ರೀಲ್ಸ್ ಗಾಗಿ ಹುಚ್ಚಾಟ: ವ್ಯಕ್ತಿಯ ನಾಲಿಗೆಗೆ ಕಚ್ಚಿದ ಹಾವು!

ಅಮ್ರೋಹಾ ಜಿಲ್ಲೆಯ ಹೈಬತ್‌ಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಅಲ್ಲಿ ಒಬ್ಬ ರೈತ ಜಿತೇಂದ್ರ ಕುಮಾರ್ ಹಾವನ್ನು ರಕ್ಷಿಸಿ ಅದರೊಂದಿಗೆ ವೀಡಿಯೊವನ್ನು ಚಿತ್ರೀಕರಿಸಲು ಯತ್ನಿಸಿದ್ದಾರೆ.
Representative image
ಸಾಂದರ್ಭಿಕ ಚಿತ್ರ
Updated on

ಅಮ್ರೋಹಾ: 50 ವರ್ಷದ ವ್ಯಕ್ತಿಯೊಬ್ಬ ಹಾವನ್ನು ಚುಂಬಿಸಲು ಪ್ರಯತ್ನಿಸುತ್ತಿದ್ದಾಗ ಹಾವು ಕಚ್ಚಿ, ಆತ ಪ್ರಾಣಕ್ಕಾಗಿ ಹೋರಾಡುತ್ತಿದ್ದಾನೆ ಎಂದು ವರದಿಯಾಗಿದೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಈ ವಿಲಕ್ಷಣ ಘಟನೆ ವೀಕ್ಷಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಅಮ್ರೋಹಾ ಜಿಲ್ಲೆಯ ಹೈಬತ್‌ಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಅಲ್ಲಿ ಒಬ್ಬ ರೈತ ಜಿತೇಂದ್ರ ಕುಮಾರ್ ಹಾವನ್ನು ರಕ್ಷಿಸಿ ಅದರೊಂದಿಗೆ ವೀಡಿಯೊವನ್ನು ಚಿತ್ರೀಕರಿಸಲು ಯತ್ನಿಸಿದ್ದಾರೆ.

ಆನ್‌ಲೈನ್ ವೀಕ್ಷಕರನ್ನು ಮೆಚ್ಚಿಸುವ ಆಶಯದೊಂದಿಗೆ, ಕುಮಾರ್ ಹಾವಿನೊಂದಿಗೆ ಪೋಸ್ ನೀಡಿದಾಗ, ಹಲವಾರು ಪ್ರೇಕ್ಷಕರು ಸಾಹಸವನ್ನು ಚಿತ್ರೀಕರಿಸಿದರು. ಸ್ಥಳೀಯರ ಪ್ರಕಾರ, ಕುಮಾರ್ ಈ ಘಟನೆ ನಡೆಯುವಾಗ ಮಾದಕ ವಸ್ತುಗಳನ್ನು ಸೇವಿಸಿದ್ದರು ಮತ್ತು ಸಾಹಸ ಪ್ರದರ್ಶಿಸುವ ಸಮಯದಲ್ಲಿ ಧೂಮಪಾನ ಮಾಡುತ್ತಿದ್ದರು.

Representative image
ಹಾವು ಕಡಿತದಿಂದ ಸಾವುಗಳು ಭಾರತದಲ್ಲೇ ಹೆಚ್ಚು: ವರ್ಷಕ್ಕೆ ಸುಮಾರು 58 ಸಾವಿರ ಪ್ರಕರಣ!

ವೀಡಿಯೊದಲ್ಲಿ ಕುಮಾರ್ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ನಿಧಾನವಾಗಿ ಅದರ ತಲೆಯನ್ನು ಬಾಯಿಯ ಕಡೆಗೆ ತರುವುದು ಕಂಡುಬಂದಿದೆ. ಆತ ತನ್ನ ನಾಲಿಗೆಯನ್ನು ಸರೀಸೃಪಕ್ಕೆ ಚಾಚಿದಾಗ, ಹಾವು ಆತನ ನಾಲಿಗೆಯನ್ನು ಕಚ್ಚಿದೆ. ಇದು ನೋಡುಗರನ್ನು ಗಾಬರಿಗೊಳಿಸಿದೆ.

ಕಚ್ಚಿದ ನಂತರ ಕುಮಾರ್ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಅವರನ್ನು ಮೊರಾದಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ, ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com