ನನ್ನ ಹೆತ್ತವರಿಗೆ ಮಾನಸಿಕ ಕಿರುಕುಳ ನೀಡಿದ್ದರೆ ತನಿಖೆಗೆ ಆದೇಶಿಸಿ; ಕೇಂದ್ರ, ಬಿಹಾರ ಸರ್ಕಾರಕ್ಕೆ ತೇಜ್ ಪ್ರತಾಪ್ ಯಾದವ್ ಒತ್ತಾಯ

ರೋಹಿಣಿ ಆಚಾರ್ಯ, ಅವರ ಸಹೋದರ ತೇಜಸ್ವಿ ಯಾದವ್ ಮತ್ತು ಅವರ ಸಹಾಯಕ ಸಂಜಯ್ ಯಾದವ್ ಅವರಿಂದ ಅವಮಾನಕ್ಕೊಳಗಾಗಿರುವುದಾಗಿ ಸಾರ್ವಜನಿಕವಾಗಿ ಆರೋಪಿಸಿರುವ ಬೆನ್ನಲ್ಲೇ ತೇಜ್ ಪ್ರತಾಪ್ ಯಾದವ್ ಈ ಹೇಳಿಕೆ ನೀಡಿದ್ದಾರೆ.
Tej Pratap Yadav
ತೇಜ್ ಪ್ರತಾಪ್ ಯಾದವ್
Updated on

ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮಂಗಳವಾರ, ತಮ್ಮ ಪೋಷಕರು ಯಾವುದೇ ರೀತಿಯ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರೆ ಈ ಕುರಿತು ತನಿಖೆಗೆ ಆದೇಶಿಸುವಂತೆ ಕೇಂದ್ರ ಮತ್ತು ಬಿಹಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಮ್ಮ ಸಹೋದರಿ ರೋಹಿಣಿ ಆಚಾರ್ಯ, ಅವರ ಸಹೋದರ ತೇಜಸ್ವಿ ಯಾದವ್ ಮತ್ತು ಅವರ ಸಹಾಯಕ ಸಂಜಯ್ ಯಾದವ್ ಅವರಿಂದ ಅವಮಾನಕ್ಕೊಳಗಾಗಿರುವುದಾಗಿ ಸಾರ್ವಜನಿಕವಾಗಿ ಆರೋಪಿಸಿರುವ ಬೆನ್ನಲ್ಲೇ ತೇಜ್ ಪ್ರತಾಪ್ ಯಾದವ್ ಈ ಹೇಳಿಕೆ ನೀಡಿದ್ದಾರೆ.

ಮಹುವಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲು ಕಂಡ ಬಿಹಾರದ ಮಾಜಿ ಸಚಿವರು, ತಮ್ಮ ಸಹೋದರಿ ರೋಹಿಣಿ ಆಚಾರ್ಯ ಅವರನ್ನು ಬೆಂಬಲಿಸಿ ತಮ್ಮ ಜನಶಕ್ತಿ ಜನತಾದಳದ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

'ನನ್ನ ಪೋಷಕರಾದ ಲಾಲು ಪ್ರಸಾದ್ ಜಿ ಮತ್ತು ನನ್ನ ತಾಯಿಯನ್ನು ಮಾನಸಿಕ ಮತ್ತು ದೈಹಿಕ ಒತ್ತಡದಲ್ಲಿಡಲು ಕೆಲವು ಜನರು, ಜೈಚಂದ್‌ಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಸ್ವಲ್ಪವಾದರೂ ಸತ್ಯವಿದ್ದರೆ, ಇದು ನನ್ನ ಕುಟುಂಬದ ಮೇಲಿನ ದಾಳಿ ಮಾತ್ರವಲ್ಲ, ಆರ್‌ಜೆಡಿಯ ಆತ್ಮಕ್ಕೇ ನೇರ ಹೊಡೆತ. ಈ ವಿಷಯದಲ್ಲಿ ನಿಷ್ಪಕ್ಷಪಾತ, ಕಠಿಣ ಮತ್ತು ತಕ್ಷಣದ ತನಿಖೆ ನಡೆಸಬೇಕೆಂದು ನಾನು ಪ್ರಧಾನಿ, ಅಮಿತ್ ಶಾ ಜಿ ಮತ್ತು ಬಿಹಾರ ಸರ್ಕಾರವನ್ನು ವಿನಂತಿಸುತ್ತೇನೆ' ಎಂದಿದ್ದಾರೆ.

Tej Pratap Yadav
Bihar polls: ಸೋಲಿಗೆ ರೋಹಿಣಿ ಆಚಾರ್ಯ ಕಾರಣ ಆರೋಪ; ಸೋದರಿ ಮೇಲೆ ಚಪ್ಪಲಿ ಎಸೆದ ತೇಜಸ್ವಿ ಯಾದವ್!

'ಟಿಕೆಟ್ ವಿತರಣೆಯಲ್ಲಿನ ಅಕ್ರಮಗಳು, ಹಣಕ್ಕೆ ಬದಲಾಗಿ ಟಿಕೆಟ್ ನೀಡುವುದು ಮತ್ತು ಕೆಲವರ ರಾಜಕೀಯ ಪಿತೂರಿಯು ಹಲವು ವರ್ಷಗಳಿಂದ ಆರ್‌ಜೆಡಿಯನ್ನು ನಿರ್ಮಿಸಲು ಹಗಲಿರುಳು ತಮ್ಮನ್ನು ತಾವು ಅರ್ಪಿಸಿಕೊಂಡ ಆ ಸ್ತಂಭಗಳನ್ನು ನಿರ್ಲಕ್ಷಿಸಿದೆ. ಇಂದು, ದುರಾಸೆ ಮತ್ತು ಸ್ವಾರ್ಥದಿಂದ ಪ್ರೇರೇಪಿಸಲ್ಪಟ್ಟ ಇದೇ ಜೈಚಂದ್‌ಗಳು ಕುಟುಂಬ ಮತ್ತು ಸಂಘಟನೆ ಎರಡನ್ನೂ ನಾಶಪಡಿಸುತ್ತಿದ್ದಾರೆ' ಎಂದು ಅವರು ಬರೆದಿದ್ದಾರೆ.

'ನನ್ನ ತಂದೆ ಈಗಾಗಲೇ ಅಸ್ವಸ್ಥರಾಗಿದ್ದಾರೆ, ಅವರು ಅಂತಹ ಒತ್ತಡವನ್ನು ಸಂಪೂರ್ಣವಾಗಿ ಸಹಿಸಲು ಸಾಧ್ಯವಿಲ್ಲ. ಯಾರಾದರೂ ನನ್ನ ಸಹೋದರಿ, ನನ್ನ ತಾಯಿ ಅಥವಾ ನನ್ನ ತಂದೆಯ ಮೇಲೆ ಅನುಚಿತವಾಗಿ ವರ್ತಿಸಿದ್ದರೆ, ತಳ್ಳಿದ್ದರೆ ಅಥವಾ ಹಲ್ಲೆ ನಡೆಸಿದ್ದರೆ, ಅಸಹ್ಯಕರವಾಗಿ ನಿಂದಿಸಿದ್ದರೆ ಅಥವಾ ಮಾನಸಿಕ/ದೈಹಿಕ ಕಿರುಕುಳ ನೀಡಿದ್ದರೆ, ಸಂಜಯ್ ಯಾದವ್, ರಮೀಜ್ ನೇಮತ್ ಖಾನ್ ಮತ್ತು ಪ್ರೀತಮ್ ಯಾದವ್ ಅವರಂತಹ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು' ಎಂದು ಅವರು ಬರೆದಿದ್ದಾರೆ.

'ನಮ್ಮ ಸಹೋದರಿಗೆ ಆದ ಅವಮಾನವನ್ನು ನಾನು ಯಾವುದೇ ಸಂದರ್ಭದಲ್ಲೂ ಸಹಿಸುವುದಿಲ್ಲ. ಜೈಚಂದ್ ಅವರು ತಮ್ಮ ದುಷ್ಕೃತ್ಯಗಳಿಗೆ ಬೆಲೆ ತೆರಬೇಕಾಗುತ್ತದೆ. ಅವರು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ರೋಹಿಣಿ ದೀದಿಗೆ ಆದ ಘಟನೆ ನನ್ನನ್ನು ಬೆಚ್ಚಿಬೀಳಿಸಿದೆ. ನನಗೆ ಆದದ್ದನ್ನು ನಾನು ಸಹಿಸಿಕೊಂಡಿದ್ದೆ, ಆದರೆ ನನ್ನ ಸಹೋದರಿಗೆ ಆದ ಈ ಅವಮಾನವನ್ನು ನಾನು ಸಹಿಸಲಾರೆ. ಇದು ಸ್ವೀಕಾರಾರ್ಹವಲ್ಲ ಮತ್ತು ಅಸಹನೀಯ' ಎಂದು ಯಾದವ್ ಮತ್ತೊಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

'ನಾನು ಈ ಎಲ್ಲ ಜೈಚಂದ್‌ಗಳಿಗೆ ಹೇಳಲೇಬೇಕು. ಅವರು ನಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡರೆ, ಬಿಹಾರದ ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com