ರೈಲು ಹರಿದು ಮಹಾಕುಂಭ ಮೇಳ ಭಕ್ತಾದಿಗಳು ಸಾವು!

ಪೂರ್ವ ಮಧ್ಯ ರೈಲ್ವೆಯ ಜಮಾಲ್ಪುರ್-ಸುಲ್ತಾಂಗಂಜ್ ರೈಲ್ವೆ ವಿಭಾಗದ ಋಷಿಕುಂಡ್ ರೈಲ್ವೆ ನಿಲುಗಡೆಯ ಬಳಿ ಬಲಿಪಶುಗಳು ರೈಲು ಹಳಿ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ.
Image used for representative purpose (File Photo)
ದಟ್ಟ ಮಂಜು ಕವಿವದ ವಾತಾವರಣದಲ್ಲಿ ರೈಲು online desk
Updated on

ಪಾಟ್ನ: ರೈಲು ಹರಿದು ಇಬ್ಬರು ಮಹಾಕುಂಭಮೇಳ ಭಕ್ತಾದಿಗಳು ಸಾವನ್ನಪ್ಪಿರುವ ಘಟನೆ ಫೆ.06 ರಂದು ನಡೆದಿದೆ.

ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಡೆದ ಅಪಘಾತದಲ್ಲಿ ಮೃತಪಟ್ಟವರನ್ನು ರಾಮ್ ರುಚಿ ದೇವಿ (65), ಅಮಿತ್ ಕುಮಾರ್ (41) ಮತ್ತು ಉಷಾ ದೇವಿ (61) ಎಂದು ಗುರುತಿಸಲಾಗಿದೆ, ಇವರು ಮಹಾ ಕುಂಭ ಮೇಳದಲ್ಲಿ ಸಂಗಮ (ಪ್ರಯಾಗ್ ರಾಜ್) ನಲ್ಲಿ ಪವಿತ್ರ ಸ್ನಾನ ಮಾಡಿ ಮನೆಗೆ ಹಿಂತಿರುಗುತ್ತಿದ್ದರು.

ಪೂರ್ವ ಮಧ್ಯ ರೈಲ್ವೆಯ ಜಮಾಲ್ಪುರ್-ಸುಲ್ತಾಂಗಂಜ್ ರೈಲ್ವೆ ವಿಭಾಗದ ಋಷಿಕುಂಡ್ ರೈಲ್ವೆ ನಿಲುಗಡೆಯ ಬಳಿ ಬಲಿಪಶುಗಳು ರೈಲು ಹಳಿ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಳಿ ದಾಟುವಾಗ ಗಯಾ-ಹೌರಾ ಎಕ್ಸ್‌ಪ್ರೆಸ್ ವೇಗವಾಗಿ ಬಂದಿದ್ದು ಭಕ್ತಾದಿಗಳು ಸಾವನ್ನಪ್ಪಿದ್ದಾರೆ ದು ಸ್ಥಳೀಯರು ಹೇಳಿದ್ದಾರೆ. ದಟ್ಟವಾದ ಮಂಜಿನಿಂದಾಗಿ ಕಳಪೆ ಗೋಚರತೆಯೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಘಟನೆಯ ನಂತರ ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತ್ತು. ಸರ್ಕಾರಿ ರೈಲ್ವೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆಯವರು ಗುಂಪನ್ನು ಚದುರಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

Image used for representative purpose (File Photo)
ಕುಂಭಮೇಳ ಕಾಲ್ತುಳಿತ 'ದೊಡ್ಡ ಘಟನೆಯೇನಲ್ಲ': ಬಿಜೆಪಿ ಸಂಸದೆ ಹೇಮಾ ಮಾಲಿನಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com