ಗಡಿಯಲ್ಲಿ ಭಾರತೀಯ ಸೇನೆ ಭರ್ಜರಿ ಬೇಟೆ: BSF ಯೋಧರಿಂದ ಮೂವರು ಪಾಕ್ ಸೈನಿಕರು ಸೇರಿದಂತೆ 7 ನುಸುಳುಕೋರರ ಹತ್ಯೆ!

ಫೆಬ್ರವರಿ 4-5ರ ರಾತ್ರಿ ಪಾಕಿಸ್ತಾನಿಗರು ಗಡಿಯೊಳಗೆ ನುಸುಳಲು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಶ್ರೀನಗರ: ಪಾಕಿಸ್ತಾನಿ ನುಸುಳುಕೋರರ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನಿ ನುಸುಳುಕೋರರು ನಡೆಸಿದ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ ಎಂದು ವರದಿಯಾಗಿದೆ.

ಫೆಬ್ರವರಿ 4-5ರ ರಾತ್ರಿ ಪಾಕಿಸ್ತಾನಿಗರು ಗಡಿಯೊಳಗೆ ನುಸುಳಲು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಭಾರತೀಯ ಸೇನೆ ಗಡಿ ನುಸುಳುವಿಕೆಯನ್ನು ತಡೆದಿದ್ದು ಇದೇ ವೇಳೆ 7 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಮೃತರ ಪೈಕಿ ಮೂವರು ಪಾಕಿಸ್ತಾನಿ ಸೇನಾ ಸಿಬ್ಬಂದಿ ಇದ್ದರು ಎಂದು ನಂಬಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಕಾಶ್ಮೀರ ಒಗ್ಗಟ್ಟಿನ ದಿನವನ್ನು ಆಚರಿಸುತ್ತಿದ್ದಾಗ, ಪಾಕಿಸ್ತಾನಿಗಳು ತಮ್ಮ ಭಾರತ ವಿರೋಧಿ ನಡೆಯನ್ನು ಮುಂದುವರಿಸಲು ಈ ಘಟನೆಯನ್ನು ನಡೆಸಿದರು. ಅದು ಭಾರತ ವಿರೋಧಿ ಕಾರ್ಯಸೂಚಿಯನ್ನು ಮುನ್ನಡೆಸುವ ಪ್ರಚಾರದ ಅಭಿಯಾನವಾಗಿತ್ತು.

ಪಾಕಿಸ್ತಾನದ ವಿಶೇಷ ಪಡೆಗಳಾದ ಬಾರ್ಡರ್ ಆಕ್ಷನ್ ಟೀಮ್ (ಬಿಎಟಿ) ಗಡಿಯನ್ನು ಪ್ರವೇಶಿಸಿದಾಗ ಭಾರತೀಯ ಸೇನೆಯು ಸೂಕ್ತ ಪ್ರತ್ಯುತ್ತರ ನೀಡಿದೆ.

ಸಂಗ್ರಹ ಚಿತ್ರ
ಜಮ್ಮು-ಕಾಶ್ಮೀರದಲ್ಲಿ ಅಮಿತ್ ಶಾ ಹೊಸ ಗುರಿ: ಭದ್ರತಾ ಪಡೆಗಳಿಗೆ ಖಡಕ್ ಸೂಚನೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com