ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ ಬೆನ್ನಲ್ಲೇ ಪೊಲೀಸ್ ಆಯುಕ್ತರ ಬದಲಾವಣೆ

ಗೃಹರಕ್ಷಕ ದಳದ ಮಹಾನಿರ್ದೇಶಕರಾದ ಎಸ್‌ಬಿಕೆ ಸಿಂಗ್ ಅವರಿಗೆ ದೆಹಲಿ ಆಯುಕ್ತರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು.
SBK Singh
ದೆಹಲಿ ಪೊಲೀಸ್ ಆಯುಕ್ತರಾದ ಎಸ್‌ಬಿಕೆ ಸಿಂಗ್ online desk
Updated on

ನವದೆಹಲಿ: ಮುಖ್ಯಮಂತ್ರಿ ರೇಖಾ ಗುಪ್ತಾ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವ್ಯಕ್ತಿಯೊಬ್ಬರಿಂದ ಹಲ್ಲೆಗೊಳಗಾದ ಘಟನೆ ಬೆನ್ನಲ್ಲೇ, ದೆಹಲಿ ಪೊಲೀಸ್ ಆಯುಕ್ತರಾದ ಎಸ್‌ಬಿಕೆ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಎಸ್ ಬಿಕೆ ಸಿಂಗ್ ಅವರ ಸ್ಥಾನಕ್ಕೆ 1992 ರ ಬ್ಯಾಚ್ ಅಧಿಕಾರಿ ಸತೀಶ್ ಗೋಲ್ಚಾ ಅವರನ್ನು ನೇಮಕ ಮಾಡಲಾಗಿದೆ.

ಗೃಹರಕ್ಷಕ ದಳದ ಮಹಾನಿರ್ದೇಶಕರಾದ ಎಸ್‌ಬಿಕೆ ಸಿಂಗ್ ಅವರಿಗೆ ದೆಹಲಿ ಆಯುಕ್ತರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು ಮತ್ತು ಆಗಸ್ಟ್ 1 ರಂದು ಅಧಿಕಾರ ವಹಿಸಿಕೊಂಡಿದ್ದರು. ಸಿಂಗ್ ಅವರು ಎಜಿಎಂಯುಟಿ (ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳು) ಕೇಡರ್‌ನಿಂದ 1988 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಎಜಿಎಂಯುಟಿ ಕೇಡರ್‌ನ 1992 ರ ಬ್ಯಾಚ್ ಐಪಿಎಸ್ ಅಧಿಕಾರಿ ಗೋಲ್ಚಾ ಅವರು ದೆಹಲಿ ಪೊಲೀಸರಲ್ಲಿ ಉಪ ಪೊಲೀಸ್ ಆಯುಕ್ತರಾಗಿದ್ದು, ಜಂಟಿ ಪೊಲೀಸ್ ಆಯುಕ್ತರು ಮತ್ತು ವಿಶೇಷ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ ಮತ್ತು ಗುಪ್ತಚರ) ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

SBK Singh
ಹಲ್ಲೆ ಘಟನೆ ಬಳಿಕ ದೆಹಲಿ ಸಿಎಂ ರೇಖಾ ಗುಪ್ತಾಗೆ 'Z' ಶ್ರೇಣಿಯ ವಿಐಪಿ ಭದ್ರತೆ!

2020 ರಲ್ಲಿ ಈಶಾನ್ಯ ದೆಹಲಿ ಗಲಭೆಯ ಸಮಯದಲ್ಲಿ ಅವರು ವಿಶೇಷ ಪೊಲೀಸ್ ಆಯುಕ್ತರಾಗಿದ್ದರು ಮತ್ತು ಕಳೆದ ವರ್ಷ ಏಪ್ರಿಲ್‌ನಲ್ಲಿ ಮಹಾನಿರ್ದೇಶಕ (ಜೈಲು) ಆಗಿ ನೇಮಕಗೊಂಡಿದ್ದರು.

ಬುಧವಾರ ನಡೆದ 'ಜನ್ ಸುನ್ವಾಯ್' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಗುಪ್ತಾ ಅವರನ್ನು ಕಪಾಳಮೋಕ್ಷ ಮಾಡಿ ಕೂದಲು ಎಳೆಯಲಾಯಿತು. ಗುಜರಾತ್‌ನ ರಾಜ್‌ಕೋಟ್‌ನವರಾದ ದಾಳಿಕೋರ ರಾಜೇಶ್ ಸಕರಿಯಾ, ಶಾಲಿಮಾರ್ ಬಾಗ್‌ನಲ್ಲಿರುವ ಅವರ ಖಾಸಗಿ ನಿವಾಸದ ಪರಿಶೀಲನೆ ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.

ದಾಳಿಯ ನಂತರ, ದೆಹಲಿ ಪೊಲೀಸರು ಮುಖ್ಯಮಂತ್ರಿಗೆ ಒದಗಿಸಿರುವ ಭದ್ರತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಪ್ರಮುಖ ಬದಲಾವಣೆಗಳನ್ನು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com