'ದಿ ಕೇರಳ ಸ್ಟೋರಿ'ಗೆ 71st National Film Awards: ಕೇರಳ ಸಿಎಂ ವಿಜಯನ್ ಟೀಕೆ, ಕೆಂಡಾಮಂಡಲ

ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಸನ್ ಸಹ ದಿ ಕೇರಳ ಸ್ಟೋರಿ" ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡುವ ನಿರ್ಧಾರವನ್ನು ಟೀಕಿಸಿದ್ದಾರೆ.
Kerala LoP V D Satheesan (L) and Kerala CM Pinarayi Vijayan (R)
ಕೇರಳ ವಿಪಕ್ಷ ನಾಯಕ ಸತೀಶನ್ (ಎಡಭಾಗದ ಚಿತ್ರ), ಸಿಎಂ ಪಿಣರಾಯಿ ವಿಜಯನ್online desk
Updated on

ತಿರುವನಂತಪುರಂ: ಸುದೀಪ್ತೋ ಸೇನ್ ನಿರ್ದೇಶನದ "ದಿ ಕೇರಳ ಸ್ಟೋರಿ" ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡುವ ನಿರ್ಧಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ತೀವ್ರವಾಗಿ ಟೀಕಿಸಿದ್ದಾರೆ, ತೀರ್ಪುಗಾರರು ಭಾರತೀಯ ಚಿತ್ರರಂಗದ ಹೆಮ್ಮೆಯ ಸಂಪ್ರದಾಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಸನ್ ಸಹ ದಿ ಕೇರಳ ಸ್ಟೋರಿ" ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡುವ ನಿರ್ಧಾರವನ್ನು ಟೀಕಿಸಿದ್ದು, ಬಿಜೆಪಿ ಸರ್ಕಾರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ದ್ವೇಷ ಅಭಿಯಾನದ ಭಾಗವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಚಲನಚಿತ್ರ ನಿರ್ಮಾಪಕ ಸುದೀಪ್ತೋ ಸೇನ್ ಅವರ "ದಿ ಕೇರಳ ಸ್ಟೋರಿ" ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ದೊರೆತಿದ್ದು, ಈ ಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರವು ಕೇರಳದಲ್ಲಿ ಮಹಿಳೆಯರನ್ನು ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ ಬಲವಂತವಾಗಿ ಮತಾಂತರಿಸಿ ನೇಮಕ ಮಾಡಿಕೊಳ್ಳುತ್ತಿರುವುದನ್ನು ಚಿತ್ರಿಸಿದ್ದಕ್ಕಾಗಿ ಸುದ್ದಿಯಾಗಿತ್ತು.

"ಈ ಕ್ರಮದ ವಿರುದ್ಧ ನಾವು ನಮ್ಮ ಬಲವಾದ ಪ್ರತಿಭಟನೆಯನ್ನು ದಾಖಲಿಸುತ್ತೇವೆ. ಪ್ರತಿಯೊಬ್ಬ ಕೇರಳಿಗರು ಮತ್ತು ದೇಶಾದ್ಯಂತ ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ಪ್ರತಿಯೊಬ್ಬರು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಕಲೆಯನ್ನು ಕೋಮುವಾದವನ್ನು ಬೆಳೆಸುವ ಅಸ್ತ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುವ ರಾಜಕೀಯದ ವಿರುದ್ಧ ನಾವು ಒಂದಾಗಬೇಕು" ಎಂದು ವಿಜಯನ್ ಕರೆ ನೀಡಿದ್ದಾರೆ.

ಕೇರಳವನ್ನು ಕೆಣಕುವ ಮತ್ತು ಕೋಮುವಾದವನ್ನು ಹರಡುವ ಗುರಿಯೊಂದಿಗೆ ಸುಳ್ಳುಗಳ ಮೇಲೆ ನಿರ್ಮಿಸಲಾದ ಚಲನಚಿತ್ರಕ್ಕೆ ಪ್ರಶಸ್ತಿಗಳನ್ನು ನೀಡುವ ಮೂಲಕ, ಪ್ರಶಸ್ತಿ ತೀರ್ಪುಗಾರರು ದೀರ್ಘಕಾಲದಿಂದ ಕೋಮು ಸಾಮರಸ್ಯ ಮತ್ತು ರಾಷ್ಟ್ರೀಯ ಉನ್ನತಿಗಾಗಿ ನಿಂತಿರುವ ಭಾರತೀಯ ಚಿತ್ರರಂಗದ ಹೆಮ್ಮೆಯ ಸಂಪ್ರದಾಯವನ್ನು ಅವಮಾನಿಸಿದ್ದಾರೆ ಎಂದು ಅವರು ಹೇಳಿದರು.

"ಕೇಂದ್ರ ಸರ್ಕಾರ ಸಿನಿಮಾವನ್ನು ಕೋಮು ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವ ಅಸ್ತ್ರವಾಗಿ ಪರಿವರ್ತಿಸುವ ಸಂಘ ಪರಿವಾರದ ಕಾರ್ಯಸೂಚಿಯನ್ನು ಮುನ್ನಡೆಸುತ್ತಿದ್ದಾರೆ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Kerala LoP V D Satheesan (L) and Kerala CM Pinarayi Vijayan (R)
71st National Film Award 2023: 'ಕಂದೀಲು' ಸೇರಿ ಕನ್ನಡದ ಎರಡು ಚಿತ್ರಕ್ಕೆ ಪ್ರಶಸ್ತಿ

ಆದಾಗ್ಯೂ, 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಸಾಧನೆಗಳನ್ನು ಅವರು ಶ್ಲಾಘಿಸಿದರು, ಇದನ್ನು "ಅದ್ಭುತ ಯಶಸ್ಸು" ಎಂದು ಹೇಳಿದ್ದಾರೆ

"ಅಸಾಧಾರಣ ಪ್ರತಿಭೆಯಿಂದ ಮಲಯಾಳಂ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಉರ್ವಶಿ ಮತ್ತು ವಿಜಯರಾಘವನ್ ಕ್ರಮವಾಗಿ ಅತ್ಯುತ್ತಮ ಪೋಷಕ ನಟಿ ಮತ್ತು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗಳನ್ನು ಗೆದ್ದ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಲಾಯಿತು. ಈ ಗೌರವಗಳು ಮಲಯಾಳಂ ಚಿತ್ರರಂಗವನ್ನು ಇನ್ನಷ್ಟು ಅತ್ಯುತ್ತಮ ಚಲನಚಿತ್ರಗಳೊಂದಿಗೆ ಹೊಸ ಎತ್ತರಕ್ಕೆ ಏರಲು ಪ್ರೇರೇಪಿಸಲಿ" ಎಂದು ವಿಜಯನ್ ಹೇಳಿದ್ದಾರೆ.

ಸತೀಶನ್ ತಮ್ಮ ಹೇಳಿಕೆಯಲ್ಲಿ, ದಿ ಕೇರಳ ಸ್ಟೋರಿ ಚಿತ್ರಕ್ಕೆ ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ಮಾತ್ರ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು. "ಇದು ಸ್ವೀಕಾರಾರ್ಹವಲ್ಲ" ಎಂದು ಅವರು ಹೇಳಿದರು. ಸಂಘ ಪರಿವಾರವು ಕ್ರಿಶ್ಚಿಯನ್ನರ ವಿರುದ್ಧ ಅಭಿಯಾನ ನಡೆಸುತ್ತಿದೆ ಎಂದು ಅವರು ಆರೋಪಿಸಿದರು - ಮತ್ತು ಬಿಜೆಪಿ ಸರ್ಕಾರವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸಹ "ರಾಜಕೀಯಗೊಳಿಸುತ್ತಿದೆ" ಎಂದು ಅವರು ಆರೋಪಿಸಿದರು.

Kerala LoP V D Satheesan (L) and Kerala CM Pinarayi Vijayan (R)
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಶಾರುಖ್ ಖಾನ್, ವಿಕ್ರಾಂತ್ ಮ್ಯಾಸಿ ಅತ್ಯುತ್ತಮ ನಟ; ರಾಣಿ ಮುಖರ್ಜಿ ಅತ್ಯುತ್ತಮ ನಟಿ

"ಕೇರಳದ ಬಗ್ಗೆ ಸುಳ್ಳುಗಳನ್ನು ಹರಡುವ ಮೂಲಕ, ಬಿಜೆಪಿ ಮತ್ತು ವಿಭಜಕ ರಾಜಕೀಯವನ್ನು ಅನುಸರಿಸುವ ಸಂಘ ಪರಿವಾರವು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಇದು ಯಶಸ್ವಿಯಾಗುವುದಿಲ್ಲ" ಎಂದು ಅವರು ಹೇಳಿದರು. ಅವರು ಇತರ ಪ್ರಶಸ್ತಿ ವಿಜೇತರನ್ನು ಸಹ ಅಭಿನಂದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com