ಪ್ರಧಾನಿ ಮೋದಿ ಅಮೇರಿಕಾ ಭೇಟಿ ನಂತರವೇ ದೆಹಲಿ ಸಿಎಂ ಪದಗ್ರಹಣ ಕಾರ್ಯಕ್ರಮ; ಆದರೆ ಸಿಎಂ ಯಾರು?

ಬಿಜೆಪಿಯ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಕುತೂಹಲ ತೀವ್ರಗೊಂಡಿದ್ದು, ಸುಮಾರು ಮೂರು ದಶಕಗಳ ನಂತರ ದೆಹಲಿಯಲ್ಲಿ ಪಕ್ಷದ ಮೊದಲ ಸರ್ಕಾರವನ್ನು ಮುನ್ನಡೆಸಲು ಹಲವಾರು ಹೆಸರುಗಳು ಕೇಳಿಬರುತ್ತಿವೆ.
Prime Minister Narendra Modi garlanded by BJP MPs Manoj Tiwari, Bansuri Swaraj, and others during the celebrations of the party's win in the Delhi Assembly Election at the party headquarters in New Delhi on Saturday.
ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿರುವ ನಾಯಕರುonline desk
Updated on

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಅಧಿಕಾರಕ್ಕೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅಮೇರಿಕಾ ಪ್ರವಾಸ ಮುಕ್ತಾಯಗೊಳಿಸಿದ ನಂತರ ದೆಹಲಿ ನೂತನ ಸಿಎಂ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

ಫೆ. 12-13 ಪ್ರಧಾನಿ ನರೇಂದ್ರ ಮೋದಿ ಅಮೇರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ಭಾರತಕ್ಕೆ ವಾಪಸ್ಸಾದ ಬಳಿಕ ದೆಹಲಿ ನೂತನ ಸಿಎಂ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಫೆಬ್ರವರಿ 5ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ 12 ವರ್ಷಗಳ ಆಳ್ವಿಕೆಯನ್ನು ಬಿಜೆಪಿ ಕೊನೆಗೊಳಿಸಿದೆ.

ಆದಾಗ್ಯೂ, ಬಿಜೆಪಿಯ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಕುತೂಹಲ ತೀವ್ರಗೊಂಡಿದ್ದು, ಸುಮಾರು ಮೂರು ದಶಕಗಳ ನಂತರ ದೆಹಲಿಯಲ್ಲಿ ಪಕ್ಷದ ಮೊದಲ ಸರ್ಕಾರವನ್ನು ಮುನ್ನಡೆಸಲು ಹಲವಾರು ಹೆಸರುಗಳು ಕೇಳಿಬರುತ್ತಿವೆ.

ಬನ್ಸುರಿ ಸ್ವರಾಜ್, ವೀರೇಂದ್ರ ಸಚ್‌ದೇವ, ಪ್ರವೇಶ್ ವರ್ಮಾ, ವಿಜೇಂದರ್ ಗುಪ್ತಾ, ಮನೋಜ್ ತಿವಾರಿ, ಸತೀಶ್ ಉಪಾಧ್ಯಾಯ, ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ರೇಖಾ ಗುಪ್ತಾ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಹಲವಾರು ಹೆಸರುಗಳು ಕೇಳಿಬರುತ್ತಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತನ್ನ ವರದಿಯಲ್ಲಿ ತಿಳಿಸಿದೆ.

ಪಕ್ಷದ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದ ಸಚ್‌ದೇವ, ಕೇಂದ್ರ ನಾಯಕತ್ವವು ಮುಖ್ಯಮಂತ್ರಿಯನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಪಕ್ಷದ ದೆಹಲಿ ಅಧ್ಯಕ್ಷರಾಗಿ, ಅವರು ಕೇಂದ್ರ ನಾಯಕತ್ವದಿಂದ ಬಲವಾದ ಬೆಂಬಲವನ್ನು ಹೊಂದಿದ್ದಾರೆ.

ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸುರಿ ಸ್ವರಾಜ್ ಅವರು ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕತ್ವದಲ್ಲಿ ಬಲವಾದ ಖ್ಯಾತಿಯನ್ನು ಹೊಂದಿದ್ದಾರೆ. ಅವರ ತಾಯಿ ಸುಷ್ಮಾ ಸ್ವರಾಜ್ ದೆಹಲಿಯ ಕೊನೆಯ ಬಿಜೆಪಿ ಮುಖ್ಯಮಂತ್ರಿಯಾಗಿದ್ದರು.

Prime Minister Narendra Modi garlanded by BJP MPs Manoj Tiwari, Bansuri Swaraj, and others during the celebrations of the party's win in the Delhi Assembly Election at the party headquarters in New Delhi on Saturday.
27 ವರ್ಷಗಳ ಬಳಿಕ ದೆಹಲಿಯಲ್ಲಿ ಅರಳಿದ ಕಮಲ: ಮುಂದಿನ ಸಿಎಂ ಯಾರು?

ನವದೆಹಲಿಯಿಂದ ಎಎಪಿ ಮುಖ್ಯಸ್ಥ ಕೇಜ್ರಿವಾಲ್ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದ ನಂತರ ಪರ್ವೇಶ್ ವರ್ಮಾ ಅವರ ರಾಜಕೀಯ ಸ್ಥಾನಮಾನ ಏರಿಕೆ ಕಂಡಿದೆ. ಇದು ಅವರನ್ನು ಉನ್ನತ ಹುದ್ದೆಗೆ ಪ್ರಬಲ ಸ್ಪರ್ಧಿಯನ್ನಾಗಿ ಮಾಡಿದೆ. ಜಾಟ್ ಸಮುದಾಯದ ಪ್ರಮುಖ ನಾಯಕರಾಗಿರುವ ಅವರು, ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರರೂ ಆಗಿದ್ದಾರೆ.

ಬಿಜೆಪಿ ವಿಜೇತರಲ್ಲಿ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿರುವ ಹಲವಾರು ಅನುಭವಿ ಹಿರಿಯ ನಾಯಕರು ಕೂಡ ಸೇರಿದ್ದಾರೆ ಎಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಪಕ್ಷದ ನಾಯಕರು ತಿಳಿಸಿದ್ದಾರೆ.

"ಇವರಲ್ಲಿ ಆಶಿಶ್ ಸೂದ್ ಮತ್ತು ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಪವನ್ ಶರ್ಮಾ ಸೇರಿದ್ದಾರೆ" ಎಂದು ದೆಹಲಿಯ ಉನ್ನತ ಬಿಜೆಪಿ ಕಾರ್ಯಕರ್ತ ಹೇಳಿದ್ದಾರೆ.

ಜನಕಪುರಿಯಿಂದ ಗೆದ್ದ ಸೂದ್, ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿ ಆಡಳಿತದ ಸಮಯದಲ್ಲಿ ಪಡೆದ ಆಡಳಿತಾತ್ಮಕ ವಿಷಯಗಳಲ್ಲಿ ಕೆಲವು ಪ್ರಾಯೋಗಿಕ ಅನುಭವ ಹೊಂದಿರುವ ಹಿರಿಯ ನಾಯಕರಾಗಿದ್ದಾರೆ. ಅವರು ಗೋವಾಕ್ಕೆ ಬಿಜೆಪಿಯ ಉಸ್ತುವಾರಿ ಮತ್ತು ಪಕ್ಷದ ಜಮ್ಮು ಮತ್ತು ಕಾಶ್ಮೀರ ಘಟಕಕ್ಕೆ ಸಹ-ಉಸ್ತುವಾರಿಯಾಗಿದ್ದಾರೆ.

ಉತ್ತಮ್ ನಗರದಿಂದ ಗೆದ್ದ ಶರ್ಮಾ, ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಅವರು ಪ್ರಸ್ತುತ ಅಸ್ಸಾಂಗೆ ಬಿಜೆಪಿಯ ಸಹ-ಉಸ್ತುವಾರಿಯಾಗಿದ್ದಾರೆ.

ಉನ್ನತ ಹುದ್ದೆಗೆ ಇತರ ಗಂಭೀರ ಸ್ಪರ್ಧಿಗಳಲ್ಲಿ ದೆಹಲಿಯ ಮಾಜಿ ಬಿಜೆಪಿ ಅಧ್ಯಕ್ಷರಾದ ವಿಜೇಂದರ್ ಗುಪ್ತಾ ಮತ್ತು ಸತೀಶ್ ಉಪಾಧ್ಯಾಯ ಸೇರಿದ್ದಾರೆ.

ಹಿಂದಿನ ದೆಹಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಗುಪ್ತಾ, ರೋಹಿಣಿ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್‌ನ ಮಾಜಿ ಉಪಾಧ್ಯಕ್ಷರಾದ ಉಪಾಧ್ಯಾಯ, ಆರ್‌ಎಸ್‌ಎಸ್ ನಾಯಕತ್ವದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ನಂಬಲಾಗಿದೆ.

ಬಿಜೆಪಿಯ ಮಧ್ಯಪ್ರದೇಶ ಘಟಕದ ಸಹ-ಉಸ್ತುವಾರಿ ಉಪಾಧ್ಯಾಯ ಅವರು ಮಾಳವೀಯ ನಗರದಿಂದ ಎಎಪಿಯ ಹಿರಿಯ ಮತ್ತು ಮಾಜಿ ಸಚಿವ ಸೋಮನಾಥ್ ಭಾರ್ತಿ ಅವರನ್ನು ಸೋಲಿಸಿದರು.

ಅದೇ ರೀತಿ, ರಾಜೌರಿ ಗಾರ್ಡನ್‌ನಿಂದ ಗೆದ್ದ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಸಿಎಂ ಅಭ್ಯರ್ಥಿಯ ಹುದ್ದೆಗೆ ಪರಿಗಣನೆಯಲ್ಲಿದ್ದಾರೆ ಮತ್ತು ದೆಹಲಿ ರಾಜಕೀಯದಲ್ಲಿ ಪ್ರಮುಖ ಪಂಜಾಬಿ ಮುಖವಾಗಿದ್ದಾರೆ.

ಪಕ್ಷದ ರಾಷ್ಟ್ರೀಯ ನಾಯಕತ್ವ ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಮಹಿಳಾ ಅಭ್ಯರ್ಥಿಯನ್ನು ಪರಿಗಣಿಸುವ ಸಾಧ್ಯತೆಯನ್ನು ಬಿಜೆಪಿ ನಾಯಕರು ತಳ್ಳಿಹಾಕಲಿಲ್ಲ. ಆ ಸಂದರ್ಭದಲ್ಲಿ, ರೇಖಾ ಗುಪ್ತಾ ಮತ್ತು ಶಿಖಾ ರೈ ಇಬ್ಬರು ಅನುಭವಿ ನಾಯಕಿಯರಾಗಿದ್ದು, ಅವರನ್ನು ಪರಿಗಣಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಗ್ರೇಟರ್ ಕೈಲಾಶ್‌ನಿಂದ ಎಎಪಿಯ ನಾಯಕ ಸೌರಭ್ ಭಾರದ್ವಾಜ್ ಅವರನ್ನು ಸೋಲಿಸಿದ ರೈ, ಶಾಲಿಮಾರ್ ಬಾಗ್‌ನಿಂದ ಗುಪ್ತಾ ಎಎಪಿಯ ವಂದನಾ ಕುಮಾರಿಯನ್ನು ಸೋಲಿಸಿದರು.

ರಾಷ್ಟ್ರೀಯ ನಾಯಕತ್ವವು ಪಕ್ಷದ ಶಾಸಕಾಂಗ ಪಕ್ಷದ ಸದಸ್ಯರಿಂದ ಹೊರಗಿನ ಯಾರನ್ನಾದರೂ ಆಯ್ಕೆ ಮಾಡಿದರೆ, ಕೇಂದ್ರ ಸಚಿವ ಹರ್ಷ್ ಮಲ್ಹೋತ್ರಾ ಮತ್ತು ಈಶಾನ್ಯ ದೆಹಲಿ ಸಂಸದ ಮನೋಜ್ ತಿವಾರಿ ಅವರಂತಹ ಕೆಲವು ಹಾಲಿ ಸಂಸದರನ್ನು ಸಹ ಪರಿಗಣಿಸಬಹುದು ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ.

Prime Minister Narendra Modi garlanded by BJP MPs Manoj Tiwari, Bansuri Swaraj, and others during the celebrations of the party's win in the Delhi Assembly Election at the party headquarters in New Delhi on Saturday.
ದೆಹಲಿ ಜನತೆ ತುಷ್ಟೀಕರಣ ರಾಜಕೀಯವನ್ನು ತಿರಸ್ಕರಿಸಿದೆ: ಹೆಚ್‌.ಡಿ ಕುಮಾರಸ್ವಾಮಿ

ಈಶಾನ್ಯ ದೆಹಲಿಯಿಂದ ಮೂರು ಬಾರಿ ಸಂಸದರಾಗಿರುವ ತಿವಾರಿ, ದೆಹಲಿಯ ಪೂರ್ವಾಂಚಲಿ ಮತದಾರರಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದು, ಭೋಜ್‌ಪುರಿ ಚಲನಚಿತ್ರ ತಾರೆಯಾಗಿ ತಮ್ಮ ವೃತ್ತಿಜೀವನದಿಂದಾಗಿ ಗಮನಾರ್ಹ ಬೆಂಬಲವನ್ನು ಹೊಂದಿದ್ದಾರೆ.

ಪೂರ್ವ ದೆಹಲಿಯ ಸಂಸದರಾಗಿರುವ ಮಲ್ಹೋತ್ರಾ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರಾಗಿದ್ದಾರೆ.

"ನಿಮಗೆ ಗೊತ್ತಿಲ್ಲ... ರಾಷ್ಟ್ರೀಯ ನಾಯಕತ್ವವು ಎಲ್ಲರಿಗೂ ಸರಿಹೊಂದುವ ಮತ್ತು ಜನರ ಹೆಚ್ಚಿನ ನಿರೀಕ್ಷೆಗಳ ನಡುವೆ ದೆಹಲಿಯ ಮುಖ್ಯಮಂತ್ರಿಯಾಗಿ ಕರ್ತವ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಹೊಸ ಮುಖವನ್ನು ಹೊರತರಬಹುದು" ಎಂದು ಬಿಜೆಪಿಯ ನಾಯಕರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com