
ನವದೆಹಲಿ: ಭಾರತದಲ್ಲಿ ಹಾವು ಕಡಿತದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಇತ್ತೀಚಿನ ವರದಿಯೊಂದು ಹೇಳುತ್ತದೆ. ಇತ್ತೀಚಿನ ಜಾಗತಿಕ ವರದಿಯ ಪ್ರಕಾರ, ಹೆಚ್ಚಿನ ಹಾವು ಸಾಂದ್ರತೆ, ಗ್ರಾಮೀಣ ಜನಸಂಖ್ಯೆ ಮತ್ತು ಸಾಂಪ್ರದಾಯಿಕ ಔಷಧಿ ನೀಡುವ ವೈದ್ಯರ ಮೇಲಿನ ಹೆಚ್ಚಿನ ಅವಲಂಬನೆಯಿಂದಾಗಿ ಭಾರತದಲ್ಲಿ ಹಾವು ಕಡಿತದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ.
ಭಾರತದಲ್ಲಿ ವರ್ಷಕ್ಕೆ ಅಂದಾಜು 58,000 ಸಾವುಗಳನ್ನು ವರದಿಯಾಗುತ್ತಿವೆ, ಬಡ ಮತ್ತು ಸ್ಥಳೀಯ ಸಮುದಾಯಗಳಲ್ಲಿ ಇದರ ಪರಿಣಾಮ ತೀವ್ರವಾಗಿದೆ, ಅಲ್ಲಿ ಗುಣಮಟ್ಟದ ಆರೋಗ್ಯ ಸೇವೆ ದುರ್ಲಭವಾಗಿದೆ. ಸಾಂಪ್ರದಾಯಿಕ ಔಷಧದ ಮೇಲಿನ ನಂಬಿಕೆಯಿಂದಾಗಿ ಚಿಕಿತ್ಸೆಯಲ್ಲಿ ವಿಳಂಬ; ಕೆಲವು ದೇಶೀಯ ವಿಷ ವಿರೋಧಿ ಉತ್ಪಾದಕರಲ್ಲಿ ಗುಣಮಟ್ಟದ ನಿಯಂತ್ರಣದ ಕೊರತೆ; ಹೆಚ್ಚಿನ ಔಷದೋಪಚಾರ ವೆಚ್ಚಗಳು, ವಿಶೇಷವಾಗಿ ಅನೌಪಚಾರಿಕ ಆರೈಕೆಗಳಿಂದಾಗಿ ಈ ರೀತಿ ಆಗುತ್ತಿದೆ ಎಂದು ತಿಳಿದುಬಂದಿದೆ.
ಟೈಮ್ ಟು ಬೈಟ್ ಬ್ಯಾಕ್: ಕ್ಯಾಟಲೈಸಿಂಗ್ ಎ ಗ್ಲೋಬಲ್ ರೆಸ್ಪಾನ್ಸ್ ಟು ಸ್ನೇಕ್ಬೈಟ್ ಎನ್ವೆನೊಮಿಂಗ್' ವರದಿಯು ಇತ್ತೀಚೆಗೆ ಜಿನೀವಾದಲ್ಲಿ ಮುಕ್ತಾಯಗೊಂಡ 78 ನೇ ವಿಶ್ವ ಆರೋಗ್ಯ ಸಭೆಯಲ್ಲಿ ಗ್ಲೋಬಲ್ ಸ್ನೇಕ್ಬೈಟ್ ಟಾಸ್ಕ್ಫೋರ್ಸ್ ಬಿಡುಗಡೆ ಮಾಡಿತು, ಇದು ಹಾವು ಕಡಿತದಿಂದ ಸಾವುಗಳು ಮತ್ತು ಅಂಗವೈಕಲ್ಯಗಳನ್ನು ಕಡಿಮೆ ಮಾಡಲು ಜಾಗೃತಿ ಮೂಡಿಸುವ ಕ್ರಮವನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವ ಜಾಗತಿಕ ಅಭಿಯಾನವಾಗಿದೆ.
ಹಾವು ಕಡಿತದಿಂದ ಉಂಟಾಗುವ ವಿಷ ಸೇವನೆಯ ವಿನಾಶಕಾರಿ ಮತ್ತು ತಡೆಗಟ್ಟಬಹುದಾದ ಕ್ರಮ ಕೈಗೊಳ್ಳುವ ನಿರ್ಣಾಯಕ ಅಗತ್ಯವನ್ನು ವರದಿ ಎತ್ತಿ ತೋರಿಸುತ್ತದೆ. ಭಾರತವು ಹಾವು ಕಡಿತದಿಂದ ಉಂಟಾಗುವ ವಿಷ ಸೇವನೆಯ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದೆ.
2030ರ ವೇಳೆಗೆ ಹಾವು ಕಡಿತದಿಂದ ಉಂಟಾಗುವ ಸಾವುಗಳು ಮತ್ತು ಅಂಗವೈಕಲ್ಯಗಳನ್ನು ಶೇಕಡಾ 50ಕ್ಕೆ ತಗ್ಗಿಸುವ ವಿಶ್ವ ಆರೋಗ್ಯ ಸಂಸ್ಥೆಯ ಗುರಿಯತ್ತ ಪ್ರಗತಿಯನ್ನು ಪತ್ತೆಹಚ್ಚುವ ಮತ್ತು ಜಾಗತಿಕ ಸಮುದಾಯವು ಕ್ರಮವನ್ನು ವೇಗಗೊಳಿಸಲು ಕರೆ ನೀಡುವ ವರದಿಯು, ಭಾರತದ ಪ್ರಗತಿಯ ಹೊರತಾಗಿಯೂ, ಸವಾಲುಗಳು ಸಾಕಷ್ಟಿವೆ ಎಂದಿದ್ದಾರೆ.
ಪ್ರಮುಖ ಸಾರ್ವಜನಿಕ ಆರೋಗ್ಯ ವೈದ್ಯ ಮತ್ತು ವರದಿಯ ಲೇಖಕರಲ್ಲಿ ಒಬ್ಬರಾದ ಡಾ. ಯೋಗೇಶ್ ಜೈನ್ ಅವರ ಪ್ರಕಾರ, ಭಾರತವು ಇನ್ನೂ ಹಾವು ಕಡಿತದ ಸಾವುಗಳನ್ನು ತಡೆಯುವಲ್ಲಿ ವಿಫಲವಾಗಿದೆ. ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ವೈದ್ಯರಿಗೆ ತರಬೇತಿ, ಪರಿಕರಗಳು ಮತ್ತು ಆತ್ಮವಿಶ್ವಾಸದ ಕೊರತೆಯಿದೆ ಎಂದು ಅವರು ಹೇಳಿದರು. ಬಡತನವು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆರೈಕೆ ಉಚಿತ ಅಥವಾ ಲಭ್ಯವಿಲ್ಲದಿದ್ದಾಗ, ಜನರು ನಂಬಿಕೆಯ ವೈದ್ಯರು ಅಥವಾ ಇತರ ನಿಷ್ಪರಿಣಾಮಕಾರಿ ಆಯ್ಕೆಗಳ ಕಡೆಗೆ ತಿರುಗುತ್ತಾರೆ ಎಂದು ಅವರು ಹೇಳಿದರು.
ಛತ್ತೀಸ್ಗಢದಲ್ಲಿ ಸಮುದಾಯ ಆರೋಗ್ಯ ಕಾರ್ಯಕ್ರಮ ಜನ್ ಸ್ವಾಸ್ಥ್ಯ ಸಹಯೋಗ್ (ಜನರ ಆರೋಗ್ಯ ಬೆಂಬಲ ಗುಂಪು) ನ್ನು ಸ್ಥಾಪಿಸಿ ನಡೆಸುತ್ತಿರುವ ಡಾ. ಜೈನ್, ರೋಗಿಗಳು ಚಿಕಿತ್ಸಾಲಯವನ್ನು ತಲುಪಿದಾಗಲೂ, ಲಭ್ಯವಿರುವ ಪಾಲಿವೇಲೆಂಟ್ ಆಂಟಿವೆನಮ್ 35 ವಿಷಕಾರಿ ಪ್ರಭೇದಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಒಳಗೊಳ್ಳುತ್ತದೆ, ಸುಮಾರು ಶೇಕಡಾ 80ರಷ್ಟು ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ಜಾಗತಿಕ ಹಾವು ಕಡಿತದ ಸಾವುಗಳಲ್ಲಿ ಭಾರತದಲ್ಲಿ ಶೇಕಡಾ 50ರಷ್ಟು ಉಂಟಾಗುತ್ತಿದೆ. ವಿಶ್ವದ ಹಾವು ಕಡಿತದ ರಾಜಧಾನಿ ಎಂದು ಪರಿಗಣಿಸಲಾಗಿದ್ದು, ಭಾರತವು ಕಳೆದ ವರ್ಷ ಹಾವು ಕಡಿತವನ್ನು ಅಧಿಸೂಚಿತ ರೋಗವೆಂದು ಘೋಷಿಸಿತು.
ಸಾರ್ವಜನಿಕರಲ್ಲಿ ಅರಿವು ಕೊರತೆ, ಹಾವು ಕಡಿದ ತಕ್ಷಣ ವಿಷ ತಗ್ಗಿಸಲು ಕ್ರಮಗಳು ಗೊತ್ತಿಲ್ಲದಿರುವುದು, ಕಳಪೆ ಸಾರಿಗೆ ಮೂಲಸೌಕರ್ಯಗಳು ಪ್ರಮುಖ ಸಮಸ್ಯೆಗಳಾಗಿವೆ.
Advertisement