದೆಯು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ಶ್ರೀಮಂತರಿಂದ ಬಡ ಮುಸ್ಲಿಮರನ್ನು ರಕ್ಷಿಸುತ್ತದೆ. ನ್ಯಾಯದ ಹಿತದೃಷ್ಟಿಯಿಂದ, ನೂತನ ಮಸೂದೆಯನ್ನು ನಮ್ಮ ಸಂವಿಧಾನದ ಮೂಲ ತತ್ವಗಳಿಗೆ ಹೊಂದಿಕೆ ಮಾಡಲಾಗಿದೆ ಎಂದು ದೇವೇಗೌಡರು ಒತ್ತಿ ಹೇಳಿದರು.

ಮುಸ್ಲಿಂ ನಾಗರಿಕರು ಸಹ ಈ ದೇಶದ ಸಮಾನ ನಾಗರಿಕರು. ಅವರ ಹಿತಾಸಕ್ತಿಗಳನ್ನು ಸರ್ಕಾರವು ರಕ್ಷಿಸಬೇಕು ಮತ್ತು ಮಸೂದೆಯು ಅದನ್ನೇ ಮಾಡುತ್ತದೆ. ವಕ್ಫ್ ಆಸ್ತಿಗಳ ಐತಿಹಾಸಿಕ ದುರುಪಯೋಗದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಒಮ್ಮೆ ವಕ್ಫ್ ಆಸ್ತಿ ಎಂದರೆ ಅದು ಶಾಶ್ವತವಾಗಿ ವಕ್ಫ್ ಎಂಬ ಮೂಲಭೂತ ತತ್ವದ ಉಲ್ಲಂಘನೆಯನ್ನು ಅವರು ಎತ್ತಿ ತೋರಿಸಿದರು. ಅಲ್ಲಾಹನ ಹೆಸರಿನಲ್ಲಿ ದಾನ ಮಾಡಿದ ಆಸ್ತಿಗಳನ್ನು ಪ್ರಬಲ ಮಧ್ಯವರ್ತಿಗಳು, ವಿಶೇಷವಾಗಿ ಕರ್ನಾಟಕದಂತಹ ರಾಜ್ಯಗಳಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಗಮನಸೆಳೆದರು. ಕಳೆದ ದಶಕಗಳಲ್ಲಿ ಸಮೀಕ್ಷೆಗಳ ನಂತರ ಸಮೀಕ್ಷೆಗಳು, ಘಟನೆಗಳ ನಂತರ ಘಟನೆಗಳು ನಮಗೆ ಇದನ್ನು ತಿಳಿಸಿವೆ ಎಂದು ಹೇಳಿದರು.

HD Devegowda
ವಕ್ಫ್ ಬಗ್ಗೆ ನಿಲುವು ಬದಲಿಸಿದ ಬಿಜೆಡಿ: ಮತ ಹಾಕುವುದು ಬಿಡುವುದು ಸಂಸದರ ಆತ್ಮಸಾಕ್ಷಿಗೆ ಬಿಟ್ಟದ್ದು; ರಾಜ್ಯಸಭೆಯಲ್ಲಿ ವಿಪ್ ಕೈಬಿಟ್ಟ BJD

ಈ ಮಸೂದೆ ಮೂಲಕ ಧಾರ್ಮಿಕ ನಿಯಂತ್ರಣಕ್ಕೆ ಮುಂದಾಗಲಾಗುತ್ತಿದೆ ಎಂಬ ಆರೋಪಗಳನ್ನು ದೇವೇಗೌಡರು ತಳ್ಳಿಹಾಕಿದರು. ಇದು ಕಂದಾಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿದೆ ಎಂದು ಪುನರುಚ್ಚರಿಸಿದರು. ಈ ಮಸೂದೆಯು ಸ್ಥಳೀಯ ಕಂದಾಯ ಅಧಿಕಾರಿಗಳೊಂದಿಗೆ ಉತ್ತಮ ಸಮನ್ವಯವನ್ನು ಖಚಿತಪಡಿಸುತ್ತದೆ. ದೇಶದಲ್ಲಿ ಯಾವುದೇ ಬೋರ್ಡ್ ಆಗಲಿ ಕಾನೂನು ಅಡಿಯಲ್ಲಿರಬೇಕು. ಎಲ್ಲವೂ ಸಂವಿಧಾನದೊಂದಿಗೆ ಹೊಂದಿಕೆಯಾಗಬೇಕು ಎಂದು ಮಾಜಿ ಪ್ರಧಾನಿ ಒತ್ತಿ ಹೇಳಿದರು. ಈ ಮಸೂದೆ ನ್ಯಾಯಾಂಗ ಮೇಲ್ವಿಚಾರಣೆಯನ್ನು ಸೃಷ್ಟಿಸುತ್ತದೆ. ಅದು ತುಂಬಾ ಅಗತ್ಯವಾಗಿತ್ತು ಎಂದು ದೇವೇಗೌಡರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com