
ರಾಯಪುರ: ಛತ್ತೀಸ್ಗಢದ ಕಂಕೇರ್ ಜಿಲ್ಲೆಯ ಭಾನುಪ್ರತಾಪುರದ ಮಾವೋವಾದಿ ಪೀಡಿತ ಪ್ರದೇಶದಲ್ಲಿ ಕ್ಯಾಮೆರಾ ಮತ್ತು ಟ್ರಾನ್ಸ್ಮಿಟರ್ ಸಣ್ಣ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಿದ್ದ ರಣಹದ್ದು ಅಲೆದಾಡುತ್ತಿರುವುದು ಪತ್ತೆಯಾಗಿದೆ. ಇದರ ಉಪಸ್ಥಿತಿಯು ಸ್ಥಳೀಯರು ಮತ್ತು ಭದ್ರತಾ ಪಡೆಗಳ ಕಳವಳಕ್ಕೆ ಕಾರಣವಾಗಿತ್ತು.
ಬಸ್ತಾರ್ ಪ್ರದೇಶದಲ್ಲಿ ಸ್ಥಿರ ಕ್ಯಾಮೆರಾ ಹೊಂದಿದ್ದ ರಣಹದ್ದು ಹಿಂದೆಂದೂ ಕಂಡುಬಂದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವೇಳಾಪಟ್ಟಿ 1ರ ಅಡಿಯಲ್ಲಿ ಪಟ್ಟಿ ಮಾಡಲಾದ ಅಳಿವಿನಂಚಿನಲ್ಲಿರುವ ಪ್ರಭೇದವಾದ ರಣಹದ್ದು, ಹರಿಯಾಣದ ಪಿಂಜೋರ್ನಲ್ಲಿರುವ ರಣಹದ್ದು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರ (ವಿಸಿಬಿಸಿ) ನಡೆಸಿದ ಸಂಶೋಧನಾ ಯೋಜನೆಯ ಭಾಗವಾಗಿದೆ ಎಂದು ಅಧಿಕಾರಿಗಳು ನಂತರ TNIE ಜೊತೆ ಹಂಚಿಕೊಂಡಿದ್ದಾರೆ.
ಮುಂಬೈನ ಅಂಧೇರಿಯಲ್ಲಿನ BNHS 10 ಬಿಳಿ-ರಂಪ್ಡ್ ರಣಹದ್ದುಗಳನ್ನು ಹೊಂದಿದೆ. ಅವುಗಳಲ್ಲಿ ಒಂದಕ್ಕೆ ಕ್ಯಾಮೆರಾ ಮತ್ತು ಟ್ರ್ಯಾಕರ್ಗಳನ್ನು ಅಳವಡಿಸಿ ಇತರ ಪ್ರದೇಶಗಳಲ್ಲಿ ಮೇವು ಹುಡುಕಲು ಬಿಡುಗಡೆ ಮಾಡಲಾಯಿತು. ಈ ರಣಹದ್ದು ಮುಂಬೈನಿಂದ ಛತ್ತೀಸ್ಗಢ ಪ್ರದೇಶವನ್ನು ಪ್ರವೇಶಿಸಿ ಸೂಕ್ತವಾದ ಆವಾಸಸ್ಥಾನವನ್ನು ಹುಡುಕುತ್ತಿರಬಹುದು. ಈ ರಣಹದ್ದುವಿನಿಂದ ತೊಂದರೆಗೊಳಗಾಗುವ ಅಗತ್ಯವಿಲ್ಲ. ಅದು ನಮ್ಮ ನಿಕಟ ವೀಕ್ಷಣೆಯಲ್ಲಿದೆ. ಪಕ್ಷಿ ಒತ್ತಡದಲ್ಲಿದ್ದರೆ ಅಥವಾ ಯಾವುದೇ ಬೆದರಿಕೆ ಕಂಡುಬಂದರೆ ಮಾತ್ರ ಅದನ್ನು ರಕ್ಷಿಸಲಾಗುತ್ತದೆ. VCBC ಮತ್ತು BNHS ಜಂಟಿ ಯೋಜನೆಯು ರಣಹದ್ದು ಸಂರಕ್ಷಣೆ ಮತ್ತು ಪ್ರಸರಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಕಾರಣ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಅಲೋಕ್ ಬಾಜ್ಪೈ, (IFS) ವಿಭಾಗೀಯ ಅರಣ್ಯ ಅಧಿಕಾರಿ (DFO) ಕಂಕರ್ TNIE ಗೆ ತಿಳಿಸಿದರು.
ಭಾನುಪ್ರತಾಪುರದಲ್ಲಿರುವ ವಿದ್ಯುತ್ ಮಂಡಳಿಯ ಕಚೇರಿಯಲ್ಲಿ ಸ್ಥಳೀಯರು ರಣಹದ್ದನ್ನು ನೋಡಿ ನಂತರ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು ನೀಡಿದರು. ಮೊದಲ ಬಾರಿಗೆ ಎಲೆಕ್ಟ್ರಾನಿಕ್ ಗ್ಯಾಜೆಟ್ ಅಥವಾ ಕ್ಯಾಮೆರಾದೊಂದಿಗೆ ರಣಹದ್ದನ್ನು ನೋಡಿದ್ದು ಅದು ವಿಶೇಷವಾಗಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಸಶಸ್ತ್ರ ಸಂಘರ್ಷ ನಡೆಯುತ್ತಿರುವ ಸೂಕ್ಷ್ಮ ಪ್ರದೇಶದಲ್ಲಿ ಕಾಣಿಸಿದ್ದು ಹೆಚ್ಚಿನ ಕುತೂಹಲ ಮತ್ತು ಸ್ವಲ್ಪ ಆತಂಕವನ್ನು ಸೃಷ್ಟಿಸಿತು. ಆರಂಭದಲ್ಲಿ, ರಣಹದ್ದನ್ನು ಕಣ್ಗಾವಲು ಅಥವಾ ಬೇಹುಗಾರಿಕೆಗಾಗಿ ಬಳಸಲಾಗಿದೆ ಎಂಬ ಊಹಾಪೋಹಗಳು ವ್ಯಾಪಕವಾಗಿತ್ತು ಎಂದು ಕಂಕೇರ್ ಮೂಲದ ಹಿರಿಯ ಪತ್ರಕರ್ತ ವಿಜಯ್ ಪಾಂಡೆ ಹೇಳಿದರು.
ಏತನ್ಮಧ್ಯೆ, ದೀರ್ಘ ಹಾರಾಟದ ನಂತರ ರಣಹದ್ದು 2-3 ರಾತ್ರಿಗಳ ಕಾಲ ಯಾವುದೋ ಒಂದು ನಿರ್ದಿಷ್ಟ ಸ್ಥಳದಲ್ಲಿ ಉಳಿದು ಸ್ವಲ್ಪ ವಿಶ್ರಾಂತಿ ಪಡೆದು ನಂತರ ತನ್ನ ಹಾರಾಟವನ್ನು ಮುಂದುವರಿಸುವ ಪ್ರವೃತ್ತಿಯನ್ನು ಹೊಂದಿರುತ್ತದೆ ಎಂದು ಕಂಕೇರ್ ಡಿಎಫ್ಒ ಹೇಳಿದರು. ಬಸ್ತಾರ್ ಪ್ರದೇಶದ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕುತುಮ್ಸರ್ ಗುಹೆಗಳಲ್ಲಿ ರಣಹದ್ದುಗಳು ಗೂಡುಕಟ್ಟುಲು ಪ್ರಶಸ್ಥ ಸ್ಥಳಗಳು ಇದ್ದು, ಆದ್ದರಿಂದ ಪಕ್ಷಿಯು ಆ ಪ್ರದೇಶಕ್ಕೆ ಹೋಗಿರಬಹುದು ಎಂದು ವನ್ಯಜೀವಿ ತಜ್ಞರು ನಂಬುತ್ತಾರೆ.
Advertisement