Madhya Pradesh: ಪೆಟ್ರೋಲ್ ಕೊಡಲಿಲ್ಲ ಎಂದು ಬಂಕ್ ಗೆ ಬೆಂಕಿ ಇಟ್ಟ ಧೂರ್ತ! Video

ಇಂದೋರ್ ನಲ್ಲಿ ಹೆಲ್ಮೆಟ್ ಧರಿಸದೇ ಬಂದ ಮೂವರು ಯುವಕರ ತಂಡ ಪೆಟ್ರೋಲ್ ಕೇಳಿದ್ದು, ಈ ವೇಳೆ ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕುವುದನ್ನು ನಿರಾಕರಿಸಿದ್ದಾರೆ.
Youth brandishes knife and throws burning matchstick at Indore pump
ಪೆಟ್ರೋಲ್ ಬಂಕ್ ಗೆ ಬೆಂಕಿ ಹಾಕಿದ ದುಷ್ಕರ್ಮಿಗಳು
Updated on

ಇಂದೋರ್: ಹೆಲ್ಮೆಟ್ ಧರಿಸದೇ ಬಂದು ಪೆಟ್ರೋಲ್ ಕೇಳಿದ ಯುವಕರಿಗೆ ಸಿಬ್ಬಂದಿ ಪೆಟ್ರೋಲ್ ನಿರಾಕರಿಸಿದ ಕಾರಣ ಬಂಕ್ ಗೆ ಬೆಂಕಿ ಇಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯ ಪ್ರದೇಶದಲ್ಲಿ ಸಂಚಾರಿ ನಿಯಮಗಳನ್ನು ಕಠಿಣಗೊಳಿಸಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ಹೆಲ್ಮೆಟ್ ಇಲ್ಲದ ದ್ವಿಚಕ್ರವಾಹನಗಳಿಗೆ ಪೆಟ್ರೋಲ್ ಹಾಕದಂತೆ ಸೂಚನೆ ನೀಡಲಾಗಿದೆ.

ಅಂತೆಯೇ ಇಂದೋರ್ ನಲ್ಲಿ ಹೆಲ್ಮೆಟ್ ಧರಿಸದೇ ಬಂದ ಮೂವರು ಯುವಕರ ತಂಡ ಪೆಟ್ರೋಲ್ ಕೇಳಿದ್ದು, ಈ ವೇಳೆ ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕುವುದನ್ನು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ದುಷ್ಕರ್ಮಿಗಳ ತಂಡ ಪೆಟ್ರೋಲ್ ಬಂಕ್ ಗೆ ಬೆಂಕಿ ಹಾಕಿರುವ ಘಟನೆ ನಡೆದಿದೆ.

ಇಂದೋರ್‌ನ ಛೋಟಾ ಬಂಗಾರ್ಡಾ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ನಡೆಯಲಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ಶುಕ್ಲಾ ಬ್ರದರ್ಸ್ ಪೆಟ್ರೋಲ್ ಪಂಪ್‌ನಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಬಂದ ಮೂವರು ಯುವಕರು ಪೆಟ್ರೋಲ್‌ಗೆ ಬೇಡಿಕೆ ಇಟ್ಟರು.

Youth brandishes knife and throws burning matchstick at Indore pump
ಭೀಕರ ಅಪಘಾತ: ಕಡಿದಾದ ಕಣಿವೆಗೆ JCB ಬಿದ್ದು ಡ್ರೈವರ್ ಸಾವು, Video viral

ಹೆಲ್ಮೆಟ್ ಧರಿಸದ ಕಾರಣ ಪಂಪ್ ಸಿಬ್ಬಂದಿ ಅವರಿಗೆ ಪೆಟ್ರೋಲ್ ನೀಡಲು ನಿರಾಕರಿಸಿದರು. ಈ ವೇಳೆ ಬೈಕ್‌ನಿಂದ ಇಳಿದ ಇಬ್ಬರು ಯುವಕರು ನೌಕರರನ್ನು ನಿಂದಿಸಿ ಜಗಳವಾಡಲು ಪ್ರಾರಂಭಿಸಿದರು.

ಈ ಮಧ್ಯೆ, ಯುವಕರಲ್ಲಿ ಒಬ್ಬ ಚಾಕುವನ್ನು ತೆಗೆದುಕೊಂಡು ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಅನ್ನು ಹೇಗೆ ತೆಗೆದುಕೊಳ್ಳುವುದು ಎಂದು ನಾವು ನಿಮಗೆ ತೋರಿಸುತ್ತೇವೆ ಮತ್ತು ಹಣವನ್ನು ಸಹ ಪಾವತಿಸುವುದಿಲ್ಲ ಎಂದು ನೌಕರರನ್ನು ಬೆದರಿಸಿದ. ಬಳಿಕ ಅಲ್ಲಿಂದ ತೆರಳುವ ಮುನ್ನ ಬಂಕ್ ಗೆ ಬೆಂಕಿ ಹಾಕಿದ್ದಾರೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ನೋಡ ನೋಡುತ್ತಲೇ ದುಷ್ಕರ್ಮಿಗಳು ತಮ್ಮ ಜೇಬಿನಲ್ಲಿದ್ದ ಬೆಂಕಿಪೊಟ್ಟಣ ತೆಗೆದು ಬೆಂಕಿ ಕಡ್ಡಿ ಗೀರಿ ಪೆಟ್ರೋಲ್ ಬಂಕ್ ನತ್ತ ಎಸೆದಿದ್ದಾರೆ. ಅದೃಷ್ಟವಶಾತ್ ಈ ವೇಳೆ ಬೆಂಕಿ ಹತ್ತಲಿಲ್ಲ. ಇದೇ ವೇಳೆ ಪೆಟ್ರೋಲ್ ಬಂಕ್ ಸಿಬ್ಬಂದಿ ಅಲ್ಲಿಗೆ ಬರುತ್ತಲೇ ಯುವಕರು ಅಲ್ಲಿಂದ ಬೈಕ್ ಹತ್ತಿ ಪರಾರಿಯಾಗಿದ್ದಾರೆ.

ಅಂದಹಾಗೆ ಈ ಬಂಕ್ ಸುಬೋಧ್ ಶುಕ್ಲಾ, ಮನೋಜ್ ಶುಕ್ಲಾ ಮತ್ತು ಅಶುತೋಷ್ ಶುಕ್ಲಾ ಅವರ ಕುಟುಂಬಕ್ಕೆ ಸೇರಿದ ಶುಕ್ಲಾ ಬ್ರದರ್ಸ್ ಒಡೆತನದ್ದಾಗಿದ್ದು, ಪಂಪ್ ಮ್ಯಾನೇಜರ್ ವೀರೇಂದ್ರ ಧೋಲ್ಪುರಿಯಾ ಅವರ ದೂರಿನ ಮೇರೆಗೆ, ಏರೋಡ್ರೋಮ್ ಪೊಲೀಸ್ ಠಾಣೆಯು ಬೈಕ್ ಚಾಲಕ ಮತ್ತು ಇನ್ನೊಬ್ಬ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com