
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ನಡೆದ ಶಂಕಿತ ಸ್ನೈಪರ್ ಗುಂಡಿನ ದಾಳಿಯಲ್ಲಿ ಗಡಿ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಬುಧವಾರ ಗಾಯಗೊಂಡಿದ್ದಾರೆ.
ರಾಜೌರಿಯ ನೌಶೇರಾ ಸೆಕ್ಟರ್ನ ಕಲ್ಸಿಯಾನ್ ಪ್ರದೇಶದಲ್ಲಿ ಮುಂಚೂಣಿ ಪೋಸ್ಟ್ ಅನ್ನು ಕಾಯುತ್ತಿದ್ದ ಸೈನಿಕನಿಗೆ ಗುಂಡು ತಗುಲಿದೆ ಎಂದು ಮೂಲಗಳು ತಿಳಿಸಿವೆ.
ಗಾಯಗೊಂಡ ಸೈನಿಕನನ್ನು ವಿಶೇಷ ಚಿಕಿತ್ಸೆಗಾಗಿ ಉಧಂಪುರದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆ ನಂತರ, ಸೇನಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿ, ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು. ಸೇನಾ ಸಿಬ್ಬಂದಿ ಡ್ರೋನ್ಗಳನ್ನು ಸಹ ಸೇವೆಗೆ ನಿಯೋಜಿಸಿದ್ದಾರೆ.
ಕಳೆದ ತಿಂಗಳು ಪಾಕಿಸ್ತಾನದ ಕರೆಯ ಮೇರೆಗೆ, ಉಭಯ ದೇಶಗಳ ನಡುವಿನ ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಚಕನ್ ದಾ ಬಾಗ್ನಲ್ಲಿರುವ ಎಲ್ಒಸಿಯಲ್ಲಿ ಭಾರತ ಮತ್ತು ಪಾಕಿಸ್ತಾನಿ ಸೇನಾ ಅಧಿಕಾರಿಗಳ ನಡುವೆ ಧ್ವಜ ಸಭೆ ನಡೆಸಲಾಗಿತ್ತು. ಪೂಂಚ್ ಮತ್ತು ರಾಜೌರಿ ಜಿಲ್ಲೆಗಳ ಅವಳಿ ಗಡಿ ಜಿಲ್ಲೆಗಳಲ್ಲಿ ಎಲ್ಒಸಿ ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿದ ನಂತರ ಸಭೆ ನಡೆಸಲಾಯಿತು.
ಪೂಂಚ್ನ ಎಲ್ಒಸಿಯ ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕನಿಷ್ಠ ಇಬ್ಬರು ಭಾರತೀಯ ಸೈನಿಕರು ಗಾಯಗೊಂಡ ಕೆಲವು ಸ್ನೈಪಿಂಗ್ ಘಟನೆಗಳು ನಡೆದಿವೆ. ಫೆಬ್ರುವರಿ 11 ರಂದು, ಜಮ್ಮುವಿನ ಅಖ್ನೂರ್ ಸೆಕ್ಟರ್ನ ಎಲ್ಒಸಿಯ ಉದ್ದಕ್ಕೂ ಐಇಡಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಸೇನಾ ಕ್ಯಾಪ್ಟನ್ ಮತ್ತು ಯೋಧ ಹುತಾತ್ಮರಾಗಿದ್ದರು ಮತ್ತು ಮತ್ತೊಬ್ಬ ಸೈನಿಕ ಗಾಯಗೊಂಡಿದ್ದಾರು.
Advertisement