ಸಂಸತ್ತಿನಲ್ಲಿ ವಿಪಕ್ಷಗಳ ಪ್ರತಿಭಟನೆ ಮುಂದುವರಿದರೆ ಸರ್ಕಾರದಿಂದ ಚರ್ಚೆ ಇಲ್ಲದೇ ಮಸೂದೆಗಳ ಅಂಗೀಕಾರ: ರಿಜಿಜು

ಸಂಸತ್ತಿನಲ್ಲಿ ಅದರ ಶಾಸಕಾಂಗ ಕಾರ್ಯಸೂಚಿಯನ್ನು ಮಂಡಿಸುವ ಮೊದಲು ಬಿಹಾರದಲ್ಲಿ ಮತದಾರರ ಪಟ್ಟಿಯ SIR ಕುರಿತು ಚರ್ಚೆ ನಡೆಸಬೇಕೆಂಬ ಬೇಡಿಕೆಗೆ ಸರ್ಕಾರ ಒಪ್ಪಿಗೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿವೆ.
Union minister Kiran Rijiju
ಕೇಂದ್ರ ಸಚಿವ ಕಿರಣ್ ರಿಜಿಜು online desk
Updated on

ನವದೆಹಲಿ: ಸಂಸತ್ತಿನಲ್ಲಿ ಪ್ರತಿಭಟನೆಗಳ ನಡುವೆಯೂ ಸರ್ಕಾರ ತನ್ನ ಮಸೂದೆಗಳನ್ನು ಅಂಗೀಕರಿಸುವ ಒತ್ತಡ, ಅನಿವಾರ್ಯತೆ ಇದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೋಮವಾರ ಹೇಳಿದ್ದಾರೆ.

SIR ಕುರಿತು ವಿರೋಧ ಪಕ್ಷದ ನಿರಂತರ ಅಡಚಣೆಗಳು ಉಭಯ ಸದನಗಳ ಸಾಮಾನ್ಯ ಕಾರ್ಯನಿರ್ವಹಣೆಯ ನಿರೀಕ್ಷೆಗಳನ್ನು ಮಂದಗೊಳಿಸಿರುವ ಹಿನ್ನೆಲೆಯಲ್ಲಿ ಸಚಿವ ಕಿರಣ್ ರಿಜಿಜು ಹೇಳಿಕೆ ಬಂದಿದೆ.

ಸೋಮವಾರ ಲೋಕಸಭೆಯಲ್ಲಿ ಪಟ್ಟಿ ಮಾಡಲಾದ ಯಾವುದೇ ವ್ಯವಹಾರಗಳು ಕಡಿಮೆ ನಡೆದಿದ್ದರೂ, ಇಂದು ಬೆಳಿಗ್ಗೆ ನಿಧನರಾದ ತನ್ನ ಸದಸ್ಯ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರ ಗೌರವಾರ್ಥವಾಗಿ ರಾಜ್ಯಸಭೆಯನ್ನು ಮುಂದೂಡಲಾಯಿತು.

ಸರ್ಕಾರ ತನ್ನ ಮಸೂದೆಗಳ ಕುರಿತು ಸಂಸತ್ತಿನಲ್ಲಿ ಸಮಗ್ರ ಚರ್ಚೆಯನ್ನು ಬಯಸುತ್ತದೆ ಆದರೆ ಪ್ರಸ್ತಾವಿತ ಶಾಸನಗಳು ಆಡಳಿತಕ್ಕೆ ಮುಖ್ಯವಾದ ಕಾರಣ "ರಾಷ್ಟ್ರೀಯ ಹಿತಾಸಕ್ತಿ" ಯ ದೃಷ್ಟಿಯಿಂದ ಮಂಗಳವಾರದಿಂದ ಅವುಗಳ ಅಂಗೀಕಾರಕ್ಕೆ ಒತ್ತಾಯಿಸಬೇಕಾಗುತ್ತದೆ ಎಂದು ರಿಜಿಜು ತಿಳಿಸಿದ್ದಾರೆ.

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸೋಮವಾರ ಲೋಕಸಭೆಯಲ್ಲಿ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಇವೆರಡನ್ನೂ ಒಟ್ಟಿಗೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಮತ್ತು ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆಯ ಕುರಿತು ಎರಡು ದಿನಗಳ ಚರ್ಚೆಗೆ ಅವರು ಒಪ್ಪಿಕೊಂಡಿದ್ದರು ಆದರೆ ಅವರು ಕಲಾಪಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಿದ್ದಾರೆ.

ಸಂಸತ್ತಿನಲ್ಲಿ ಅದರ ಶಾಸಕಾಂಗ ಕಾರ್ಯಸೂಚಿಯನ್ನು ಮಂಡಿಸುವ ಮೊದಲು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚರ್ಚೆ ನಡೆಸಬೇಕೆಂಬ ತನ್ನ ಬೇಡಿಕೆಗೆ ಸರ್ಕಾರ ಒಪ್ಪಿಗೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಆದಾಗ್ಯೂ, ಚುನಾವಣಾ ಆಯೋಗದ ಆಡಳಿತಾತ್ಮಕ ಕ್ರಮ ಮತ್ತು ಕಾರ್ಯನಿರ್ವಹಣೆಯ ಭಾಗವಾಗಿರುವುದರಿಂದ SIR ಕುರಿತು ಚರ್ಚೆ ಸಂಸತ್ತಿನಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Union minister Kiran Rijiju
ಪ್ರತಿಯೊಬ್ಬ ದೇಶಭಕ್ತ ಭಾರತೀಯನೂ ಚೀನಾ ಬಗ್ಗೆ ಉತ್ತರ ಕೇಳುತ್ತಿದ್ದಾರೆ: ಕಾಂಗ್ರೆಸ್

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಮಾಜಿ ಸ್ಪೀಕರ್ ಬಲರಾಮ್ ಜಾಖರ್ ಅವರ ತೀರ್ಪನ್ನು ಉಲ್ಲೇಖಿಸಿ, ಸಂಸತ್ತು EC ಯಂತಹ ಸಾಂವಿಧಾನಿಕ ಸಂಸ್ಥೆಯ ಕಾರ್ಯನಿರ್ವಹಣೆಯ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಎಂದು ರಿಜಿಜು ಹೇಳಿದ್ದಾರೆ.

ಸಂಸತ್ತು ಚುನಾವಣಾ ಸುಧಾರಣೆಗಳನ್ನು ಚರ್ಚಿಸಬಹುದು ಆದರೆ EC ಯ ಕಾರ್ಯನಿರ್ವಹಣೆಯ ಬಗ್ಗೆ ಅಲ್ಲ ಎಂದು ಅವರು ಹೇಳಿದರು, ಚುನಾವಣಾ ಕಾವಲು ಸಂಸ್ಥೆಯು ಈ ಹಿಂದೆಯೂ SIR ನ್ನು ನಡೆಸಿದೆ ಎಂದು ರಿಜುಜು ಮಾಹಿತಿ ನೀಡಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತು ಉಭಯ ಸದನಗಳಲ್ಲಿ ಎರಡು ದಿನಗಳ ಚರ್ಚೆಯನ್ನು ಹೊರತುಪಡಿಸಿ, ಜುಲೈ 21 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಸಂಸತ್ತಿನ ಕಲಾಪಗಳು ಸಂಪೂರ್ಣವಾಗಿ ರದ್ದಾಗಿವೆ. ಬಿಹಾರದಲ್ಲಿ SIR ಚಟುವಟಿಕೆಯ ವಿರುದ್ಧ ವಿರೋಧ ಪಕ್ಷಗಳಿಂದ ತೀವ್ರ ಪ್ರತಿಭಟನೆಳು ನಡೆದಿರುವ ಹಿನ್ನೆಲೆಯಲ್ಲಿ ಸಂಸತ್ ಕಲಾಪಕ್ಕೆ ಅಡ್ಡಿ ಉಂಟಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com