'ಭಾರತ ಸತ್ತರೆ ಯಾರು ಉಳಿಯುತ್ತಾರೆ'?: ನೆಹರೂ ಹೇಳಿಕೆ ಉಲ್ಲೇಖಿಸಿದ Shashi Tharoor; ಚರ್ಚೆಗೆ ಗ್ರಾಸ

ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ನಾಯಕತ್ವದೊಂದಿಗಿನ ಸಂಬಂಧಗಳ ಕುರಿತು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
Shashi Tharoor
ಶಶಿ ತರೂರ್
Updated on

ಕೊಚ್ಚಿ: ಕಾಂಗ್ರೆಸ್ ನಾಯಕರೊಂದಿಗೆ ತಮ್ಮ ಭಿನ್ನಾಭಿಪ್ರಾಯದ ನಡುವೆ, ಸಂಸದ ಶಶಿ ತರೂರ್, ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೆಲವೊಮ್ಮೆ ಇತರ ಪಕ್ಷಗಳೊಂದಿಗೆ ಸಹಕರಿಸುವುದು ಅಗತ್ಯವಾಗುತ್ತದೆ ಎಂದು ಹೇಳಿದ್ದಾರೆ.

ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ನಾಯಕತ್ವದೊಂದಿಗಿನ ಸಂಬಂಧಗಳ ಕುರಿತು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ನನಗೆ ರಾಷ್ಟ್ರದ ಭದ್ರತೆ ಯಾವಾಗಲೂ ಮೊದಲು ಎಂದು ಒತ್ತಿ ಹೇಳಿದರು. ಯಾವುದೇ ರಾಜಕೀಯ ಪಕ್ಷದ ಮುಖ್ಯ ದೃಷ್ಟಿಕೋನವು ಉತ್ತಮ ಭಾರತವನ್ನು ನಿರ್ಮಿಸುವುದಾಗಿದೆ. ಯಾವುದೇ ಪ್ರಜಾಪ್ರಭುತ್ವದಲ್ಲಿ ದುರದೃಷ್ಟವಶಾತ್ ರಾಜಕೀಯ ಎಂದರೆ ಪೈಪೋಟಿ ಎಂಬುದಾಗಿದೆ. ನನ್ನಂತಹ ಜನರು ನಮ್ಮ ಪಕ್ಷಗಳನ್ನು ಗೌರವಿಸುತ್ತೇವೆ ಎಂದು ಹೇಳಿದಾಗ, ನಮಗೆ ಕೆಲವು ಮೌಲ್ಯಗಳು ಮತ್ತು ನಂಬಿಕೆಗಳು ಮುಖ್ಯವಾಗಿ ಅದು ನಮ್ಮನ್ನು ನಮ್ಮ ಪಕ್ಷಗಳಲ್ಲಿಯೇ ಉಳಿಸಿಕೊಳ್ಳುತ್ತದೆ.

ಆದರೆ ನೀವು ಕೇಳಿದ ಪ್ರಶ್ನೆಗೆ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ನಾವು ಇತರ ಪಕ್ಷಗಳೊಂದಿಗೆ ಸಹಕರಿಸಬೇಕಾಗಿದೆ. ಕೆಲವೊಮ್ಮೆ ಪಕ್ಷಗಳು ನಿಷ್ಠೆಯಿಲ್ಲ ಎಂದು ಭಾವಿಸಿ ಅದು ದೊಡ್ಡ ಸಮಸ್ಯೆಯಾಗುತ್ತದೆ ನಿಮ್ಮ ಮೊದಲ ನಿಷ್ಠೆ ಯಾವುದು? ನನ್ನ ಅಭಿಪ್ರಾಯದಲ್ಲಿ ರಾಷ್ಟ್ರವು ಮೊದಲು ಬರುತ್ತದೆ ಎಂದು ಹೇಳಿದರು.

ಪಕ್ಷಗಳು ರಾಷ್ಟ್ರವನ್ನು ಉತ್ತಮಗೊಳಿಸುವ ಸಾಧನವಾಗಿದೆ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ ನೀವು ಯಾವುದೇ ಪಕ್ಷಕ್ಕೆ ಸೇರಿದ್ದರೂ ಆ ಪಕ್ಷದ ಉದ್ದೇಶವು ತನ್ನದೇ ಆದ ರೀತಿಯಲ್ಲಿ ಉತ್ತಮ ಭಾರತವನ್ನು ರಚಿಸುವುದು. ಅದನ್ನು ಮಾಡುವ ಅತ್ಯುತ್ತಮ ಮಾರ್ಗ, ಉತ್ತಮ ಭಾರತವನ್ನು ಮಾಡುವ ಅತ್ಯುತ್ತಮ ಮಾರ್ಗದ ಬಗ್ಗೆ ಪಕ್ಷಗಳು ಭಿನ್ನಾಭಿಪ್ರಾಯ ಹೊಂದುವ ಹಕ್ಕನ್ನು ಹೊಂದಿವೆ ಎಂದು ತರೂರ್ ಹೇಳಿದರು.

ಉತ್ತಮ ಮತ್ತು ಸುರಕ್ಷಿತ ಭಾರತದ ಕಡೆಗೆ ತಮ್ಮ ಬದ್ಧತೆ ಇದೆ, ಭಾರತದ ಗಡಿಗಳು ಸುರಕ್ಷಿತವಾಗಿರುತ್ತವೆ. ನಮ್ಮಲ್ಲಿ ಕೆಲವರು ಹೆಚ್ಚು ಬಂಡವಾಳಶಾಹಿ ಎಂದು ಹೇಳಬಹುದು. ಕೆಲವರು ಹೆಚ್ಚು ಸಮಾಜವಾದ ಎಂದು ಹೇಳಬಹುದು. ಕೆಲವರು ಕೆಲವು ರೀತಿಯ ನಿಯಂತ್ರಕ ನಿಯಂತ್ರಣಗಳ ಪರವಾಗಿರಬಹುದು. ಕೆಲವರು ಹೆಚ್ಚು ನಿಯಂತ್ರಣವನ್ನು ವಿರೋಧಿಸಬಹುದು. ಆದ್ದರಿಂದ ನಿಮಗೆ ವಿಭಿನ್ನ ದೃಷ್ಟಿಕೋನಗಳಿವೆ. ಅದು ಸರಿ. ಆದರೆ ಅಂತಿಮವಾಗಿ, ನಾವೆಲ್ಲರೂ ಉತ್ತಮ ಭಾರತ, ಸುರಕ್ಷಿತ ಭಾರತ, ಗಡಿಗಳನ್ನು ರಕ್ಷಿಸಲಾಗಿರುವ, ಸುರಕ್ಷಿತ ಪ್ರದೇಶವಿರುವ, ಜನರ ಯೋಗಕ್ಷೇಮವನ್ನು ಪೋಷಿಸುವ ಭಾರತಕ್ಕೆ ಬದ್ಧರಾಗಿರಬೇಕು, ಅದು ನನ್ನ ಬದ್ಧತೆ ಎಂದರು.

Shashi Tharoor
ಶಶಿ ತರೂರ್ ಗೆ ಪಕ್ಷದಲ್ಲಿ ಉಸಿರುಗಟ್ಟಿದಂತೆ ಆಗುತ್ತಿದ್ದರೆ ಅವರ ದಾರಿ ನೋಡಿಕೊಳ್ಳಲಿ: ಕಾಂಗ್ರೆಸ್ ನಾಯಕ ಮುರಳೀಧರನ್

ದೇಶವು ಅಪಾಯಕ್ಕೆ ಒಳಗಾದಾಗ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಇರಬೇಕೆಂದು ಒತ್ತಾಯಿಸಿದರು. ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪ್ರಸಿದ್ಧ ಉಲ್ಲೇಖವಾದ "ಭಾರತ ಸತ್ತರೆ ಯಾರು ಬದುಕುತ್ತಾರೆ? ಅದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ದೇಶ ಮೊದಲು ಬದುಕಿದರೆ ನಂತರ ನಾವೆಲ್ಲರೂ ಬದುಕಬಹುದು ಎಂದರು.

ನಾನು ಎಲ್ಲಾ ಪಕ್ಷಗಳಿಗೂ ಹೇಳುತ್ತಿದ್ದೇನೆ. ರಾಷ್ಟ್ರ ಅಪಾಯದಲ್ಲಿದ್ದಾಗ ನಿಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಡಿ. ಏಕೆಂದರೆ ಭಾರತವಿಲ್ಲದಿದ್ದರೆ, ನೆಹರೂ ಅವರ ಒಂದು ಪ್ರಸಿದ್ಧ ಸಾಲು ಇದೆ, ಅದನ್ನು ನಾನು ಉಲ್ಲೇಖಿಸಲು ತುಂಬಾ ಇಷ್ಟಪಡುತ್ತೇನೆ. ಭಾರತ ಸತ್ತರೆ ಯಾರು ಬದುಕುತ್ತಾರೆ ಅದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ಭಾರತ ಮೊದಲು ಬರಬೇಕು, ಮತ್ತು ನಂತರವೇ ನಾವೆಲ್ಲರೂ ಬದುಕಬಹುದು" ಎಂದು ಶಶಿ ತರೂರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com