ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಭೇಟಿಯಾದ ಜಗದೀಪ್ ಧನಕರ್

ಧನಕರ್ ಅವರು ಕಳೆದ ಜುಲೈ 21 ರಂದು ಆರೋಗ್ಯ ಕಾರಣಗಳನ್ನು ನೀಡಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Jagdeep Dhankhar meets Vice President Radhakrishnan
ಜಗದೀಪ್ ಧನಕರ್ - ರಾಧಾಕೃಷ್ಣನ್
Updated on

ನವದೆಹಲಿ: ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮಂಗಳವಾರ ತಮ್ಮ ಉತ್ತರಾಧಿಕಾರಿ, ಉಪ ರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾದರು. ಇದು ಅವರೊಂದಿಗಿನ ಅವರ ಮೊದಲ ಔಪಚಾರಿಕ ಭೇಟಿಯಾಗಿದೆ.

ಧನಕರ್ ಅವರು ಕಳೆದ ಜುಲೈ 21 ರಂದು ಆರೋಗ್ಯ ಕಾರಣಗಳನ್ನು ನೀಡಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅವರ ಹಠಾತ್ ರಾಜೀನಾಮೆಯು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅವರ ರಾಜೀನಾಮೆಯಿಂದ ತೆರವಾದ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸಿ ಪಿ ರಾಧಾಕೃಷ್ಣನ್ ಅವರು ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದರು.

Jagdeep Dhankhar meets Vice President Radhakrishnan
'ಮಾಜಿ ಉಪ ರಾಷ್ಟ್ರಪತಿ ಎಲ್ಲಿ? ಅವರು "ಸಂಪೂರ್ಣ ಮೌನವಾಗಿದ್ದಾರೆಯೇ?; ಧನಕರ್ ರಾಜೀನಾಮೆ ಹಿಂದೆ 'ದೊಡ್ಡ ಕಥೆ' ಇದೆ!

ಉಪರಾಷ್ಟ್ರಪತಿಗಳ ಎನ್ಕ್ಲೇವ್‌ನ ಮೊದಲ ನಿವಾಸಿ ಧನಕರ್ ಅವರು ಇಂದು ಮಧ್ಯಾಹ್ನ ರಾಧಾಕೃಷ್ಣನ್ ಅವರನ್ನು ಭೇಟಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಪ್ರಮಾಣವಚನ ಸ್ವೀಕರಿಸಿದ ನಂತರ ಇದು ಇಬ್ಬರ ಮೊದಲ ಭೇಟಿಯಾಗಿದೆ.

ಧನಕರ್ ಅವರು ಕೊನೆಯ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ರಾಧಾಕೃಷ್ಣನ್ ಅವರನ್ನು ಅವರ ಪ್ರಮಾಣವಚನ ಸಮಾರಂಭದಲ್ಲಿ ಭೇಟಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com