"ಗುಲಾಮಿ ಮನಸ್ಥಿತಿ...": ಮಹಾಕುಂಭ ಮೇಳದ ಬಗ್ಗೆ ಟೀಕೆಗಳಿಗೆ ಪ್ರಧಾನಿ ಮೋದಿ ಕೆಂಡಾಮಂಡಲ

ಮಹಾಕುಂಭ ಮೇಳವನ್ನು ಟೀಕಿಸುವವರನ್ನು "ದೇಶವನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ವಿದೇಶಿ ಶಕ್ತಿಗಳಿಗೆ" ಹೋಲಿಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಥವರು "ಗುಲಾಮ ಮನಸ್ಥಿತಿ" ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
"ಗುಲಾಮಿ ಮನಸ್ಥಿತಿ...": ಮಹಾಕುಂಭ ಮೇಳದ ಬಗ್ಗೆ ಟೀಕೆಗಳಿಗೆ ಪ್ರಧಾನಿ ಮೋದಿ ಕೆಂಡಾಮಂಡಲ
Updated on

ಭಾಗೇಶ್ವರ್ ಧಾಮ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹಾ ಕುಂಭಮೇಳದ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಾಕುಂಭ ಮೇಳವನ್ನು ಟೀಕಿಸುವವರನ್ನು "ದೇಶವನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ವಿದೇಶಿ ಶಕ್ತಿಗಳಿಗೆ" ಹೋಲಿಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಥವರು "ಗುಲಾಮ ಮನಸ್ಥಿತಿ" ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, "ಇತ್ತೀಚಿನ ದಿನಗಳಲ್ಲಿ ಧರ್ಮವನ್ನು ಅಪಹಾಸ್ಯ ಮಾಡುವ, ಅದನ್ನು ಟೀಕಿಸುವ, ಜನರನ್ನು ವಿಭಜಿಸುವಲ್ಲಿ ತೊಡಗಿರುವ ನಾಯಕರ ಗುಂಪೊಂದು ಇದೆ ಮತ್ತು ಅನೇಕ ಬಾರಿ ವಿದೇಶಿ ಶಕ್ತಿಗಳು ಈ ಜನರನ್ನು ಬೆಂಬಲಿಸುವ ಮೂಲಕ ದೇಶ ಮತ್ತು ಧರ್ಮವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ" ಎಂದು ಮೋದಿ ಆರೋಪಿಸಿದ್ದಾರೆ.

"ಹಿಂದೂ ನಂಬಿಕೆಯನ್ನು ದ್ವೇಷಿಸುವ ಜನರು ಶತಮಾನಗಳಿಂದ ಒಂದಲ್ಲ ಒಂದು ಹಂತದಲ್ಲಿ ಬದುಕುತ್ತಿದ್ದಾರೆ. ಗುಲಾಮ ಮನಸ್ಥಿತಿಗೆ ಬಿದ್ದ ಜನರು ನಮ್ಮ ನಂಬಿಕೆ, ನಂಬಿಕೆಗಳು ಮತ್ತು ದೇವಾಲಯಗಳು, ನಮ್ಮ ಧರ್ಮ, ಸಂಸ್ಕೃತಿ ಮತ್ತು ತತ್ವಗಳ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ, ಈ ಗುಲಾಮಿ ಮನಸ್ಥಿತಿಯ ಜನರು, "ನಮ್ಮ ಹಬ್ಬಗಳು, ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಮೋದಿ ಹೇಳಿದರು.

"ಇಂತಹ ಜನರು, ಸ್ವಭಾವತಃ ಪ್ರಗತಿಪರವಾದ ಧರ್ಮ ಮತ್ತು ಸಂಸ್ಕೃತಿಯ ಮೇಲೆ ದಾಳಿ ಮಾಡಲು ಧೈರ್ಯ ಮಾಡುತ್ತಾರೆ. ನಮ್ಮ ಸಮಾಜವನ್ನು ವಿಭಜಿಸುವುದು ಮತ್ತು ಅದರ ಏಕತೆಯನ್ನು ಮುರಿಯುವುದು ಅವರ ಕಾರ್ಯಸೂಚಿಯಾಗಿದೆ" ಎಂದು ಮೋದಿ ಆರೋಪಿಸಿದ್ದಾರೆ.

ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ಮಾತನಾಡಿದ್ದ ವಿರೋಧ ಪಕ್ಷಗಳು, ಕುಂಭ ಮೇಳ ಆಯೋಜನೆಯನ್ನು ಟೀಕಿಸಿದ್ದವು.

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ "ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆಯೆ? ಎಂದು ಪ್ರಶ್ನಿಸಿದ್ದರು. ಮಹಾಕುಂಭ ಕಾಲ್ತುಳಿತದಲ್ಲಿ ಮೃತಪಟ್ಟವರ ಶವಗಳನ್ನು "ನದಿಗೆ ಎಸೆಯಲಾಗುತ್ತಿದೆ" ಎಂದು ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್ ಹೇಳಿದ್ದರು. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಲ್ತುಳಿತದಿಂದ ಉಂಟಾದ ಸಾವುಗಳನ್ನು ಉಲ್ಲೇಖಿಸಿ ಇದು ಮಹಾಕುಂಭ ಮೇಳ ಅಲ್ಲ "ಮೃತ್ಯು ಕುಂಭ" ಎಂದು ಹೇಳಿದ್ದರು.

"ಗುಲಾಮಿ ಮನಸ್ಥಿತಿ...": ಮಹಾಕುಂಭ ಮೇಳದ ಬಗ್ಗೆ ಟೀಕೆಗಳಿಗೆ ಪ್ರಧಾನಿ ಮೋದಿ ಕೆಂಡಾಮಂಡಲ
ಟ್ರಂಪ್, ಮೋದಿ..: ಜಾಗತಿಕವಾಗಿ ಬಲಪಂಥೀಯ ನಾಯಕರು ಬಲಿಷ್ಠರಾಗುತ್ತಿರುವುದಕ್ಕೆ ಲಿಬರಲ್ ಗಳಿಗೆ ಉರಿ- ಇಟಾಲಿ ಪ್ರಧಾನಿ Giorgia Meloni

ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ಬೆಂಬಲಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಹಾ ಕುಂಭದ ಪ್ರಮಾಣ ಮತ್ತು ಖರ್ಚಿನ ಬಗ್ಗೆ ಮತ್ತಷ್ಟು ಟೀಕೆ ಮಾಡಿದ್ದರು. ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಜ್ಯೋತಿಷ್ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಬೆಂಬಲಿಸಿ ಮಹಾಕುಂಭ ಮೇಳದ ಆಯೋಜನೆ ಬಗ್ಗೆ ಟೀಕಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com