ನ್ಯೂಸ್ ಚಾನೆಲ್ ಚರ್ಚಾ ಕಾರ್ಯಕ್ರಮದಲ್ಲಿ ಕೇಸರಿ ಬಟ್ಟೆ ಧರಿಸಿದವರಿಂದ ಹಲ್ಲೆ, IIT ಬಾಬಾ ಆರೋಪ!

ಕೇಸರಿ ಬಟ್ಟೆ ಧರಿಸಿದ ಕೆಲವರು ನ್ಯೂಸ್ ರೂಮ್ ಗೆ ಬಂದು ತಮ್ಮದೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
'IIT Baba
IITಬಾಬಾ
Updated on

ನೋಯ್ಡಾ: ಮಹಾಕುಂಭ ಮೇಳದಲ್ಲಿ ಪ್ರಸಿದ್ಧಿಯಾದ 'IIT ಬಾಬಾ'' ಅಲಿಯಾಸ್ ಅಭಯ್ ಸಿಂಗ್ ಮೇಲೆ ಶುಕ್ರವಾರ ನ್ಯೂಸ್ ಚಾನೆಲ್ ವೊಂದರಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಕೇಸರಿ ಬಟ್ಟೆ ಧರಿಸಿದ ಕೆಲವರು ನ್ಯೂಸ್ ರೂಮ್ ಗೆ ಬಂದು ತಮ್ಮದೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಹಲ್ಲೆ ಘಟನೆ ಖಂಡಿಸಿ ಅಭಯ್ ಸಿಂಗ್ ಅವರು ನೋಯ್ಡಾದ ಸೆಕ್ಟರ್ 126ರಲ್ಲಿನ ಪೊಲೀಸ್ ಔಟ್ ಪೋಸ್ಟ್ ನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ಮನವೊಲಿಕೆ ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ ಎಂದು SHO ಭೂಪೇಂದ್ರ ಸಿಂಗ್ ತಿಳಿಸಿದ್ದಾರೆ.

'IIT Baba
IIT Baba: ಮಹಾಕುಂಭ ಮೇಳದಲ್ಲಿ ಐಐಟಿ ಪದವೀಧರ ಬಾಬಾ; Aerospace Engineer to 'ಸನ್ಯಾಸ'... ಕಾರಣವಾದ ಘಟನೆ?

ಉತ್ತರ ಪ್ರದೇಶದಲ್ಲಿ ಪ್ರಯಾಗ್ ರಾಜ್ ನಲ್ಲಿ ಇತ್ತೀಚಿಗೆ ನಡೆದ ಕುಂಭ ಮೇಳದಲ್ಲಿ ಐಐಟಿ ಬಾಂಬೆಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಓದಿದ ಸಾಧುವೊಬ್ಬರು ತನ್ನನ್ನು IIT ಬಾಬಾ ಎಂದು ಕರೆದುಕೊಂಡು ನೆಟ್ಟಿಗರ ಗಮನ ಸೆಳೆದಿದ್ದರು.

ICC ಚಾಂಫಿಯನ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲಲಿದೆ ಎಂದು ಹೇಳುವ ಮೂಲಕ ಟ್ರೋಲ್ ಗೆ ಆಹಾರವಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com