Delhi blast: ಪ್ರಮುಖ ಆರೋಪಿಯ ಸಹಚರನನ್ನು ಬಂಧಿಸಿದ NIA

ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ NIA ತಂಡ ಇಂದು ಶ್ರೀನಗರದಲ್ಲಿ ಅನೀಶ್ ಎಂದೂ ಕರೆಯಲ್ಪಡುವ ಜಾಸಿರ್ ಬಿಲಾಲ್ ವನಿಯನ್ನು ಬಂಧಿಸಿದ್ದು, ದೆಹಲಿಗೆ ಕರೆದೊಯ್ಯುತ್ತಿದೆ.
Delhi blast probe
ದೆಹಲಿ ಸ್ಫೋಟ
Updated on

ಶ್ರೀನಗರ: ದೆಹಲಿ ಕಾರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿಯ ಮತ್ತೊಬ್ಬ ಸಹಚರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸೋಮವಾರ ಬಂಧಿಸಿದೆ.

ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ NIA ತಂಡ ಇಂದು ಶ್ರೀನಗರದಲ್ಲಿ ಅನೀಶ್ ಎಂದೂ ಕರೆಯಲ್ಪಡುವ ಜಾಸಿರ್ ಬಿಲಾಲ್ ವನಿಯನ್ನು ಬಂಧಿಸಿದ್ದು, ದೆಹಲಿಗೆ ಕರೆದೊಯ್ಯುತ್ತಿದೆ.

ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿ ಜಾಸಿರ್ ದಾಳಿಯಲ್ಲಿ ಭಾಗಿಯಾಗಿರುವ ಗುಂಪಿಗೆ ತಾಂತ್ರಿಕ ಸಹಾಯ ನೀಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Delhi blast probe
Delhi Blast: ಹರಿಯಾಣದ ವೈದ್ಯೆ ಪ್ರಿಯಾಂಕಾ ಶರ್ಮಾ ವಿಚಾರಣೆ; ಯಾರು ಈಕೆ?

ಕಾರು ಬಾಂಬ್ ಸ್ಫೋಟಕ್ಕೆ ಮುಂಚಿನ ಅವಧಿಯಲ್ಲಿ ಆರೋಪಿ, ಡ್ರೋನ್‌ಗಳನ್ನು ಮಾರ್ಪಡಿಸುವ ಮತ್ತು ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸಿದ ಶಂಕೆ ವ್ಯಕ್ತವಾಗಿದೆ.

ತನಿಖಾ ಸಂಸ್ಥೆಯ ಪ್ರಕಾರ, ಜಾಸಿರ್, ಕಾರು ಸ್ಫೋಟ ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ನಂಬಲಾದ ಭಯೋತ್ಪಾದಕ ಉಮರ್ ಉನ್ ನಬಿಯ ಸಹಚರನಾಗಿದ್ದ ಎನ್ನಲಾಗಿದೆ.

ಕೆಂಪು ಕೋಟೆ ಬಳಿ ನಡೆದ ದಾಳಿಯ ಹಿಂದಿನ ವ್ಯಾಪಕ ಪಿತೂರಿಯನ್ನು ಬಹಿರಂಗಪಡಿಸುವಲ್ಲಿ ಈ ಬಂಧನವು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು NIA ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com