ಅಮೇರಿಕ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ದೇಶದಿಂದ ರಾಯಭಾರ ಕಚೇರಿ ಸ್ಥಾಪನೆ!

ಎರಡು ದಿನಗಳ ಸ್ಪೇನ್ ಭೇಟಿಯಲ್ಲಿರುವ ಜೈಶಂಕರ್ ಮ್ಯಾಡ್ರಿಡ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುವಾಗ ಈ ಮಾಹಿತಿ ಹಂಚಿಕೊಂಡಿದ್ದಾರೆ.
Vidhana Saudha
ವಿಧಾನಸೌಧ online desk
Updated on

ಬೆಂಗಳೂರು: ಅಮೇರಿಕಾ ಬೆಂಗಳೂರಿನಲ್ಲಿ ರಾಯಭಾರ ಕಚೇರಿ ಸ್ಥಾಪನೆ ಮಾಡಿರುವ ಬೆನ್ನಲ್ಲೇ ಮತ್ತೊಂದು ದೇಶ ನಗರದಲ್ಲಿ ತನ್ನ ದೂತವಾಸ ಕಚೇರಿ ಆರಂಭಿಸಲು ಮುಂದಾಗಿದೆ.

ಸ್ಪೇನ್ (Spain) ಶೀಘ್ರದಲ್ಲೇ ಬೆಂಗಳೂರಿನಲ್ಲಿ ಕಾನ್ಸುಲೇಟ್ ತೆರೆಯಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಇದು ಎರಡೂ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸಲು "ಒಳ್ಳೆಯ ಬೆಳವಣಿಗೆ" ಎಂದು ಹೇಳಿದ್ದಾರೆ.

ಎರಡು ದಿನಗಳ ಸ್ಪೇನ್ ಭೇಟಿಯಲ್ಲಿರುವ ಜೈಶಂಕರ್ ಮ್ಯಾಡ್ರಿಡ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುವಾಗ ಈ ಮಾಹಿತಿ ಹಂಚಿಕೊಂಡಿದ್ದಾರೆ.

"ನಮ್ಮ ಜನರ ಸಂಬಂಧದ ವಿಷಯದಲ್ಲಿ, ಬಾರ್ಸಿಲೋನಾದ ಜನರು ನಮಗೆ ಅಲ್ಲಿ (ಬೆಂಗಳೂರಿನಲ್ಲಿ) ಕಾನ್ಸುಲೇಟ್ ಇರುವುದನ್ನು ಸ್ವಾಗತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಬೆಂಗಳೂರಿನಲ್ಲಿ ಶೀಘ್ರದಲ್ಲೇ ಸ್ಪ್ಯಾನಿಷ್ ಕಾನ್ಸುಲೇಟ್ ಇರುತ್ತದೆ" ಎಂದು ಅವರು ಸಮುದಾಯದೊಂದಿಗೆ ಸಂವಾದ ನಡೆಸುವಾಗ ಹೇಳಿದ್ದಾರೆ.

"ನಮ್ಮ ಸಂಬಂಧವು ಗಾಢವಾಗುತ್ತಿದೆ ಎಂಬುದಕ್ಕೆ ಇವು ಒಳ್ಳೆಯ ಸೂಚನೆಗಳಾಗಿವೆ ಮತ್ತು ವ್ಯವಹಾರ ದೊಡ್ಡದಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಸ್ಥಾಪನೆಗಳನ್ನು ರಚಿಸುತ್ತೀರಿ ಎಂದು ಹೇಳಬಹುದಾಗಿದೆ ಎಂದು ಜೈಶಂಕರ್ ಮಾಹಿತಿ ನೀಡಿದ್ದಾರೆ. ಸಂಬಂಧ ಗಾಢವಾಗುತ್ತಿದ್ದಂತೆ, ನಮಗೆ ಕಾನ್ಸುಲೇಟ್ ಇರುತ್ತದೆ ಮತ್ತು ಭವಿಷ್ಯದಲ್ಲಿ ನಾವು ಎಲ್ಲಿದ್ದೇವೆ ಎಂದು ಯಾರಿಗೆ ತಿಳಿದಿದೆ" ಎಂದು ಅವರು ಹೇಳಿದ್ದಾರೆ.

"ನಾವು 2026 ಅನ್ನು ದ್ವಿ ವರ್ಷವೆಂದು ಗುರುತಿಸಲು ನಿರ್ಧರಿಸಿದ್ದೇವೆ. ಎರಡೂ ದೇಶಗಳಲ್ಲಿ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಕೃತಕ ಬುದ್ಧಿಮತ್ತೆಯನ್ನು ಆಚರಿಸುವ ದ್ವಿ ವರ್ಷ ಇದಾಗಿರಲಿದೆ. ಆದ್ದರಿಂದ 2025 ರ ಹೊತ್ತಿಗೆ, ನಾವು 2026 ಕ್ಕೆ ತಯಾರಿ ನಡೆಸಲು ಶ್ರಮಿಸುತ್ತೇವೆ" ಎಂದು ಅವರು ಹೇಳಿದರು.

Vidhana Saudha
ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಸ್ಥಾಪನೆ: ಜನವರಿಯಲ್ಲಿ ಕಾರ್ಯಾರಂಭ; ಐತಿಹಾಸಿಕ ಮೈಲಿಗಲ್ಲು- ತೇಜಸ್ವಿ ಸೂರ್ಯ

ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಭಾರತಕ್ಕೆ ಭೇಟಿ ನೀಡಿದ ಸುಮಾರು ಎರಡೂವರೆ ತಿಂಗಳ ನಂತರ - ವಿದೇಶಾಂಗ ಸಚಿವರಾಗಿ ಜೈಶಂಕರ್ ಅವರು ಸ್ಪೇನ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

ಜೈಶಂಕರ್ ಅವರು ಸ್ಪ್ಯಾನಿಷ್ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬಾರೆಸ್ ಅವರನ್ನು ಭೇಟಿ ಮಾಡಿ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು. ಭಾರತದಲ್ಲಿ 230 ಸ್ಪ್ಯಾನಿಷ್ ಕಂಪನಿಗಳಿವೆ ಮತ್ತು ನಾವು "ನಮ್ಮೊಂದಿಗೆ ಸೇರಿ ಮತ್ತು ಭಾರತದಲ್ಲಿ ತಯಾರಿಸುವುದಕ್ಕೆ, ಭಾರತದಲ್ಲಿ ವಿನ್ಯಾಸಗೊಳಿಸುವುದಕ್ಕೆ ಮತ್ತು ಭಾರತದಲ್ಲಿ ಸಹಯೋಗದಲ್ಲಿ ತೊಡಗಿಸಿಕೊಳ್ಳುವುದಕ್ಕೆ" ಅವರನ್ನು ಸ್ವಾಗತಿಸುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com