"ಪ್ರೀತಿ ಮತ್ತು ಶಿಸ್ತು...": ನಿತೀಶ್ ಕುಮಾರ್ ವೈದ್ಯೆಯ ಹಿಜಾಬ್ ಎಳೆದ ಬಗ್ಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯೆ ಹೀಗಿದೆ...

ಈ ವಿವಾದಕ್ಕೆ ಸಂಬಂಧಿಸಿದಂತೆ ಈಗ ಬಿಹಾರ ರಾಜ್ಯಪಾಲರ ಹೇಳಿಕೆ ಎಲ್ಲೆಡೆ ಗಮನಸೆಳೆಯುತ್ತಿದೆ. ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಿಎಂ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದು, ತಂದೆ ಮತ್ತು ಮಗಳ ನಡುವೆ ಎಂದಿಗೂ ಸಂಘರ್ಷ ಉಂಟಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Bihar Governor Arif Mohammed Khan-Chief Minister Nitish Kumar
ಬಿಹಾರ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್- ಬಿಹಾರ ಸಿಎಂ ನಿತೀಶ್ ಕುಮಾರ್ online desk
Updated on

ಪಾಟ್ನ: ಕಳೆದ ವಾರ ಪಾಟ್ನಾದಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಹಿಜಾಬ್ (ಮುಸುಕು) ತೆಗೆದ ನಂತರ ರಾಷ್ಟ್ರೀಯ ಸುದ್ದಿಗಳಲ್ಲಿ ಸ್ಥಾನ ಪಡೆದ ಆಯುಷ್ ವೈದ್ಯೆ ಡಾ. ನುರ್ಸತ್ ಪರ್ವೀನ್ ಶನಿವಾರ ತಮ್ಮ ಕೆಲಸಕ್ಕೆ ಗೈರಾಗಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಈಗ ಬಿಹಾರ ರಾಜ್ಯಪಾಲರ ಹೇಳಿಕೆ ಎಲ್ಲೆಡೆ ಗಮನಸೆಳೆಯುತ್ತಿದೆ. ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಿಎಂ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದು, ತಂದೆ ಮತ್ತು ಮಗಳ ನಡುವೆ ಎಂದಿಗೂ ಸಂಘರ್ಷ ಉಂಟಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

"ನಿತೀಶ್ ಕುಮಾರ್ ನುಸ್ರತ್‌ಗೆ ತಂದೆಯಂತೆ, ಮತ್ತು ತಂದೆ ತನ್ನ ಮಗಳ ಬಗ್ಗೆ ತೋರಿಸುವ ಪ್ರೀತಿ ಮತ್ತು ಶಿಸ್ತನ್ನು ಸಂಘರ್ಷ ಎಂದು ಲೇಬಲ್ ಮಾಡುವುದು ತಪ್ಪು" ಎಂದು ಅವರು ಹೇಳಿದರು. "ಹಿಂದೆ ಆರೋಗ್ಯ ಇಲಾಖೆಯು ವಿಸ್ತರಣೆ ನೀಡಿದ ಸಂದರ್ಭಗಳು ಕಡಿಮೆ" ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಡಾ. ಪರ್ವೀನ್ ಅವರನ್ನು ಪಾಟ್ನಾ ಸದರ್‌ನ ಸಬಲ್ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್‌ಸಿ) ನಿಯೋಜಿಸಲಾಗಿದೆ ಮತ್ತು ಶನಿವಾರ ಸಂಜೆ 6 ಗಂಟೆಗೆ ಸೇರ್ಪಡೆ ಔಪಚಾರಿಕತೆಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿತ್ತು. ಆದಾಗ್ಯೂ, ಗಡುವು ಮುಗಿದ ನಂತರವೂ ಅವರು ಕರ್ತವ್ಯಕ್ಕೆ ರಿಪೋರ್ಟ್ ಮಾಡಿಕೊಳ್ಳಲು ವಿಫಲರಾದರು. ಆರೋಗ್ಯ ಇಲಾಖೆಯ ಕಾರ್ಯವಿಧಾನದ ಪ್ರಕಾರ, ಡಾ. ಪರ್ವೀನ್ ತಮ್ಮ ಕೆಲಸವನ್ನು ಪ್ರಾರಂಭಿಸುವ ಮೊದಲು ಹಲವಾರು ಔಪಚಾರಿಕ ಹಂತಗಳನ್ನು ಅನುಸರಿಸಬೇಕಾಗುತ್ತದೆ. ಇವುಗಳಲ್ಲಿ ರಾಜ್ಯ ಆರೋಗ್ಯ ಸಮಿತಿಯಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಸೇರಿವೆ ಎಂದು ಹೇಳಿದ್ದಾರೆ.

ಪಾಟ್ನಾ ಸಿವಿಲ್ ಸರ್ಜನ್ ಡಾ. ಅವಿನಾಶ್ ಕುಮಾರ್ ಸಿಂಗ್ ಅವರು ಡಾ. ಪರ್ವೀನ್ ಶನಿವಾರ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ದೃಢಪಡಿಸಿದರು. ಈಗ ರಾಜ್ಯ ಆರೋಗ್ಯ ಇಲಾಖೆಯು ಅವರ ಕರ್ತವ್ಯಕ್ಕೆ ಹಾಜರಾಗಲು ಅವರಿಗೆ ವಿಸ್ತರಣೆ ನೀಡಬಹುದು ಎಂದು ಅವರು ಹೇಳಿದರು.

Bihar Governor Arif Mohammed Khan-Chief Minister Nitish Kumar
ನಿತೀಶ್ ಕುಮಾರ್ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್ ನಿಂದ ಜಾಕ್ ಪಾಟ್; ಸಚಿವ ಇರ್ಫಾನ್ ಅನ್ಸಾರಿ ಭರ್ಜರಿ ಆಫರ್!

ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, 75 ಆಯುಷ್ ವೈದ್ಯರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ 63 ಮಂದಿ ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. "ಉಳಿದ 12 ವೈದ್ಯರು ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಇನ್ನೂ ಕರ್ತವ್ಯಕ್ಕೆ ಹಾಜರಾಗದ 12 ವೈದ್ಯರಲ್ಲಿ ಡಾ. ನುಸ್ರತ್ ಪರ್ವೀನ್ ಕೂಡ ಒಬ್ಬರು" ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಜಾರ್ಖಂಡ್ ಆರೋಗ್ಯ ಸಚಿವ ಡಾ. ಇರ್ಫಾನ್ ಅನ್ಸಾರಿ ಅವರು ನಿತೀಶ್ ಅವರನ್ನು ಟೀಕಿಸುತ್ತಾ, ಡಾ. ಪರ್ವೀನ್ ಅವರಿಗೆ ತಿಂಗಳಿಗೆ ₹3 ಲಕ್ಷ ಸಂಬಳ ನೀಡುವುದಾಗಿ ಭರವಸೆ ನೀಡಿ ಸರ್ಕಾರಿ ಉದ್ಯೋಗ ಮತ್ತು ಜಾರ್ಖಂಡ್ ಆರೋಗ್ಯ ಇಲಾಖೆಯಲ್ಲಿ ಅವರ ಆಯ್ಕೆಯ ಹುದ್ದೆಯ ಆಫರ್ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com