ಎಎಪಿಗೆ ಮತ್ತೊಂದು ಶಾಕ್; ದೆಹಲಿ ಮೇಯರ್ ಚುನಾವಣೆಗೂ ಮುನ್ನ 3 ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ

ಆಪ್ ಕೌನ್ಸಿಲರ್‌ಗಳನ್ನು ಪಕ್ಷಕ್ಕೆ ಸ್ವಾಗತಿಸಿದ ನಗರ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, ದೆಹಲಿಯು ಕೇಂದ್ರ, ವಿಧಾನಸಭೆ ಮತ್ತು ಪುರಸಭೆ ಮಟ್ಟದಲ್ಲಿ "ತ್ರಿವಳಿ ಎಂಜಿನ್" ಸರ್ಕಾರವನ್ನು ಹೊಂದಲಿದೆ ಎಂದರು.
ಎಎಪಿ ಪಕ್ಷದ ಚಿಹ್ನೆ ಸಾಂದರ್ಭಿಕ ಚಿತ್ರ
ಎಎಪಿ ಪಕ್ಷದ ಚಿಹ್ನೆ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಎಎಪಿಗೆ ಬಿಜೆಪಿ ಮತ್ತೊಂದು ಆಘಾತ ನೀಡಿದೆ. ಮೂವರು ಎಎಪಿ ಕೌನ್ಸಿಲರ್‌ಗಳು ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದು, ಮುಂಬರುವ ಎಂಸಿಡಿ ಮೇಯರ್ ಚುನಾವಣೆಯಲ್ಲಿ ಕೇಸರಿ ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.

ಆಪ್ ಕೌನ್ಸಿಲರ್‌ಗಳನ್ನು ಪಕ್ಷಕ್ಕೆ ಸ್ವಾಗತಿಸಿದ ನಗರ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, ದೆಹಲಿಯು ಕೇಂದ್ರ, ವಿಧಾನಸಭೆ ಮತ್ತು ಪುರಸಭೆ ಮಟ್ಟದಲ್ಲಿ "ತ್ರಿವಳಿ ಎಂಜಿನ್" ಸರ್ಕಾರವನ್ನು ಹೊಂದಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನದ 'ವಿಕ್ಷಿತ್ ಭಾರತ'ದ ಅಡಿಯಲ್ಲಿ ರಾಷ್ಟ್ರ ರಾಜಧಾನಿಯನ್ನು ಅಭಿವೃದ್ಧಿಪಡಿಸಲು ಇದು ಸರಿಯಾದ ಸಮಯ ಎಂದು ಹೇಳಿದರು.

ಎಎಪಿ ಪಕ್ಷದ ಚಿಹ್ನೆ ಸಾಂದರ್ಭಿಕ ಚಿತ್ರ
ದೆಹಲಿ ಜನತೆಗೆ ಉತ್ತಮ ಆಡಳಿತ ಬೇಕು, ನಾಟಕವಲ್ಲ: ಎಎಪಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಮೂವರು ಕೌನ್ಸಿಲರ್‌ಗಳಾದ ಅನಿತಾ ಬಸೋಯಾ(ಆಂಡ್ರ್ಯೂಸ್ ಗಂಜ್), ನಿಖಿಲ್ ಚಪ್ರಾಣ(ಹರಿ ನಗರ) ಮತ್ತು ಧರ್ಮವೀರ್(ಆರ್ ಕೆ ಪುರಂ) ಬಿಜೆಪಿ ಸೇರಿದರು.

ದೆಹಲಿಯನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ಕೌನ್ಸಿಲರ್‌ಗಳು ಬಿಜೆಪಿಗೆ ಸೇರಿದರು ಎಂದು ಸಚ್‌ದೇವ ಹೇಳಿದ್ದಾರೆ.

ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ, ಬಿಜೆಪಿ ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ದೆಹಲಿಯಲ್ಲಿ "ತ್ರಿವಳಿ ಎಂಜಿನ್ ಸರ್ಕಾರ" ರಚಿಸಲು ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com