ಸಿಎಂ ಪಿಣರಾಯಿ ಸರ್ಕಾರಕ್ಕೆ ಕೌಂಟಡೌನ್ ಶುರು: ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ TMC ಸೇರಿದ ಪಿವಿ ಅನ್ವರ್ ವಾರ್ನಿಂಗ್!

30 ವರ್ಷಗಳಿಂದ ಕಾಂಗ್ರೆಸ್‌ನ ಆರ್ಯದನ್ ಮುಹಮ್ಮದ್ ಗೆಲ್ಲುತ್ತಿದ್ದ ನಿಲಂಬೂರ್ ಕ್ಷೇತ್ರವನ್ನು ಎರಡು ಬಾರಿ ಗೆಲ್ಲುವ ಮೂಲಕ ಅನ್ವರ್ ಎಡಪಂಥೀಯರಲ್ಲಿ ಜನಪ್ರಿಯರಾಗಿದ್ದರು.
PV Anwar
ಸ್ಪೀಕರ್ ಗೆ ಪಿವಿ ಅನ್ವರ್ ರಾಜಿನಾಮೆ ಸಲ್ಲಿಕೆTNIE
Updated on

ತಿರುವನಂತಪುರಂ: ನಿಲಂಬೂರು ಶಾಸಕ ಪಿ.ವಿ ಅನ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಇಂದು ಸ್ಪೀಕರ್ ಎ.ಎನ್. ಶಂಸೀರ್ ಅವರಿಗೆ ಸಲ್ಲಿಸಿದರು. ತೃಣಮೂಲ ಕಾಂಗ್ರೆಸ್ ಸೇರಿದ ನಂತರ ಅನರ್ಹತೆಯನ್ನು ತಪ್ಪಿಸಲು ಅನ್ವರ್ ರಾಜೀನಾಮೆ ನೀಡಿದ್ದಾರೆ. ಶನಿವಾರವೇ ತಮ್ಮ ರಾಜೀನಾಮೆ ಪತ್ರವನ್ನು ಇಮೇಲ್ ಮೂಲಕ ಕಳುಹಿಸಿರುವುದಾಗಿ ಅನ್ವರ್ ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕವಾಗಿ ಪತ್ರವನ್ನು ಸಲ್ಲಿಸಬೇಕಾಗಿರುವುದರಿಂದ ಇಂದು ಸ್ಪೀಕರ್ ಅವರನ್ನು ಭೇಟಿ ಮಾಡಿ ಪತ್ರವನ್ನು ಹಸ್ತಾಂತರಿಸಿದರು.

ಎಡಪಕ್ಷಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾದ ನಂತರ ತೃಣಮೂಲ ಕಾಂಗ್ರೆಸ್ ಸೇರಿದ ನಂತರ ಅನ್ವರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. 30 ವರ್ಷಗಳಿಂದ ಕಾಂಗ್ರೆಸ್‌ನ ಆರ್ಯದನ್ ಮುಹಮ್ಮದ್ ಗೆಲ್ಲುತ್ತಿದ್ದ ನಿಲಂಬೂರ್ ಕ್ಷೇತ್ರವನ್ನು ಎರಡು ಬಾರಿ ಭರ್ಜರಿ ಬಹುಮತದಿಂದ ಗೆಲ್ಲುವ ಮೂಲಕ ಅನ್ವರ್ ಎಡಪಂಥೀಯರಲ್ಲಿ ಜನಪ್ರಿಯರಾಗಿದ್ದರು. ಪೊಲೀಸರ ವಿರುದ್ಧದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸದ ನಂತರ ಅವರು ಸಿಪಿಎಂ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹೋರಾಟ ಶುರು ಮಾಡಿದ್ದಾರೆ. ರಾಜೀನಾಮೆಯೊಂದಿಗೆ, ಅನ್ವರ್ ಎಡಪಂಥೀಯರೊಂದಿಗಿನ 14 ವರ್ಷಗಳ ಸಂಬಂಧವನ್ನು ತ್ಯಜಿಸಿದ್ದಾರೆ.

ಇನ್ನು ತಮ್ಮ ರಾಜಿನಾಮೆ ಕುರಿತಂತೆ ಪ್ರತಿಕ್ರಿಯಿಸಿದ ಪಿವಿ ಅನ್ವರ್, ಸಿಎಂ ಪಿಣರಾಯಿ ಸರ್ಕಾರಕ್ಕೆ ಕೌಂಟಡೌನ್ ಶುರುವಾಗಿದೆ. ತೃಣಮೂಲ ಪಕ್ಷದ ಭಾಗವಾಗಿ ಪಿಣರಾಯಿ ವಿಜಯನ್ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಅನ್ವರ್ ಹೇಳಿದ್ದಾರೆ. ರಾಜಿನಾಮೆ ಬೆನ್ನಲ್ಲೇ ಅನ್ವರ್ ಅವರನ್ನು ತೃಣಮೂಲ ಪಕ್ಷದ ರಾಜ್ಯ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಅನ್ವರ್ ನಿನ್ನೆ ಕೋಲ್ಕತ್ತಾದಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದರು.

PV Anwar
ಚುನಾವಣೆ ವೆಚ್ಚಕ್ಕಾಗಿ ಅತಿಶಿಯ ಕ್ರೌಡ್ ಫಂಡಿಂಗ್ ಅಭಿಯಾನ: ಕೇವಲ ಆರು ಗಂಟೆಗಳಲ್ಲಿ 15 ಲಕ್ಷ ರೂ ಸಂಗ್ರಹ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com