ಮುಂದಿನ CEC ಹೆಸರನ್ನು ಅಂತಿಮಗೊಳಿಸಿದ ಪ್ರಧಾನಿ ಮೋದಿ ನೇತೃತ್ವದ ಸಮಿತಿ: ಕಾಂಗ್ರೆಸ್ ನಿಂದ ತಗಾದೆ!

ಮೋದಿ ಜೊತೆಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಿಇಸಿಯನ್ನು ಆಯ್ಕೆ ಮಾಡುವ ಮೂವರು ಸದಸ್ಯರ ಸಮಿತಿಯ ಭಾಗವಾಗಿದ್ದಾರೆ.
Rahul Gandhi
ರಾಹುಲ್ ಗಾಂಧಿonline desk
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಇಂದು ಸಂಜೆ ಇಲ್ಲಿ ಸಭೆ ಸೇರಿ ಮುಂದಿನ ಮುಖ್ಯ ಚುನಾವಣಾ ಆಯುಕ್ತರ ಹೆಸರನ್ನು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. ಸುಪ್ರೀಂ ಕೋರ್ಟ್ ವಿಚಾರಣೆಯವರೆಗೆ ನಿರ್ಧಾರವನ್ನು ಮುಂದೂಡುವಂತೆ ಕಾಂಗ್ರೆಸ್ ಸರ್ಕಾರವನ್ನು ಕೇಳಿಕೊಂಡಿದ್ದರೂ ಸಹ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮೋದಿ ಜೊತೆಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಿಇಸಿಯನ್ನು ಆಯ್ಕೆ ಮಾಡುವ ಮೂವರು ಸದಸ್ಯರ ಸಮಿತಿಯ ಭಾಗವಾಗಿದ್ದಾರೆ.

ಸಮಿತಿ ಸೌತ್ ಬ್ಲಾಕ್‌ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಸಭೆ ಸೇರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹೆಸರನ್ನು ಶಿಫಾರಸು ಮಾಡಿದೆ. ಮುಂದಿನ ಸಿಇಸಿ ಹೆಸರನ್ನು ಘೋಷಿಸುವ ಅಧಿಸೂಚನೆಯನ್ನು "ಮುಂದಿನ ಕೆಲವು ಗಂಟೆಗಳಲ್ಲಿ" ಹೊರಡಿಸಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಹಾಲಿ ಸಿಇಸಿ ರಾಜೀವ್ ಕುಮಾರ್ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸಿಇಸಿ ನೇಮಕವಾಗುತ್ತಿದೆ.

ಪೂರ್ವನಿದರ್ಶನದಂತೆ, ಹಿರಿಯ ಚುನಾವಣಾ ಆಯುಕ್ತರು (ಇಸಿ) ಹುದ್ದೆಯಲ್ಲಿರುವವರ ನಿವೃತ್ತಿಯ ನಂತರ ಸಿಇಸಿಯಾಗಿ ಬಡ್ತಿ ಪಡೆಯುತ್ತಿದ್ದರು. ಆದಾಗ್ಯೂ, ಸಿಇಸಿ ಮತ್ತು ಇಸಿಗಳ ನೇಮಕಾತಿ ಕುರಿತ ಹೊಸ ಕಾನೂನು 2023 ರಲ್ಲಿ ಜಾರಿಗೆ ಬಂದ ನಂತರ, ಶೋಧನಾ ಸಮಿತಿಯು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಐದು ಹೆಸರುಗಳನ್ನು ಆಯ್ಕೆ ಮಾಡುತ್ತದೆ, ಇದನ್ನು ಪ್ರಧಾನಿ ನೇತೃತ್ವದ ಸಮಿತಿಯು ಪರಿಗಣಿ ಅಂತಿಮಗೊಳಿಸುತ್ತದೆ.

ಹೊಸ ಕಾನೂನನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಮತ್ತು ಮುಂದಿನ ವಿಚಾರಣೆಯನ್ನು ಫೆಬ್ರವರಿ 19 ರಂದು ನಿಗದಿಪಡಿಸಲಾಗಿದೆ. ರಾಜೀವ್ ಕುಮಾರ್ ನಂತರ, ಜ್ಞಾನೇಶ್ ಕುಮಾರ್ ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದಾರೆ. ಚುನಾವಣಾ ಆಯುಕ್ತರಾಗಿ ಅವರ ಅಧಿಕಾರಾವಧಿ ಜನವರಿ 26, 2029 ರವರೆಗೆ ಇರಲಿದೆ.

ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಸಿಇಸಿಯಾಗಿ ಅನುಮೋದಿಸಿದರೆ, ಅವರ ಬಡ್ತಿಯಿಂದ ಉಂಟಾದ ಖಾಲಿ ಹುದ್ದೆಯನ್ನು ತುಂಬಲು ಹೊಸ ಇಸಿಯನ್ನು ಸಹ ನೇಮಕ ಮಾಡುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ, ಆಯ್ಕೆ ಸಮಿತಿಯ ಸಂಯೋಜನೆಯನ್ನು ಪ್ರಶ್ನಿಸುವ ಅರ್ಜಿಯ ಕುರಿತು ಫೆಬ್ರವರಿ 19ರಂದು ಸುಪ್ರೀಂ ಕೋರ್ಟ್ ವಿಚಾರಣೆಯವರೆಗೆ ಹೊಸ ಸಿಇಸಿ ಕುರಿತು ತನ್ನ ನಿರ್ಧಾರವನ್ನು ಮುಂದೂಡುವಂತೆ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ, ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಆಯ್ಕೆ ಸಮಿತಿಯಿಂದ ತೆಗೆದುಹಾಕುವ ಮೂಲಕ, ಸರ್ಕಾರ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಕಾಪಾಡುವ ಬದಲು ನಿಯಂತ್ರಣವನ್ನು ಬಯಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳುವುದನ್ನು ಹೊರತುಪಡಿಸಿ ಸಭೆಯಲ್ಲಿ ಏನಾಯಿತು ಎಂಬುದರ ಕುರಿತು ಸಿಂಘ್ವಿ ಏನನ್ನೂ ಬಹಿರಂಗಪಡಿಸಲಿಲ್ಲ. ಹೊಸ ಕಾಯ್ದೆಯನ್ನು ಪ್ರಶ್ನಿಸುವ ಪ್ರಕರಣವು ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇದೆ, ಈ ವಿಷಯವನ್ನು ಈಗ ಫೆಬ್ರವರಿ 19 ರಂದು ಮುಂದಿನ ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂದು ಸಿಂಘ್ವಿ ಹೇಳಿದರು.

Rahul Gandhi
Freebie ವ್ಯಾಖ್ಯಾನ ಕಷ್ಟ; ಚುನಾವಣಾ ಆಯೋಗದ 'ಕೈ ಕಟ್ಟಲಾಗಿದೆ': ಸಿಇಸಿ ರಾಜೀವ್ ಕುಮಾರ್

"ವಿಚಾರಣೆಯ ನಂತರ ಕೇಂದ್ರ ಸರ್ಕಾರ ಈ ಸಭೆಯನ್ನು ನಡೆಸಬೇಕು ಮತ್ತು ವಿಚಾರಣೆಯು ಪರಿಣಾಮಕಾರಿಯಾಗಿರಲು ನ್ಯಾಯಾಲಯಕ್ಕೆ ಹಾಜರಾಗಲು ಮತ್ತು ಸಹಾಯ ಮಾಡಲು ತನ್ನ ವಕೀಲರಿಗೆ ಸೂಚಿಸಬೇಕು ಎಂಬುದು ನಮ್ಮ ಸಲಹೆಯಾಗಿದೆ. ಆಗ ಮಾತ್ರ, ಗಂಭೀರವಾಗಿ ನಿರ್ಧಾರ ತೆಗೆದುಕೊಳ್ಳಬಹುದು" ಎಂದು ಸಿಂಘ್ವಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಖಜಾಂಚಿ ಅಜಯ್ ಮಾಕೆನ್, "19 ರಂದು ಸಮಿತಿಯ ರಚನೆಯ ಕುರಿತಾದ ಪ್ರಕರಣವನ್ನು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಸೂಚಿಸಿದಾಗ, ಈ ಸಭೆಯನ್ನು ಮುಂದೂಡಬೇಕಿತ್ತು ಎಂದು ಕಾಂಗ್ರೆಸ್ ಬಯಸುತ್ತದೆ" ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com