ಮಧ್ಯ ಪ್ರದೇಶ: ಕೊಲೆ ವಿಚಾರವಾಗಿ ಯುವಕನ ಅಪಹರಣ; ರಕ್ಷಿಸಲು ಹೋಗಿ ಹೆಣವಾದ ASI!

ಸನ್ನಿ ದ್ವಿವೇದಿ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ, ಶಹಪುರ ಪೊಲೀಸ್ ಠಾಣೆಯ ಉಸ್ತುವಾರಿ ಸಂದೀಪ್ ಭಾರ್ತಿಯ ನೇತೃತ್ವದ ಪೊಲೀಸ್ ತಂಡ ಅವರನ್ನು ರಕ್ಷಿಸಲು ಗ್ರಾಮಕ್ಕೆ ತಲುಪಿತು.
ಮಧ್ಯ ಪ್ರದೇಶ: ಕೊಲೆ ವಿಚಾರವಾಗಿ ಯುವಕನ ಅಪಹರಣ; ರಕ್ಷಿಸಲು ಹೋಗಿ ಹೆಣವಾದ ASI!
Updated on

ಮಧ್ಯ ಪ್ರದೇಶದ ಮೌಗಂಜ್ ಜಿಲ್ಲೆಯ ಶಹಪುರ್ ಪ್ರದೇಶದಲ್ಲಿ ಬುಡಕಟ್ಟು ಯುವಕನ ಸಾವಿನ ಕುರಿತಾಗಿ ಎರಡು ಗುಂಪುಗಳ ನಡುವೆ ವಿವಾದ ಭುಗಿಲೆದ್ದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಯದಲ್ಲಿ ಪೊಲೀಸ್ ತಂಡದ ಮೇಲೆ ದಾಳಿ ನಡೆದಿದ್ದು ಎಎಸ್‌ಐ ರಾಮಚರಣ್ ಗೌತಮ್ ಎಂಬುವರು ಸಾವನ್ನಪ್ಪಿದ್ದಾರೆ. ಅಲ್ಲದೆ ಠಾಣೆಯ ಉಸ್ತುವಾರಿ ಸೇರಿದಂತೆ ಅನೇಕ ಪೊಲೀಸರು ಗಂಭೀರವಾಗಿ ಗಾಯಗೊಂಡರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಗುಂಪು ಪೊಲೀಸರನ್ನೇ ಒತ್ತೆಯಾಳಾಗಿ ಇಟ್ಟುಕೊಂಡಿತ್ತು. ಹೀಗಾಗಿ ನಂತರ ಸ್ಥಳದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಬೇಕಾಯಿತು.

ಮಾಹಿತಿಯ ಪ್ರಕಾರ, ಗದರ ಗ್ರಾಮವು ಜಿಲ್ಲಾ ಕೇಂದ್ರದಿಂದ 25 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ಕೋಲ್ ಬುಡಕಟ್ಟಿನ ಕೆಲವರು ಸನ್ನಿ ದ್ವಿವೇದಿ ಎಂಬ ಯುವಕನನ್ನು ಅಪಹರಿಸಿದರು. ಎರಡು ತಿಂಗಳ ಹಿಂದೆ ಅಶೋಕ್ ಕುಮಾರ್ ಎಂಬ ಬುಡಕಟ್ಟು ಯುವಕನನ್ನು ಕೊಂದಿದ್ದಾನೆ ಎಂಬ ಆರೋಪ ಆತನ ಮೇಲಿತ್ತು. ಆದರೆ, ಪೊಲೀಸ್ ದಾಖಲೆಗಳ ಪ್ರಕಾರ, ಅಶೋಕ್ ಕುಮಾರ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದನು.

ಸನ್ನಿ ದ್ವಿವೇದಿ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ, ಶಹಪುರ ಪೊಲೀಸ್ ಠಾಣೆಯ ಉಸ್ತುವಾರಿ ಸಂದೀಪ್ ಭಾರ್ತಿಯ ನೇತೃತ್ವದ ಪೊಲೀಸ್ ತಂಡ ಅವರನ್ನು ರಕ್ಷಿಸಲು ಗ್ರಾಮಕ್ಕೆ ತಲುಪಿತು. ಆದರೆ ಪೊಲೀಸರು ಅಲ್ಲಿಗೆ ತಲುಪುವ ಹೊತ್ತಿಗೆ, ಸನ್ನಿ ದ್ವಿವೇದಿಯನ್ನು ಕೋಣೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡು ತೀವ್ರವಾಗಿ ಥಳಿಸಿದ್ದರಿಂದ ಆತ ಅಲ್ಲೇ ಕೊನೆಯುಸಿರೆಳೆದಿದ್ದನು.

ಘಟನೆಯ ಬಗ್ಗೆ ಮಾಹಿತಿ ಪಡೆದ ಶಹಪುರ ಪೊಲೀಸ್ ಠಾಣೆಯ ಉಸ್ತುವಾರಿ ಸಂದೀಪ್ ಭಾರತೀಯ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ತಲುಪಿದರು. ಪೊಲೀಸರು ಕೋಣೆಯ ಬಾಗಿಲು ತೆರೆದಾಗ, ಸನ್ನಿ ದ್ವಿವೇದಿ ಶವವಾಗಿ ಪತ್ತೆಯಾಗಿದ್ದನು. ಈ ಸಮಯದಲ್ಲಿ, ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು, ಆದರೆ ಪೊಲೀಸ್ ತಂಡ ಸ್ಥಳದಿಂದ ಹೊರಡಲು ಪ್ರಾರಂಭಿಸುತ್ತಿದ್ದಂತೆ, ಗ್ರಾಮಸ್ಥರು ಪೊಲೀಸರ ಮೇಲೆ ಕೋಲು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದರು.

ಮಧ್ಯ ಪ್ರದೇಶ: ಕೊಲೆ ವಿಚಾರವಾಗಿ ಯುವಕನ ಅಪಹರಣ; ರಕ್ಷಿಸಲು ಹೋಗಿ ಹೆಣವಾದ ASI!
'ಡ್ಯಾನ್ಸ್ ಮಾಡು, ಇಲ್ಲದಿದ್ದರೆ ಸಸ್ಪೆಂಡ್ ಆಗ್ತೀಯಾ': ಪೊಲೀಸ್ ಅಧಿಕಾರಿಗೆ ತೇಜ್ ಪ್ರತಾಪ್ ವಾರ್ನಿಂಗ್; ವಿಡಿಯೋ

ಈ ದಾಳಿಯಲ್ಲಿ, ಎಎಸ್ಐ ರಾಮಚರಣ್ ಗೌತಮ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಶಹಪುರ ಪೊಲೀಸ್ ಠಾಣೆಯ ಉಸ್ತುವಾರಿ ಸಂದೀಪ್ ಭಾರ್ತಿಯ, ತಹಶೀಲ್ದಾರ್ ಕುನ್ವಾರೆ ಲಾಲ್ ಪಣಿಕಾ, ಎಎಸ್ಐ ಬೃಹಸ್ಪತಿ ಪಟೇಲ್, ಎಸ್ಡಿಒಪಿ ರೀಡರ್ ಅಂಕಿತ್ ಶುಕ್ಲಾ, 25 ನೇ ಬೆಟಾಲಿಯನ್‌ನ ಜವಾಹರ್ ಸಿಂಗ್ ಯಾದವ್ ಮತ್ತು ಇತರ ಅನೇಕ ಪೊಲೀಸರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ನಂತರ, ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಈ ಹಿಂಸಾಚಾರದಲ್ಲಿ ಇದುವರೆಗೆ ಐದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರೇವಾ ಶ್ರೇಣಿಯ ಉಪ ಪೊಲೀಸ್ ಮಹಾನಿರ್ದೇಶಕ (ಡಿಐಜಿ) ಸಾಕೇತ್ ಪಾಂಡೆ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು, ಪೊಲೀಸರು ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಆಡಳಿತವು ಆ ಪ್ರದೇಶದಲ್ಲಿ ಬಿಎನ್‌ಎಸ್ ಸೆಕ್ಷನ್ 163 ಅನ್ನು ವಿಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com