ಪಹಲ್ಗಾಮ್ ದಾಳಿ: UNSC ವರದಿಯಲ್ಲಿ LeT-TRF ಸಂಪರ್ಕ ಬಹಿರಂಗ; ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ವಿರುದ್ಧ ಭಾರತ ಆರೋಪಕ್ಕೆ ಪುಷ್ಠಿ!

ಲಷ್ಕರ್-ಎ-ತೈಬಾ (LeT) ಬೆಂಬಲವಿಲ್ಲದೆ ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದಿರಲು ಸಾಧ್ಯವಿಲ್ಲ ಮತ್ತು LeT ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ನಡುವೆ ಸಂಬಂಧವಿತ್ತು ಎಂದು ಹೆಸರು ಬಹಿರಂಗಪಡಿಸದ ಸದಸ್ಯ ರಾಷ್ಟ್ರವೊಂದು ಹೇಳಿದೆ.
Security personnel inspect the Baisaran Valley site in Pahalgam following the terrorist attack that took place on April 22.
ಪಹಲ್ಗಾಮ್ ದಾಳಿಯ ನಂತರದ ದೃಶ್ಯ
Updated on

ನವದೆಹಲಿ: ಏಪ್ರಿಲ್ 22ರ ಪಹಲ್ಗಾಮ್ ದಾಳಿಯಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಗುಂಪಿನ ಬೆಂಬಲಿತ ರೆಸಿಸ್ಟೆನ್ಸ್ ಫ್ರಂಟ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ, ಇದು ಪಾಕಿಸ್ತಾನ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಬಲಪಡಿಸುವ ನಿರೀಕ್ಷೆಯಿದೆ.

ಲಷ್ಕರ್-ಎ-ತೈಬಾ (LeT) ಬೆಂಬಲವಿಲ್ಲದೆ ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದಿರಲು ಸಾಧ್ಯವಿಲ್ಲ ಮತ್ತು LeT ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ನಡುವೆ ಸಂಬಂಧವಿತ್ತು ಎಂದು ಹೆಸರು ಬಹಿರಂಗಪಡಿಸದ ಸದಸ್ಯ ರಾಷ್ಟ್ರವೊಂದು ಹೇಳಿರುವುದಾಗಿ ಯುಎನ್ ಎಸ್ ಸಿಯ ಮೇಲ್ವಿಚಾರಣಾ ತಂಡದ (MT) ವರದಿ ತಿಳಿಸಿದೆ.

ಯುಎನ್ ಎಸ್ ಸಿಯ 1267 ನಿರ್ಬಂಧಗಳ ಸಮಿತಿಯ ಎಲ್ಲಾ ನಿರ್ಧಾರಗಳನ್ನು ವಿಶ್ವಸಂಸ್ಥೆಯ ಉನ್ನತ ಸಂಸ್ಥೆಯ ಸದಸ್ಯರು ಒಮ್ಮತದಿಂದ ಅಂಗೀಕರಿಸಲಾಗಿರುವುದರಿಂದ ಈ ಬೆಳವಣಿಗೆ ಮಹತ್ವದ್ದಾಗಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವವರು ಹೇಳಿದ್ದಾರೆ.

ಎಂಟಿ ವರದಿಯಲ್ಲಿ ಟಿಆರ್ ಎಫ್ ಉಲ್ಲೇಖವು ಪಾಕಿಸ್ತಾನದ ಸುಳ್ಳು ಮತ್ತು ವಂಚನೆಯನ್ನು ಜಗತ್ತು ಹೇಗೆ ನೋಡುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಹೇಳಿದ್ದಾರೆ. ಪಹಲ್ಗಾಮ್ ದಾಳಿಯನ್ನು ಐದು ಭಯೋತ್ಪಾದಕರು ನಡೆಸಿದ್ದಾರೆ ಎಂದು ಯುಎನ್ ಎಸ್ ಸಿ ವರದಿ ತಿಳಿಸಿದೆ.

Security personnel inspect the Baisaran Valley site in Pahalgam following the terrorist attack that took place on April 22.
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ; ಏ.22-ಜೂ.16 ನಡುವೆ ಟ್ರಂಪ್-ಮೋದಿ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ: S.Jaishankar

ಏಪ್ರಿಲ್ 26 ರಂದು ಟಿಆರ್‌ಎಫ್ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿತು, ಬೇರೆ ಯಾವುದೇ ಗುಂಪು ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಪ್ರಾದೇಶಿಕ ಸಂಬಂಧಗಳು ದುರ್ಬಲವಾಗಿ ಉಳಿದಿವೆ. ಭಯೋತ್ಪಾದಕ ಗುಂಪುಗಳು ಈ ಪ್ರಾದೇಶಿಕ ಉದ್ವಿಗ್ನತೆಯನ್ನು ಬಳಸಿಕೊಳ್ಳುವ ಅಪಾಯವಿದೆ. ಎಲ್‌ಇಟಿಯ ಬೆಂಬಲವಿಲ್ಲದೆ ದಾಳಿ ನಡೆಯಲು ಸಾಧ್ಯವಿಲ್ಲ. ಎಲ್‌ಇಟಿ ಮತ್ತು ಟಿಆರ್‌ಎಫ್ ನಡುವೆ ಸಂಬಂಧವಿತ್ತು ಎಂದು ಸದಸ್ಯ ರಾಷ್ಟ್ರ ಹೇಳಿದೆ.

ಎಲ್‌ಇಟಿಗೆ ಸಮಾನಾರ್ಥಕವಾದ ಟಿಆರ್‌ಎಫ್ ಈ ದಾಳಿಯನ್ನು ನಡೆಸಿದೆ ಎಂದು ಮತ್ತೊಂದು ಸದಸ್ಯ ರಾಷ್ಟ್ರ ಹೇಳಿದೆ. ಒಂದು ಸದಸ್ಯ ರಾಷ್ಟ್ರ ಈ ಅಭಿಪ್ರಾಯಗಳನ್ನು ತಿರಸ್ಕರಿಸಿತು ಮತ್ತು ಎಲ್‌ಇಟಿ ನಿಷ್ಕ್ರಿಯವಾಗಿದೆ ಎಂದು ಹೇಳಿದೆ ಎಂದು ಅದು ಹೇಳಿದೆ.

ಯುಎನ್‌ಎಸ್‌ಸಿಯ 1267 ನಿರ್ಬಂಧಗಳ ಸಮಿತಿಯು ಭಯೋತ್ಪಾದಕರು, ಭಯೋತ್ಪಾದಕ ಗುಂಪುಗಳು ಮತ್ತು ಘಟಕಗಳ ವಿರುದ್ಧ ನಿರ್ಬಂಧಗಳನ್ನು ಜಾರಿಗೆ ತರುವ ಕಾರ್ಯವನ್ನು ಹೊಂದಿದೆ. ಏಪ್ರಿಲ್ 22 ರ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com