ಆರ್‌ಜೆಡಿ, ಕಾಂಗ್ರೆಸ್‌ಗೆ ಒಳನುಸುಳುಕೋರರ ಬಗ್ಗೆ ಮೃದು ಧೋರಣೆ, ವೋಟ್ ಬ್ಯಾಂಕ್‌ಗಾಗಿ ಶ್ರೀರಾಮನ ದ್ವೇಷ: ನರೇಂದ್ರ ಮೋದಿ

'ದೇಶದಿಂದ ಪ್ರತಿಯೊಬ್ಬ ನುಸುಳುಕೋರರನ್ನು ಓಡಿಸಲು ಎನ್‌ಡಿಎ ಬದ್ಧವಾಗಿದೆ. ಆದರೆ ಕಾಂಗ್ರೆಸ್-ಆರ್‌ಜೆಡಿ ಅವರಿಗೆ ರಕ್ಷಣೆ ನೀಡುತ್ತದೆ. ಅವರ ಪರವಾಗಿ ರಾಜಕೀಯ ಯಾತ್ರೆಗಳನ್ನು ನಡೆಸುತ್ತದೆ.
PM Narendra Modi
ಪ್ರಧಾನಿ ನರೇಂದ್ರ ಮೋದಿ
Updated on

ಅರಾರಿಯಾ: ಬಿಹಾರದ ವಿರೋಧ ಪಕ್ಷಗಳಾದ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟವು ನುಸುಳುಕೋರರ ಬಗ್ಗೆ ಮೃದು ಧೋರಣೆ ಹೊಂದಿದೆ. ಮತ ಬ್ಯಾಂಕ್ ರಾಜಕೀಯದಿಂದಾಗಿ ಭಗವಾನ್ ರಾಮ ಮತ್ತು 'ಛತ್ತಿ ಮೈಯಾ' ಅನ್ನು ಇಷ್ಟಪಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆರೋಪಿಸಿದ್ದಾರೆ.

ಅರಾರಿಯಾ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ನಿಷಾದ್ ರಾಜ್, ಮಾತಾ ಶಬರಿ ಮತ್ತು ಮಹರ್ಷಿ ವಾಲ್ಮೀಕಿ ಅವರಿಗೆ ಸಮರ್ಪಿತವಾದ ದೇವಾಲಯಗಳ 'ದರ್ಶನ' ಪಡೆಯಲು ವಿರೋಧ ಪಕ್ಷದ ನಾಯಕರು ಅಯೋಧ್ಯೆಗೆ ಭೇಟಿ ನೀಡಲು ಹಿಂಜರಿಯುತ್ತಿರುವುದು ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲಿನ ಅವರ 'ದ್ವೇಷ'ವನ್ನು ಸೂಚಿಸುತ್ತದೆ ಎಂದರು.

'15 ವರ್ಷಗಳ 'ಜಂಗಲ್ ರಾಜ್' ಅವಧಿಯಲ್ಲಿ ಬಿಹಾರ ಶೂನ್ಯ ಅಭಿವೃದ್ಧಿಯನ್ನು ಕಂಡಿತು. ಯಾವುದೇ ಹೆದ್ದಾರಿಗಳು ಮತ್ತು ಸೇತುವೆಗಳ ನಿರ್ಮಾಣವಾಗಲಿಲ್ಲ ಅಥವಾ ಯಾವುದೇ ಉನ್ನತ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಎನ್‌ಡಿಎ ರಾಜ್ಯವನ್ನು ಆ ಯುಗದಿಂದ ಹೊರತರಲು ಬಹಳ ಶ್ರಮಿಸಿದೆ' ಎಂದು ಅವರು ಹೇಳಿದರು.

'ಇಂದು ಬಿಹಾರವು ಹಲವು ಎಕ್ಸ್‌ಪ್ರೆಸ್‌ವೇಗಳು, ನದಿಗಳಿಗೆ ಸೇತುವೆಗಳು, ನಾಲ್ಕು ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಇತರ ಉನ್ನತ ಶಿಕ್ಷಣ ಕೇಂದ್ರಗಳನ್ನು ಹೊಂದಿದೆ. ಬೆಳವಣಿಗೆಯತ್ತ ಈ ಪ್ರಯಾಣವು ಅಡೆತಡೆಯಿಲ್ಲದೆ ಮುಂದುವರಿಯುವಂತೆ ನೋಡಿಕೊಳ್ಳಲು ಎನ್‌ಡಿಎಗೆ ಮಾತ್ರ ಸಾಧ್ಯ. ಈ ಬೆಳವಣಿಗೆಯ ಪ್ರಯಾಣದಲ್ಲಿ ಎನ್‌ಡಿಎ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಅದು ಒಳನುಸುಳುವಿಕೆ ಬೆದರಿಕೆಯಾಗಿದೆ' ಎಂದು ಹೇಳಿದರು.

PM Narendra Modi
ಮೊದಲು ಮತದಾನ, ನಂತರ ಉಪಹಾರ: ಮಹಿಳಾ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ 'ಮಂತ್ರ'!

'ದೇಶದಿಂದ ಪ್ರತಿಯೊಬ್ಬ ನುಸುಳುಕೋರರನ್ನು ಓಡಿಸಲು ಎನ್‌ಡಿಎ ಬದ್ಧವಾಗಿದೆ. ಆದರೆ ಕಾಂಗ್ರೆಸ್-ಆರ್‌ಜೆಡಿ ಅವರಿಗೆ ರಕ್ಷಣೆ ನೀಡುತ್ತದೆ. ಅವರ ಪರವಾಗಿ ರಾಜಕೀಯ ಯಾತ್ರೆಗಳನ್ನು ನಡೆಸುತ್ತದೆ ಮತ್ತು ದಾರಿತಪ್ಪಿಸುವ ನಿರೂಪಣೆಗಳೊಂದಿಗೆ ಬರುತ್ತದೆ' ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ 'ಮತದಾರರ ಅಧಿಕಾರ ಯಾತ್ರೆ' ಮತ್ತು 'ಮತ ಕಳ್ಳತನ'ದ ಆರೋಪಗಳನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಪ್ರಧಾನಿ ದೂರಿದರು.

'ಆರ್‌ಜೆಡಿ-ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ, ಅವರು ನುಸುಳುಕೋರರಿಗೆ ಹಿಂಬಾಗಿಲ ಪ್ರವೇಶ ನೀಡಲು ಪ್ರಯತ್ನಿಸುತ್ತಾರೆ. ಅವರು ಮತ ಬ್ಯಾಂಕ್ ರಾಜಕೀಯಕ್ಕಾಗಿ ಹಾಗೆ ಮಾಡುತ್ತಾರೆ. ಆದರೆ, ಇದು ಈ ದೇಶದ ಜನರ ಮೇಲೆ ಪರಿಣಾಮ ಬೀರುತ್ತದೆ. ನಾಗರಿಕರಿಗೆ ಸೇರಿದ ಎಲ್ಲದರಲ್ಲೂ ನುಸುಳುಕೋರರು ಪಾಲು ಪಡೆಯುತ್ತಾರೆ' ಎಂದು ಅವರು ಹೇಳಿದರು.

'ವೋಟ್ ಬ್ಯಾಂಕ್ ರಾಜಕೀಯವು ವಿರೋಧ ಪಕ್ಷದ ನಾಯಕರಲ್ಲಿ ಸಂಪ್ರದಾಯಗಳ ಬಗ್ಗೆ ತಿರಸ್ಕಾರವನ್ನು ತುಂಬಿದೆ. ಕಾಂಗ್ರೆಸ್ (ಗಾಂಧಿ) ನಾಮಧಾರಿಗಳು ಛತ್ತಿ ಮೈಯಾ ಭಕ್ತಿಯನ್ನು ನಾಟಕ ಎಂದು ಕರೆದರು. ಅವರು ಶ್ರೀ ರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಎಂದಿಗೂ ಭೇಟಿ ನೀಡಿಲ್ಲ' ಎಂದರು.

ಭಗವಾನ್ ರಾಮನ ಮೇಲಿನ ಅವರ ದ್ವೇಷ ನನಗೆ ಅರ್ಥವಾಗಿದೆ. ಆದರೆ, ಅವರು ಕನಿಷ್ಠ ಪಕ್ಷ ನಿಷಾದ್ ರಾಜ್, ಶಬರಿ ಮಾತಾ ಮತ್ತು ಮಹರ್ಷಿ ವಾಲ್ಮೀಕಿಗೆ ಸಮರ್ಪಿತವಾದ ದೇವಾಲಯಗಳಿಗೆ ಪೂಜೆ ಸಲ್ಲಿಸಬಹುದು. ಹಾಗೆ ಮಾಡಲು ಅವರ ಹಿಂಜರಿಕೆಯು ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲಿನ ಅವರ ದ್ವೇಷವನ್ನು ಸೂಚಿಸುತ್ತದೆ ಎಂದು ದೂರಿದರು.

'ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಒಳಜಗಳ ನಡೆಯುತ್ತಿದ್ದು, ಚುನಾವಣೆಯ ನಂತರ, ಈ ಎಲ್ಲ ಇಂಡಿಯಾ ಬಣದ ಪಾಲುದಾರರು ಪರಸ್ಪರ ಒಡೆದಾಡಿಕೊಳ್ಳುವುದನ್ನು ಕಾಣಬಹುದು. ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟ ಎಷ್ಟರ ಮಟ್ಟಿಗೆ ತಲುಪಿದೆಯೆಂದರೆ, ಈಗ ಅವರ ಉಪಮುಖ್ಯಮಂತ್ರಿ ಅಭ್ಯರ್ಥಿ 'ಜಂಗಲ್ ರಾಜ್' ವಿರುದ್ಧ ಮಾತನಾಡುತ್ತಿದ್ದಾರೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com