ನಾಗ್ಪುರ: ಟ್ರಕ್ ಡಿಕ್ಕಿ; ಸಿಗದ ನೆರವು, ಪತ್ನಿಯ ಮೃತ ದೇಹವನ್ನು ಬೈಕ್‌ಗೆ ಕಟ್ಟಿ ಕೊಂಡೊಯ್ದ ಪತಿ! Video

ಮಹಿಳೆಯ ಪತಿ ದಾರಿಹೋಕರಿಂದ ಸಹಾಯ ಪಡೆಯಲು ಪ್ರಯತ್ನಿಸಿದನು, ಆದರೆ ಯಾರೂ ನಿಲ್ಲಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
A video was reportedly shot by police who had later stopped the two-wheeler
ದ್ವಿ ಚಕ್ರ ವಾಹನದಲ್ಲಿ ಪತ್ನಿಯ ಮೃತದೇಹ ಕೊಂಡೊಯ್ಯುತ್ತಿರುವ ವ್ಯಕ್ತಿonline desk
Updated on

ನವದೆಹಲಿ: ಸಂಕಷ್ಟದಲ್ಲಿ ಸಿಲುಕಿರುವ ವ್ಯಕ್ತಿಯನ್ನು ನೋಡಿಯೂ ಜನರು ನಿರ್ಲಕ್ಷ್ಯ ವಹಿಸಿ ತಮ್ಮ ಪಾಡಿಗೆ ತಾವು ಹೋಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ನಾಗ್ಪುರದಲ್ಲಿ ವರದಿಯಾಗಿರುವ ಮತ್ತೊಂದು ಘಟನೆ ಈ ಸಾಲಿಗೆ ಸೇರ್ಪಡೆಯಾಗಿದೆ.

ವೇಗವಾಗಿ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದ ನಂತರ 35 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕಳೆದುಕೊಂಡಿದ್ದು, ಆಕೆಯ ಮೃತ ದೇಹವನ್ನು ತನ್ನ ಬೈಕ್‌ಗೆ ಕಟ್ಟಿ ಸಹಾಯಕ್ಕಾಗಿ ಕೂಗುತ್ತಿದ್ದ. ಇದನ್ನು ಕಂಡರೂ ಕಾಣದಂತೆ ದಾರಿಹೋಕರು ನಡೆದು ಹೋಗುತ್ತಿರುವ ದೃಶ್ಯಗಳು ಈಗ ಎಲ್ಲೆಡೆ ವೈರಲ್ ಆಗತೊಡಗಿವೆ. ಅಮಿತ್ ಯಾದವ್ ಎಂಬ ವ್ಯಕ್ತಿ ತನ್ನ ಪತ್ನಿಯ ಮೃತ ದೇಹವನ್ನು ನಾಗ್ಪುರ-ಜಬಲ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತುಕೊಂಡು ಹೋಗುತ್ತಿರುವುದನ್ನು ತೋರಿಸುವ ಒಂದು ಮನಕಲಕುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ದ್ವಿಚಕ್ರ ವಾಹನವನ್ನು ತಡೆದ ಪೊಲೀಸರು ಈ ಕ್ಲಿಪ್ ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ. ಆಗಸ್ಟ್ 9 ರಂದು ರಕ್ಷಾ ಬಂಧನದಂದು ದಂಪತಿಗಳು ನಾಗ್ಪುರದ ಲೋನಾರಾದಿಂದ ಮಧ್ಯಪ್ರದೇಶದ ಕರಣ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.ಮೋರ್ಫಾಟಾ ಬಳಿ ವೇಗವಾಗಿ ಬಂದ ಟ್ರಕ್ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಗ್ಯಾರ್ಸಿ ಎಂಬ ಮಹಿಳೆ ರಸ್ತೆಗೆ ಬಿದ್ದರು. ಆದಾಗ್ಯೂ, ಟ್ರಕ್ ನಿಲ್ಲಿಸದೆ ಅವರ ಮೇಲೆ ಹರಿದಿದ್ದು ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ.

ಮಹಿಳೆಯ ಪತಿ ದಾರಿಹೋಕರಿಂದ ಸಹಾಯ ಪಡೆಯಲು ಪ್ರಯತ್ನಿಸಿದನು, ಆದರೆ ಯಾರೂ ನಿಲ್ಲಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಸಹಾಯವಿಲ್ಲದೆ ಅಮಿತ್ ತನ್ನ ಪತ್ನಿಯ ಮೃತ ದೇಹವನ್ನು ಮಧ್ಯಪ್ರದೇಶದ ತಮ್ಮ ಗ್ರಾಮಕ್ಕೆ ಕರೆದೊಯ್ಯಲು ತನ್ನ ಬೈಕ್‌ಗೆ ಕಟ್ಟಿದ. ಸ್ವಲ್ಪ ಸಮಯದ ನಂತರ, ಪೊಲೀಸ್ ವ್ಯಾನ್ ಅವನನ್ನು ಹಿಂಬಾಲಿಸಿತು ಮತ್ತು ತಡೆದಿತು. ನಂತರ ಅವರು ಮಹಿಳೆಯ ಶವವನ್ನು ನಾಗ್ಪುರದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು ಮತ್ತು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದರು. ಅಧಿಕಾರಿಗಳ ಪ್ರಕಾರ, ಶವಪರೀಕ್ಷೆಯ ವರದಿಯನ್ನು ಸ್ವೀಕರಿಸಿದ ನಂತರ ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ದಂಪತಿಗಳು ನಾಗ್ಪುರದ ಲೋನಾರಾದಲ್ಲಿ ವಾಸಿಸುತ್ತಿದ್ದರು ಆದರೆ ಮೂಲತಃ ಮಧ್ಯಪ್ರದೇಶದ ಸಿಯೋನಿಯವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

A video was reportedly shot by police who had later stopped the two-wheeler
ಬೆಂಗಳೂರು: ಬೈಕ್-ಲಾರಿ ಅಪಘಾತ; ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಬಂದಿದ್ದ ನವ ವಿವಾಹಿತೆ ಸಾವು; ಸುದ್ದಿ ಕೇಳಿ ಅಜ್ಜಿಯೂ ನಿಧನ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com