ಮುಂಬರುವ ವರ್ಷಗಳಲ್ಲಿ ಶಾಖದ ಅಲೆ ಏರಿಕೆ, ಸಾವು-ನೋವು ಹೆಚ್ಚಳ: ಪರಿಸ್ಥಿತಿ ಎದುರಿಸಲು ಭಾರತದಲ್ಲಿ ಸನ್ನದ್ಧತೆ ಕೊರತೆ!

ಮುಂಬರುವ ದಶಕಗಳಲ್ಲಿ ಭಾರತದಲ್ಲಿ ಜನರ ಮರಣ ಪ್ರಮಾಣ ಮತ್ತು ಆರ್ಥಿಕ ಹಾನಿಯನ್ನು ತಡೆಗಟ್ಟಲು ಅನೇಕ ದೀರ್ಘಕಾಲೀನ ಕ್ರಮಗಳನ್ನು ಈಗಲೇ ತುರ್ತಾಗಿ ಜಾರಿಗೆ ತರಬೇಕು ಎಂದು ಲಂಡನ್‌ನ ಕಿಂಗ್ಸ್ ಕಾಲೇಜಿನ ಸಂಶೋಧಕ ಮತ್ತು ಅಧ್ಯಯನದ ಸಹ-ಲೇಖಕ ಆದಿತ್ಯ ವಲಿಯಥನ್ ಪಿಳ್ಳೈ ಹೇಳುತ್ತಾರೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮಾರ್ಚ್ ತಿಂಗಳ ಅರ್ಧಭಾಗ ಮುಗಿದಿದೆ. ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಇನ್ನಷ್ಟು ಬಿಸಿಲು ಇರಬಹುದು, ತೀವ್ರ ಶಾಖದ ಅಲೆಯನ್ನು ಭಾರತದಾದ್ಯಂತ ಜನರು ಎದುರಿಸಬೇಕಾಗಿ ಬರಬಹುದು ಎಂದು ವರದಿಯೊಂದು ಹೇಳುತ್ತದೆ. ತೀವ್ರ ಬಿಸಿಲು, ಶಾಖದ ಹೊಡೆತವನ್ನು ಎದುರಿಸುವ ಕ್ರಮಗಳ ಬಗ್ಗೆ ದೀರ್ಘಾವಧಿಯ ಕಾರ್ಯತಂತ್ರಗಳು ವಿರಳವಾಗಿದ್ದು, ದೇಶವು ಪ್ರಾಥಮಿಕವಾಗಿ ಶಾಖದ ಅಲೆಗಳಿಗೆ ತಕ್ಷಣದ ಪ್ರತಿಕ್ರಿಯೆಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಅದು ಹೇಳುತ್ತದೆ.

ಸಾವು-ನೋವು ಹೆಚ್ಚಳ

ಮುಂಬರುವ ವರ್ಷಗಳಲ್ಲಿ ತೀವ್ರವಾಗಿ ಆಗಾಗ್ಗೆ, ದೀರ್ಘಕಾಲದ ಶಾಖದ ಅಲೆಗಳಿಂದಾಗಿ ಹೆಚ್ಚಿನ ಸಾವು-ನೋವು ಉಂಟಾಗಬಹುದು ಎಂದು ಅದು ಎಚ್ಚರಿಸಿದೆ. ಈ ವರದಿಯನ್ನು ದೆಹಲಿಯಲ್ಲಿರುವ ಸಸ್ಟೈನಬಲ್ ಫ್ಯೂಚರ್ಸ್ ಕೊಲ್ಯಾಬರೇಟಿವ್ (SFC) ಸಂಸ್ಥೆ ತಯಾರಿಸಿದೆ. ಕಿಂಗ್ಸ್ ಕಾಲೇಜ್ ಲಂಡನ್, ಹಾರ್ವರ್ಡ್ ವಿಶ್ವವಿದ್ಯಾಲಯ, ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ವಾಂಸರು ಇದರ ಸಹ-ಲೇಖಕರಾಗಿದ್ದಾರೆ.

ಮುಂಬರುವ ದಶಕಗಳಲ್ಲಿ ಭಾರತದಲ್ಲಿ ಜನರ ಮರಣ ಪ್ರಮಾಣ ಮತ್ತು ಆರ್ಥಿಕ ಹಾನಿಯನ್ನು ತಡೆಗಟ್ಟಲು ಅನೇಕ ದೀರ್ಘಕಾಲೀನ ಕ್ರಮಗಳನ್ನು ಈಗಲೇ ತುರ್ತಾಗಿ ಜಾರಿಗೆ ತರಬೇಕು ಎಂದು ಲಂಡನ್‌ನ ಕಿಂಗ್ಸ್ ಕಾಲೇಜಿನ ಸಂಶೋಧಕ ಮತ್ತು ಅಧ್ಯಯನದ ಸಹ-ಲೇಖಕ ಆದಿತ್ಯ ವಲಿಯಥನ್ ಪಿಳ್ಳೈ ಹೇಳುತ್ತಾರೆ.

ಅಲ್ಪಾವಧಿಯ ಕ್ರಮಗಳ ಪ್ರಮುಖ ಸಮಸ್ಯೆಯೆಂದರೆ, ದೀರ್ಘಾವಧಿಯ ಕ್ರಮಗಳನ್ನು ಜಾರಿಗೆ ತರುವವರೆಗೆ ಅವುಗಳ ಪರಿಣಾಮವನ್ನು ಸುಲಭವಾಗಿ ಪರಿಶೀಲಿಸಲಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಅಲ್ಪಾವಧಿಯ ಕ್ರಮಗಳು ಜೀವ ಉಳಿಸುವ ಕ್ರಮಗಳಾಗಿವೆ, ಆದರೆ ದೀರ್ಘಾವಧಿಯ ಕ್ರಮಗಳು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ಸಾಮರ್ಥ್ಯ ಹೆಚ್ಚಿಸುವ ಆರೋಗ್ಯ ವ್ಯವಸ್ಥೆಗಳನ್ನು ಮತ್ತು ಭವಿಷ್ಯದ ಪರಿಣಾಮವನ್ನು ಕಡಿಮೆ ಮಾಡಲು ಪರಿಸರ ಕ್ರಮಗಳನ್ನು ನೋಡುತ್ತವೆ.

ಮೆಟ್ರೊ ನಗರಗಳಲ್ಲಿ ಸಮೀಕ್ಷೆ

ದೇಶದ 9 ಪ್ರಮುಖ ಮೆಟ್ರೋ ನಗರಗಳನ್ನು ಸಮೀಕ್ಷೆ ಮಾಡಲಾಗಿದೆ. ಹೆಚ್ಚುತ್ತಿರುವ ಶಾಖದ ಅಲೆಗಳನ್ನು ತಗ್ಗಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ತುರ್ತು ಕ್ರಮಗಳನ್ನು ಗುರುತಿಸಲಾಗಿದೆ. 2011 ರ ಜನಗಣತಿಯ ಪ್ರಕಾರ, ಬೆಂಗಳೂರು, ದೆಹಲಿ, ಫರಿದಾಬಾದ್, ಗ್ವಾಲಿಯರ್, ಕೋಟಾ, ಲುಧಿಯಾನ, ಮೀರತ್, ಮುಂಬೈ ಮತ್ತು ಸೂರತ್ - ಈ ನಗರಗಳು ಒಟ್ಟಾಗಿ ಭಾರತದ ನಗರ ಜನಸಂಖ್ಯೆಯ ಶೇಕಡಾ 11 ಕ್ಕಿಂತ ಹೆಚ್ಚಾಗಿದೆ. ಭವಿಷ್ಯದ ಶಾಖಕ್ಕೆ ಭಾರತದ ಕೆಲವು ನಗರಗಳು ಅಪಾಯಕಾರಿಯಾಗಿವೆ. ಸಮೀಕ್ಷೆ ಮಾಡಲಾದ ನಗರಗಳು ಶಾಖದ ಅಲೆಗಳಿಗೆ ತಕ್ಷಣದ ಪ್ರತಿಕ್ರಿಯೆಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತಿದ್ದು, ತುರ್ತು ದೀರ್ಘಕಾಲಿನ ಪರಿಹಾರಗಳ ಅಗತ್ಯವಿದೆ.

Representational image
ಬೇಸಿಗೆ ಬಂತು: ಹೀಟ್ ಸ್ಟ್ರೋಕ್ ಬಗ್ಗೆ ಇರಲಿ ಎಚ್ಚರ, ಈ ಸಲಹೆಗಳ ಪಾಲಿಸಿ...

ವರದಿ ಏನು ಹೇಳುತ್ತದೆ

ನಗರ ಪ್ರದೇಶಗಳಲ್ಲಿ ಉಷ್ಣ ದ್ವೀಪಗಳನ್ನು ಗುರುತಿಸುವುದು, ಆರೋಗ್ಯ ಸಿಬ್ಬಂದಿ ಮತ್ತು ಶಾಖ ಕ್ರಿಯಾ ಯೋಜನೆಯನ್ನು ಕಾರ್ಯಗತಗೊಳಿಸುವವರ ಸಾಮರ್ಥ್ಯವನ್ನು ನಿರ್ಮಿಸುವುದು ಮತ್ತು ಇಂಧನ-ಸಮರ್ಥ ತಂಪಾಗಿಸುವಿಕೆ ಸಾಧನಗಳನ್ನು ಒದಗಿಸಲು ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದು ಸೇರಿದಂತೆ ತುರ್ತು ಸಾಂಸ್ಥಿಕ ಬದಲಾವಣೆಗಳನ್ನು ವರದಿ ಶಿಫಾರಸು ಮಾಡುತ್ತದೆ.

ಶಾಖದ ಅಲೆಗಳನ್ನು ತಗ್ಗಿಸುವಿಕೆಯ ಕ್ರಿಯಾ ಯೋಜನೆಯನ್ನು ಕಾರ್ಯಗತಗೊಳಿಸಲು ಇರುವ ಅಡೆತಡೆಗಳನ್ನು ವರದಿಯು ಒತ್ತಿಹೇಳಿದೆ. ಸಮನ್ವಯ ಕೊರತೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ, ಇಲ್ಲಿ ಅಚ್ಚರಿಯ ವಿಷಯವೆಂದರೆ ಸಮೀಕ್ಷೆಗೆ ಒಳಗಾದ ಸುಮಾರು ಶೇಕಡಾ 14ರಷ್ಟು ಜನರು ತಾವು ವಿಪರೀತ ಉಷ್ಣತೆಯನ್ನು ಸಮಸ್ಯೆಯಾಗಿ ನೋಡುವುದಿಲ್ಲ ಎಂದು ಹೇಳುತ್ತಾರೆ.

ಅಪಾಯಕಾರಿ ಶಾಖ ಸೂಚ್ಯಂಕ ಮೌಲ್ಯಗಳಲ್ಲಿ ಇತ್ತೀಚಿನ ಏರಿಕೆ ಮತ್ತು ಒಂದು ಮಿಲಿಯನ್‌ಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಒಂಬತ್ತು ನಗರಗಳನ್ನು ಗುರುತಿಸಲು ಅಧ್ಯಯನವು ವಿಭಿನ್ನ ಹವಾಮಾನ ಮಾದರಿಗಳನ್ನು ಬಳಸಿದೆ. ಈ ನಗರಗಳಲ್ಲಿ ಉಷ್ಣ ಕ್ರಮಗಳನ್ನು ಕಾರ್ಯಗತಗೊಳಿಸುವ ಬಗ್ಗೆ ನಗರ, ಜಿಲ್ಲೆ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಂದರ್ಶನಗಳನ್ನು ನಡೆಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com